ವಿರೋಧ ಕಟ್ಕೋಳ್ಳೋದು ನಾವು, ಅಧಿಕಾರ ಅನುಭವಿಸುವುದು ಬೇರೆಯವರು : ಸಿಎಂ ಇಬ್ರಾಹಿಂ
ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ: ಸ್ವಪಕ್ಷೀಯರ ಮೇಲೆ ಕಿಡಿಕಾರಿದ ಹಿರಿಯ ನಾಯಕ
Team Udayavani, Dec 17, 2019, 3:42 PM IST
ಬೆಂಗಳೂರು: ವಿರೋಧ ಮಾಡುವುದು ನಾವು, ಭಾಷಣ ಮಾಡುವುದು ನಾವು, ವಿರೋಧ ಕಟ್ಕೊಳ್ಳೋದು ನಾವು. ಆದರೆ ಅಧಿಕಾರ ಅನುಭವಿಸೋದಕ್ಕೆ ಖುರ್ಚಿ ಮೇಲೆ ಕೂರುವುದಕ್ಕೆ ಬೇರೆಯವರಾ? ಹೀಗೆಂದು ಪ್ರಶ್ನಿಸಿದವರು ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ.
ಪಕ್ಷದ ನಾಯಕರ ವಿರುದ್ಧ ಹರಿಹಾಯ್ದ ಅವರು, ಸತ್ತಿದ್ದೀವಿ ಅಂದಮೇಲೆ ಶವ ಸಂಸ್ಕಾರನಾದರೂ ಮಾಡಬೇಕಲ್ಲ, ಶವ ಸಂಸ್ಕಾರವೂ ಮಾಡದೇ ಸರ್ಕಲ್ ನಲ್ಲಿ ಶವ ಬಿಸಾಡಿ ಹೋದರೆ? ಅದಕ್ಕಿಂತ ಮನೆ ಸಾವೇ ಬೆಸ್ಟು ಅನಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೈಕಮಾಂಡ್ ಅಲ್ಪ ಸಂಖ್ಯಾತ ಸಮುದಾಯದ ಕೈ ಹಿಡಿಲಿಲ್ಲ. ವೇಣುಗೋಪಾಲ್ ನಮ್ಮ ಪರವಾಗಿ ಮಾತನಾಡಬಹುದಿತ್ತು. ಕಾಂಗ್ರೆಸ್ ನಾಯಕರೂ ಯಾರೂ ಮಾತನಾಡಲೇ ಇಲ್ಲ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ವಿರುದ್ದ ನನ್ನ ಸಿಟ್ಟಲ್ಲ, ಕಾಂಗ್ರೆಸ್ ಪಕ್ಷದ ವಿರುದ್ದ ನನ್ನ ಸಿಟ್ಟು ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಅಲ್ಪ ಸಂಖ್ಯಾತ ಸಮಾಜ 15% -16% ಇದೆ. ಆದರೆ ಅಲ್ಪ ಸಂಖ್ಯಾತ ಸಮಾಜ ಬೇರೆಯವರ ಜೊತೆಗೆ ಗುರುತಿಸಿಕೊಂಡಿದೆ. ಅನೇಕ ಕಡೆ ಯಡಿಯೂರಪ್ಪ ಗೆ ಅಲ್ಪ ಸಂಖ್ಯಾತ ಸಮಾಜ ಓಟು ಹಾಕಿದೆ. ಹಳೆ ಮೈಸೂರು ಭಾಗದಲ್ಲೂ ಕೂಡ ಏನಾಗಿದೆ ನೋಡಬಹುದು ಎಂದರು.
ಪಕ್ಷ ಕಟ್ಟುವಂಥದ್ದು ಕಷ್ಟ ಅಂತಲ್ಲ, ಆದರೆ ಮನಸ್ಸು ಮಾಡಬೇಕಷ್ಟೇ. ಪಕ್ಷ ಬಿಟ್ಟು ನಾವೆಲ್ಲಿ ಹೋಗಿದ್ದೇವೆ, ಎಷ್ಟು ದಿನ ಅಂತ ದುಡಿಯುವುದು, ಅದಕ್ಕೊಂದು ಲಿಮಿಟ್ ಇಲ್ಲವೇನ್ರಿ ಎಂದು ಹತಾಶೆಯಿಂದ ಪ್ರಶ್ನಿಸಿದರು.
ಚುನಾವಣೆಯಲ್ಲಿ ಕೆಲಸ ಮಾಡೋದಿಲ್ಲ ಅಂದು ನಾನು ಮೊದಲೇ ಹೇಳಿದ್ದೆ. ನನ್ನ ಕೈಲಾದಂತೆ ದೇವರು ಕೊಟ್ಟಂತಹ ಶಕ್ತಿ ಪ್ರಕಾರ ಮೊದಲೆಲ್ಲ ಕೆಲಸ ಮಾಡಿದ್ದೆ ಎಂದ ಹಿರಿಯ ಕಾಂಗ್ರೆಸ್ ನಾಯಕ, ವೀರಶೈವ ಸಮುದಾಯ ಯಡಿಯೂರಪ್ಪ ಕೈ ಹಿಡಿದಿದೆ, ಗೆದ್ದಿದ್ದಾರೆ. ಅವರಿಲ್ಲದೆ ಯಡಿಯೂರಪ್ಪ ಬಿಜೆಪಿ ಏನೂ ಅಲ್ಲ. ಜೆಡಿಎಸ್ ನವರಿಗೆ ಒಕ್ಕಲಿಗ ಶಕ್ತಿ ಇತ್ತು, ಆದರೆ ಈಗ ಕೈ ಹಿಡಿಲಿಲ್ಲ. ಎರಡು ಪ್ರಬಲ ಸಮುದಾಯಗಳು ಬಿಜೆಪಿ ಪರ ನಿಂತವು ಎಂದರು.
ವಾಸ್ತವಾಂಶ, ಸತ್ಯಾಂತ ಹೇಳುವುದಕ್ಕೆ ನಮ್ಮಲ್ಲಿ ಯಾರೂ ತಯಾರಿಲ್ಲ. ನಾವು ದುಡಿದು ಓಟು ಹಾಕಿಸಬೇಕು, ಆದರೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಾವಿಲ್ಲ. ಈ ಪದ್ದತಿ ಸರಿಯಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