ಗೋವಿನ ಸೆಗಣಿಯಿಂದ ಕಟ್ಟಡ ಪೇಂಟ್‌ ತಯಾರಿ; ಗೋ ಆಧಾರಿತ ಬಣ್ಣದಲ್ಲೇನೇನಿದೆ?

ಬೇಸ್‌ಪೇಂಟ್‌ ಆಧಾರದಲ್ಲಿಯೇ ಕಂಪೆನಿಗಳು ತಮ್ಮ ಬ್ರ್ಯಾಂಡ್‌ನ‌ಡಿ ಬಣ್ಣಗಳನ್ನು ತಯಾರಿಸುತ್ತವೆ.

Team Udayavani, Jan 14, 2022, 10:55 AM IST

ಗೋವಿನ ಸೆಗಣಿಯಿಂದ ಕಟ್ಟಡ ಪೇಂಟ್‌ ತಯಾರಿ; ಗೋ ಆಧಾರಿತ ಬಣ್ಣದಲ್ಲೇನೇನಿದೆ?

ಹುಬ್ಬಳ್ಳಿ: ದೇಸಿ ಗೋವಿನ ಸಗಣಿ ಬಳಸಿ ಪರಿಸರ ಹಾಗೂ ಆರೋಗ್ಯಸ್ನೇಹಿ ಗೋಡೆಗಳಿಗೆ ಬಳಿಯುವ ಮೂಲಬಣ್ಣ (ಬೇಸ್‌ಪೇಂಟ್‌) ತಯಾರಾಗಿದ್ದು, ಮಾರುಕಟ್ಟೆಗೆ ಕಾಲಿಡಲು ಸಜ್ಜಾಗುತ್ತಿದೆ. ಅದೇ ರೀತಿ ಗೋವಿನ ಸಗಣಿ, ಮೂತ್ರ ಬಳಸಿ ವಾಲ್‌ ಪುಟ್ಟಿ, ವಾಲ್‌ ಸೀಲಿಂಗ್‌  (ಪಿಒಪಿ), ಪ್ಲಾಸ್ಟರ್‌ ತಯಾರಿಕೆ ಯತ್ನ ನಡೆದಿದ್ದು, ಮೂಲಬಣ್ಣಕ್ಕೆ ಸೇರಿಸಲು ನೈಸರ್ಗಿಕವಾದ ಐದಾರು ಬಣ್ಣಗಳ ತಯಾರಿಕೆ ನಿಟ್ಟಿನಲ್ಲಿಯೂ ಮಹತ್ವದ ಹೆಜ್ಜೆ ಇರಿಸಲಾಗಿದೆ.

ದೇಸಿ ಗೋವಿನ ಸಂತತಿ ಸಂರಕ್ಷಣೆ-ಸಂವರ್ಧನೆ ಕಾಯಕದಲ್ಲಿ ತೊಡಗಿರುವ ಮಹಾರಾಷ್ಟ್ರದ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನ ದಲ್ಲಿ ಇಂತಹ ಯತ್ನಗಳು ಗರಿಗೆದರಿವೆ. ಕೆಲವು ಕಾರ್ಯಗತಗೊಂಡಿವೆ, ಇನ್ನೂ ಕೆಲವು ಪ್ರಯೋಗಾತ್ಮಕ ಹಂತದಲ್ಲಿವೆ. ದೇಸಿ ಗೋವು ಕೇವಲ ಹಾಲು ಕೊಡುವುದಕ್ಕೆ ಮಾತ್ರವಲ್ಲ, ಇತರೆ ಉತ್ಪನ್ನ ಗಳಿಂದಲೂ ರೈತರಿಗೆ ಆದಾಯ ತಂದುಕೊಡ ಬಲ್ಲದು ಎಂಬುದನ್ನು ಸಾಬೀತುಪಡಿಸಿರುವ ಶ್ರೀಮಠ, ಇದೀಗ ಮತ್ತೂಂದು ಹೆಜ್ಜೆ ಮುಂದಿರಿಸಿದೆ.

