ಚಿಕ್ಕಮಗಳೂರು : ಕಾಫಿನಾಡಲ್ಲಿ ಇಂದು 74 ಜನರಲ್ಲಿ ಸೋಂಕು ದೃಢ!
Team Udayavani, Jul 31, 2020, 7:28 PM IST
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ 74 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 990ಕ್ಕೇ ಏರಿಕೆಯಾಗಿದೆ.
ಸೋಂಕಿತರಲ್ಲಿ ಚಿಕ್ಕಮಗಳೂರು 28 ಮಂದಿ, ಕಡೂರು 16 ಮಂದಿ , ತರೀಕೆರೆ 17 ಮಂದಿ, ಅಜ್ಜಂಪುರ-ಕೊಪ್ಪ 4 ಮಂದಿ , ಶೃಂಗೇರಿ-ಎನ್.ಆರ್.ಪುರ 2 ಮಂದಿ ಮೂಡಿಗೆರೆಯಲ್ಲಿ 1 ಪ್ರಕರಣ ದಾಖಲಾಗಿದೆ.
ಇದುವರೆಗೆ ಒಟ್ಟು 434 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ, ಕೋವಿಡ್ ಸೋಂಕಿಗೆ ಒಟ್ಟು 21 ಜನ ಸಾವನ್ನಪ್ಪಿದ್ದಾರೆ, ಸದ್ಯ 529 ಸಕ್ರೀಯ ಪ್ರಕರಣಗಳು ಇವೆ.