ಬುಧವಾರ ಕೇಂದ್ರ ಸಂಪುಟ ವಿಸ್ತರಣೆ ಸಾಧ್ಯತೆ : ಶಾ, ಜೆ.ಪಿ.ನಡ್ಡಾ ಜೊತೆ ಪ್ರಧಾನಿ ಸಮಾಲೋಚನೆ
Team Udayavani, Jul 5, 2021, 11:17 PM IST
ನವದೆಹಲಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ (ಜೂ.7) ನಡೆಯುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಈಗಾಗಲೇ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆಗೆ ಸಮಾಲೋಚನೆ ನಡೆಸಿದ್ದಾರೆ.
ಜೆಡಿಯು, ಪಶುಪತಿ ಕುಮಾರ್ ಪರಸ್ ನೇತೃತ್ವದ ಎಲ್ಜೆಪಿಯ ಸಿಡಿದ ಗುಂಪು, ಉ.ಪ್ರ.ದ ಕೆಲವು ಬಿಜೆಪಿ ಸಂಸದರು, ಜ್ಯೋತಿರಾಧಿತ್ಯ ಸಿಂಧಿಯಾ, ಅಸ್ಸಾಂ ಮಾಜಿ ಸಿಎಂ ಸರ್ವಾನಂದ ಸೊನೊವಾಲ್ ಸೇರಿದಂತೆ ಪ್ರಮುಖರ ಹೆಸರುಗಳು ಈಗಾಗಲೇ ಚಾಲ್ತಿಯಲ್ಲಿವೆ.
ಕರ್ನಾಟಕದಿಂದಲೂ ಕೆಲವು ಸಂಸದರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.