ಬರಡು ಗೋವು ಬದುಕಿಗೆ ಹೊರೆ ಎಂಬ ಅನಿಸಿಕೆ ಇಂದಿಗೂ ಅನೇಕ ರೈತರ ಮನದಲ್ಲಿದೆ. ಗೋವು ಎಂದಿಗೂ ಬದುಕಿಗೆ ಹೊರೆಯಾಗುವುದಿಲ್ಲ, ಜೀವನಕ್ಕೆ ಆಧಾರವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಶ್ರೀ ಕಾಡಸಿದ್ದೇಶ್ವರ ಮಠ ಈಗಾಗಲೇ ಗೋವಿನ ಮೂತ್ರ, ಸೆಗಣಿ ಬಳಸಿ ಗೋ ಅರ್ಕ್‌, ಪಿನಾಯಿಲ್‌, ವಿವಿಧ ಆಯುರ್ವೇದಿಕ್‌ ಉತ್ಪನ್ನಗಳನ್ನು ತಯಾರಿಸಿದೆ. ಮೃತಪಟ್ಟ ಗೋವು ಸಹ ಸಾವಯವ ಕೃಷಿಗೆ ಮಹತ್ವದ ರಸಾಯನ,
ಪೋಷಕಾಂಶಗಳನ್ನು ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಲಾಗಿದ್ದು, ಇಂದಿಗೂ ಶ್ರೀಮಠದ ಗೋಶಾಲೆ ಆವರಣದಲ್ಲಿ ಇಂತಹ ಹಲವು ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ.

ವಾಲ್‌ ಪುಟ್ಟಿ ತಯಾರಿಕೆ ಯತ್ನ: ಮನೆ ಇಲ್ಲವೆ ಇನ್ನಿತರ ಕಟ್ಟಡಗಳಿಗೆ ಬಣ್ಣ ಬಳಿಯುವ ವೇಳೆ ಬಳಸುವ ವಾಲ್‌ ಪುಟ್ಟಿಯನ್ನು ಗೋವಿನ ಸೆಗಣಿ ಹಾಗೂ ಮೂತ್ರದಿಂದ ತಯಾರಿಸುವ ನಿಟ್ಟಿನಲ್ಲಿ ಶ್ರೀಮಠ ಮುಂದಾಗಿದೆ. ವಾಲ್‌ ಪುಟ್ಟಿ ತಯಾರಿಕೆಗೆ ಬೇಕಾಗುವ ಯಂತ್ರಗಳ ವಿನ್ಯಾಸ ಕಾರ್ಯ ನಡೆದಿದ್ದು, ಇದು ಸಿದ್ಧಗೊಂಡರೆ ವಾಲ್‌ಪುಟ್ಟಿಯನ್ನು ಸಹ ಪರಿಸರ ಸ್ನೇಹಿಯಾಗಿ ತಯಾರಿಸಲಾಗುತ್ತದೆ. ಗೋವಿನ ಸೆಗಣಿ ಬಳಸಿ ಇಟ್ಟಿಗೆ ತಯಾರಿಸಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಬಣ್ಣ, ವಾಲ್‌ ಪುಟ್ಟಿ, ವಾಲ್‌ಸೀಲಿಂಗ್‌ ಇನ್ನಿತರ ವಸ್ತುಗಳ ತಯಾರಿಕೆಯ ಮಹತ್ವದ ಯತ್ನ ನಡೆದಿದೆ.

ಗೋ ಆಧಾರಿತ ಬಣ್ಣದಲ್ಲೇನೇನಿದೆ?
ಕಟ್ಟಡಗಳಿಗೆ ಬಳಿಯುವ ಬಣ್ಣದ ಬೇಸ್‌ ಪೇಂಟ್‌ ಒಂದೇ ಆಗಿರುತ್ತಿದ್ದು, ಅದನ್ನೇ ಬಳಸಿಕೊಂಡು ವಿವಿಧ ಬಣ್ಣವನ್ನು ತಯಾರಿಸಲಾಗುತ್ತದೆ. ಬೇಸ್‌ಪೇಂಟ್‌ ಆಧಾರದಲ್ಲಿಯೇ ಕಂಪೆನಿಗಳು ತಮ್ಮ ಬ್ರ್ಯಾಂಡ್‌ನ‌ಡಿ ಬಣ್ಣಗಳನ್ನು ತಯಾರಿಸುತ್ತವೆ. ಗೋ ಆಧಾರಿತವಾಗಿ ಬೇಸ್‌ಪೇಂಟ್‌ ತಯಾರಿಸಲಾಗಿದ್ದು, ಇದನ್ನು ಯಾವುದೇ ಬಣ್ಣಕ್ಕೂ ಬೆರೆಸಿಕೊಳ್ಳಬಹುದಾಗಿದೆ. ಇದರ ವಿಶೇಷವೆಂದರೆ ಪರಿಸರ ಸ್ನೇಹಿ. ಗೋ ಆಧಾರಿತ ಬೇಸ್‌ ಪೇಂಟ್‌ನಲ್ಲಿ ಶೇ.30 ದೇಸಿ ಹಸುಗಳ ಸೆಗಣಿ, ಸುಣ್ಣ, ಸೋಡಿಯಂ, ನೀರು ಬಳಕೆ ಮಾಡಲಾಗಿದೆ. ಜತೆಗೆ ಕಡಿಮೆ ಪ್ರಮಾಣದ ಕೆಲ ಕೆಮಿಕಲ್‌ಗ‌ಳನ್ನು ಬಳಕೆ ಮಾಡಲಾಗಿದೆ.

