ಬ್ರಿಟನ್: ಪ್ಲಾಸ್ಟಿಕ್ ಚೀಲಗಳೇ ವೈದ್ಯರಿಗೆ ಅನಿವಾರ್ಯ
Team Udayavani, Apr 6, 2020, 12:30 PM IST
ಬ್ರಿಟನ್: ಕೋವಿಡ್-19 ಸೋಂಕಿನ ಕಾರಣಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಒಂದು ಜೀವ ರಕ್ಷಕ ಸಾಧನಗಳ ಕೊರತೆಯಾದರೆ ಮತ್ತೂಂದೆಡೆ ವೈದ್ಯರ ಸುರಕ್ಷತೆಗೆ ಬೇಕಾದ ಅಗತ್ಯ ವಸ್ತುಗಳ ಕೊರತೆ ಹೆಚ್ಚುತ್ತಿದೆ.
ಬಹಳಷ್ಟು ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ಸರಕಾರಗಳೂ ಕಂಗಾಲಾಗಿದೆ. ಸದ್ಯ ಅದೇ ಪರಿಸ್ಥಿತಿ ಲಂಡನ್ನಲ್ಲಿ ಇದೆ.
ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉದ್ಭವಿಸಿದೆ. ಇಂಗ್ಲೆಂಡ್ನ ಕೆಲವು ಆರೋಗ್ಯ ರಕ್ಷಣಾ ಕಾರ್ಯಕರ್ತರು ಎದುರಿಸುತ್ತಿರುವ ಸುರಕ್ಷಾ ಸಲಕರಣೆಗಳ ಕೊರತೆಯ ವಾಸ್ತವ ವನ್ನು ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ. ನಮ್ಮ ದೇಶದ ಅವ್ಯವಸ್ಥೆಯನ್ನು ನಾವು ಬಹಿರಂಗಗೊಳಿಸುವುದು ಇಷ್ಟವಿಲ್ಲ. ಆದಾಗ್ಯೂ ಪರಿಸ್ಥಿತಿ ಸುಧಾರಣೆ ಆಗಲಿ ಎಂಬ ನಿಟ್ಟಿನಲ್ಲಿ ಹೇಳಬೇಕಿದೆ ಎಂದು ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ. ವೈದರ ಭವಿಷ್ಯ ಮತ್ತು ಈಗಿನ ಅಗತ್ಯತೆಯನ್ನು ಮನಗಂಡು ಬಿಬಿಸಿ ಆವೈದ್ಯರ ಹೆಸರನ್ನು ಬದಲಾಯಿಸಿ ವರದಿ ಮಾಡಿದೆ.
ಇಂಗ್ಲೆಂಡಿನ ಬಹುತೇಕ ಆಸ್ಪತ್ರೆಗಳು ಈಗ ಕೊರೊನಾ ಆಸ್ಪತ್ರೆಯಾಗಿ ಬದಲಾಗಿವೆ. ತುರ್ತು ಸೇವೆ ಅಲ್ಲದೇ ಇರುವ ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ. ಕ್ಯಾನ್ಸರ್ ಚಿಕಿತ್ಸಾಲಯಗಳನ್ನು ಸಹ ರದ್ದುಪಡಿಸಲಾಗಿದೆ. ಇದರೊಂದಿಗೆ ಸಿಬಂದಿ ಕೊರತೆ, ಹಾಸಿಗೆಗಳ ಕೊರತೆ, ಜೀವ ರಕ್ಷಕಗಳ ಕೊರತೆ ಮತ್ತು ವೆಂಟಿಲೇಟರ್ಗಳ ಕೊರತೆಯೂ ಕಂಡುಬಂದಿದೆ.
ಎಚ್ಚೆತ್ತ ಸರಕಾರ
ಇದರಿಂದ ಸರಕಾರ ಎಚ್ಚೆತ್ತುಕೊಂಡಿದ್ದು, ವಿತರಣಾ ಸಮಸ್ಯೆಗಳನ್ನು ಒಪ್ಪಿಕೊಂಡಿದೆ. ಇದೀಗ ಸೇನೆಯ ನೆರವಿನೊಂದಿಗೆ ಉಪಕರಣಗಳನ್ನು ಪೂರೈಸಲು ಮುಂದಾಗಿದೆ ಎನ್ನಲಾಗಿದೆ.
ಒತ್ತಡದಲ್ಲಿ ವೈದ್ಯರು
ಕೋವಿಡ್-19 ರೋಗಿಗಳಿಗೆ ತಮ್ಮ ಸುರಕ್ಷೆಯ ಕಾಳಜಿಯೊಂದಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಸಿಬಂದಿ ಈಗಾಗಲೇ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಪ್ರತಿದಿನ 13 ಗಂಟೆಗಳ ಕಾಲ ಅನಾರೋಗ್ಯ ಪೀಡಿತ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಇವರು ಕ್ಲಿನಿಕಲ್ ತ್ಯಾಜ್ಯ ಚೀಲಗಳಿಂದ ತಯಾರಿಸಿದ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ವಿನ್ಯಾಸಗೊಳಿಸಿದ ರಕ್ಷಣಾ ಸಾಮಗ್ರಿಗಳನ್ನು ಬಳಸುತ್ತಾರೆ. ಸರಕಾರ ಸಾರ್ವಜನಿಕರಿಗೆ 2 ಮೀಟರ್ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಹೇಳಿದೆ. ಅಲ್ಲಿನ ವೈದ್ಯರಿಗೆ ಯಾವುದೇ ಪೂರಕ ಕ್ರಮಗಳಿಲ್ಲ. ವೈದ್ಯಕೀಯ ಸಲಕರಣೆಗಳ ಕೊರತೆಯಿಂದ ವೈದ್ಯರಿಗೆ ಟೋಪಿಗಳನ್ನು ಮತ್ತು ಮುಖಕ್ಕೆ ಮಾಸ್ಕ್ಗಳನ್ನು ಧರಿಸಲು ತಿಳಿಸಲಾಗಿದೆ. ಅವುಗಳು ತೂತಾಗಿದ್ದು, ಯಾವುದೇ ರಕ್ಷಣೆ ದೊರೆಯದು ಎಂಬ ಕಾರಣಕ್ಕೆ ಪ್ಲಾಸ್ಟಿಕ್ ಚೀಲಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