ಹೊತ್ತಿ ಉರಿದ 40 ಜನರಿದ್ದ ಬಸ್ ; ತಪ್ಪಿದ ಭಾರೀ ಅನಾಹುತ
ಸಮಯಪ್ರಜ್ಞೆ ಜೀವ ಉಳಿಸಿತು ; ಬೆಂಗಳೂರಿನಿಂದ ತಿಪ್ಪಟ್ಟುವಿಗೆ ಹೊರಟಿದ್ದ ಖಾಸಗಿ ಬಸ್
Team Udayavani, May 9, 2019, 8:49 AM IST
ಬೆಂಗಳೂರು: ತಮಿಳುನಾಡು ಗಡಿ ಭಾಗದ ಶೂಲಗಿರಿ ಸಮೀಪ ಬೆಂಗಳೂರಿನಿಂದ ತೆರಳಿದ್ದ ಖಾಸಗಿ ಬಸ್ಸೊಂದು ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಘಟನೆ ನಡೆದಿದೆ. ಬಸ್ನಲ್ಲಿ 40 ಮಂದಿ ಪ್ರಯಾಣಿಕರಿದ್ದು ಅದೃಷ್ಟವಷಾತ್ ಎಲ್ಲರೂ ಪಾರಾಗಿದ್ದಾರೆ.
ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಪಕ್ಕದಲ್ಲಿ ಚಲಿಸುತ್ತಿದ್ದ ವಾಹನಗಳ ಚಾಲಕರು ತಿಳಿಸಿದ್ದು ಕೂಡಲೇ ಬಸ್ ನಿಲ್ಲಿಸಲಾಗಿದೆ. ಸಮಯಪ್ರಜ್ಞೆಯಿಂದಲಾಗಿ ಎಲ್ಲರೂ ನಿಮಿಷಗಳ ಒಳಗೆ ಬಸ್ನಿಂದ ಕೆಳಗಿಳಿದಿದ್ದಾರೆ. ಯಾರೊಬ್ಬರಿಗೂ ಗಾಯಗಳಾಗಿಲ್ಲ.ಆದರೆ ಬಸ್ ಸಂಪೂರ್ಣವಾಗಿ ಭಸ್ಮವಾಗಿದ್ದು, ಪ್ರಯಾಣಿಕರ ಲಗೇಜ್ಗಳೂ ಸಂಪೂರ್ಣವಾಗಿ ಸುಟ್ಟು ಹೋಗಿವೆ.
ಬೆಳಗಿನ ಜಾವ ಘಟನೆ ಸಂಭವಿಸಿದ್ದು, ಶೂಲಗಿರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.