ಬೇಸ್‌ ಪೇಂಟ್‌ ತಯಾರಿಕೆಗೆ ಅಗತ್ಯವಿರುವ ಯಂತ್ರ ವಿನ್ಯಾಸಗೊಳಿಸಲಾಗಿದ್ದು, ತಯಾರಿಕೆ ಕಾರ್ಯ ಆರಂಭಗೊಂಡಿದೆ. ಗೋ ಆಧಾರಿತ ಮೂಲ ಬಣ್ಣವನ್ನು ಯಾವುದೇ ಬಣ್ಣದ ಜತೆಗೆ ಬೆರೆಸಿ ಬೇಕಾದ ಬಣ್ಣ ತಯಾರಿಸಿಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಕಟ್ಟಡಗಳಿಗೆ ಬಣ್ಣ ಬಳಿದ ನಂತರ ಸುಮಾರು 15-20 ದಿನಗಳವರೆಗೆ ಬಣ್ಣದ ವಾಸನೆ ಇರುತ್ತದೆ. ಕಟ್ಟಡದ ಒಳಗೆ ಹೋದರೆ ಬಣ್ಣದ ಘಾಟು ರಾಚುತ್ತದೆ. ಆದರೆ, ಗೋವಿನ ಸೆಗಣಿ ಬಳಸಿ ತಯಾರಿಸಲಾದ ಮೂಲಬಣ್ಣ ಬಳಸಿ ತಯಾರಿಸಿದ ಬಣ್ಣವನ್ನು ಕಟ್ಟಡಕ್ಕೆ ಬಳಿಸಿದರೆ ವಾಸನೆ ಇರದು. ಜತೆಗೆ ಉಷ್ಣಾಂಶ ನಿಯಂತ್ರಣ ಶಕ್ತಿಯನ್ನು ಇದು ಹೊಂದಿದೆಯಂತೆ.

ಗೋವಿನ ಸೆಗಣಿ ಬಳಸಿ ಮೂಲಬಣ್ಣ ತಯಾರಿಕೆ ಜತೆಗೆ ವಾಲ್‌ ಪುಟ್ಟಿ, ಪಿಒಪಿಯಂತಹ ವಸ್ತುಗಳನ್ನು ತಯಾರಿಸುವ ಯತ್ನ ನಡೆದಿದೆ. ಮೂಲಬಣ್ಣಕ್ಕೆ ಬೆರೆಸುವ
ವಿವಿಧ ಬಣ್ಣಗಳನ್ನು ನೈಸರ್ಗಿಕವಾಗಿ ತಯಾರಿಸುವ ಚಿಂತನೆ ಇದೆ. ಇದಕ್ಕೆ ಪೂರಕವಾಗಿ ಈಗಾಗಲೇ ಪ್ರಯೋಗಾತ್ಮಕ ಯತ್ನಗಳು ನಡೆಯುತ್ತಿವೆ. ದೇಸಿ ಗೋವು ಏನೆಲ್ಲಾ ಪ್ರಯೋಜನವಾಗಬಲ್ಲದು ಎಂಬುದನ್ನು ತೋರಿಸುವುದಕ್ಕೆ ಇದನ್ನು ಕೈಗೊಳ್ಳಲಾಗುತ್ತಿದೆ.
● ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.