ಚಂದ್ರಯಾನ – 2 ಕಕ್ಷೆ ಬದಲಾಯಿಸುವ ನಾಲ್ಕನೇ ಕಾರ್ಯ ಯಶಸ್ವಿ
ಚಂದ್ರನಲ್ಲಿ ಇಳಿಯುವ ಮುಂದಿನ ಪ್ರಕ್ರಿಯೆ ಹೇಗಿರುತ್ತೆ?
Team Udayavani, Aug 31, 2019, 5:18 PM IST
ಬೆಂಗಳೂರು: ಚಂದ್ರಯಾನ -2 ರ ಕಕ್ಷೆ ತಗ್ಗಿಸುವ ಕಾರ್ಯ ಯಶಸ್ವಿಯಾಗಿ ಶುಕ್ರವಾರ ನಡೆದಿದ್ದು, ಚಂದ್ರನಿಗೆ ನೌಕೆ ಇನ್ನೂ ಒಂದು ಸುತ್ತು ಹತ್ತಿರವಾಗಿದೆ. ರವಿವಾರ ಕೊನೆಯ ಹಂತದಲ್ಲಿ ಕಕ್ಷೆ ಸುತ್ತುವ ಕಾರ್ಯ ನಡೆಯಲಿದ್ದು, ಚಂದ್ರನಲ್ಲಿ ಇಳಿಯುವ ಕಾರ್ಯಕ್ಕೆ ಅಣಿಯಾಗಿದೆ.
ಮುಂದೇನು?
ಸೆ.1: ರವಿವಾರ ಮುಸ್ಸಂಜೆ 6ರಿಂದ 7 ಗಂಟೆ ಹೊತ್ತಿನಲ್ಲಿ ಕೊನೆಯ ಹಂತದ ಕಕ್ಷೆ ಇಳಿಸುವ ಕಾರ್ಯ ನಡೆಯಲಿದೆ. ಈ ವೇಳೆ ಚಂದ್ರನ ಅತಿ ಸನಿಹಕ್ಕೆ ನೌಕೆ ಹೋಗಲಿದ್ದು, ಗಂಟೆಗೆ 124 ಕಿ.ಮೀ. ವೇಗದಲ್ಲಿ ಅದು ಸುತ್ತಲಿದೆ. ಅಲ್ಲದೇ ಚಂದ್ರನಿಂದ ಸುಮಾರು 164 ಕಿ.ಮೀ. ದೂರದಲ್ಲಿ ನೌಕೆ ಇರಲಿದೆ.
ಸೆ.2: ಚಂದ್ರನ ಸುತ್ತುವ ನೌಕೆಯಿಂದ ಲ್ಯಾಂಡರ್ ಬೇರ್ಪಡಲಿದೆ. ಅಲ್ಲದೇ ಚಂದ್ರನ ಸನಿಹಕ್ಕೆ ಅಂದರೆ ಸುಮಾರು 100 ಕಿ.ಮೀಯಷ್ಟು ದೂರದಲ್ಲಿ ಇರಲಿದ್ದು, ತಾಂತ್ರಿಕ ಕಾರ್ಯಗಳನ್ನು ಕೈಗೊಳ್ಳಲಿದೆ.
ಸೆ.7: ಚಂದ್ರನ ಮೇಲೆ ಇಳಿಯುವ ಲ್ಯಾಂಡರ್ (ತನ್ನೊಳಗೆ ಚಲಿಸುವ 6 ಚಕ್ರದ ಯಂತ್ರ – ರೋವರ್ ಕೂಡ ಹೊಂದಿದೆ) ಚಂದ್ರನ ಮೇಲೆ ನಿಧಾನವಾಗಿ ಇಳಿಯುವ ಯತ್ನ ಮಾಡಲಿದೆ. ಇಸ್ರೋದ ಇತಿಹಾಸದಲ್ಲೇ ಈ ಕ್ರಿಯೆ ಮೊದಲ ಬಾರಿಗೆ ನಡೆಯಲಿದೆ. ಚಂದ್ರನ ದಕ್ಷಿಣ ಧ್ರುವದ ಅತಿ ಶೀತ ಪ್ರದೇಶದಲ್ಲಿ ಲ್ಯಾಂಡರ್ ಇಳಿಯಲಿದೆ. ಈ ಕ್ರಿಯೆ ಅತ್ಯಂತ ಸಂಕೀರ್ಣದ್ದಾಗಿದ್ದು, ಇಡೀ ಜಗತ್ತೇ ಇದನ್ನು ಎದುರು ನೋಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Bangaluru cafe ಸ್ಫೋಟದ ಸಂಚುಕೋರ ಎನ್ಐಎ ಬಲೆಗೆ: ಯಾರಿದು ಷರೀಫ್?
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು