ದೇವರಮನೆ ಬಳಿ ಕಂದಕಕ್ಕೆ ಉರುಳಿದ ಕಾರು : ಪ್ರವಾಸಿಗರು ಪ್ರಾಣಾಪಾಯದಿಂದ ಪಾರು
Team Udayavani, Sep 17, 2021, 7:43 PM IST
ಕೊಟ್ಟಿಗೆಹಾರ: ದೇವರಮನೆ ದೇವಸ್ಥಾನದಿಂದ ಬಣಕಲ್ಗೆ ಬರುವ ಮಾರ್ಗ ಮಧ್ಯೆ ಕೋಗಿಲೆ ಗ್ರಾಮದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಉರುಳಿದ ಘಟನೆ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸನ ಮೂಲದ ಪ್ರವಾಸಿಗರು ದೇವರಮನೆ ದೇವಸ್ಥಾನಕ್ಕೆ ಹೋಗಿ ವಾಪಾಸ್ ಬರುವಾಗ ಇಳಿಜಾರಿನಲ್ಲಿ ಕಾರು ವೇಗ ಇದ್ದುದರಿಂದ ನಿಯಂತ್ರಣ ತಪ್ಪಿ ಕಾಫಿ ತೋಟದ ಕಂದಕಕ್ಕೆ ಉರುಳಿದೆ.
ಅಪಘಾತದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇದನ್ನೂ ಓದಿ :ನವೆಂಬರ್ ತಿಂಗಳ ಒಳಗೆ 10,000 ಜನರಿಗೆ ಉದ್ಯೋಗ : ಗೋವಾ ಮುಖ್ಯಮಂತ್ರಿ ಭರವಸೆ