ಮಕ್ಕಳಲ್ಲಿ ಮೊಬೈಲ್‌ ಗೀಳು; ಅನಾಹುತಗಳು ತಂದಿಟ್ಟ ಆತಂಕ

ಅತಿಯಾದ ಮೊಬೈಲ್‌ ಬಳಕೆ ನಿಯಂತ್ರಣಕ್ಕಿದೆ ಹಲವು ತಂತ್ರ

Team Udayavani, Feb 1, 2023, 8:00 AM IST

ಮಕ್ಕಳಲ್ಲಿ ಮೊಬೈಲ್‌ ಗೀಳು; ಅನಾಹುತಗಳು ತಂದಿಟ್ಟ ಆತಂಕ

ಮಂಗಳೂರು: ಕೊರೊನಾ ಸಂದರ್ಭದ ಆನ್‌ಲೈನ್‌ ತರಗತಿ, ವಿವಿಧ ರೀತಿಯ ಕುತೂಹಲ ಹೆಚ್ಚಳ, ಸುಲಭವಾಗಿ ಮೊಬೈಲ್‌ ಕೈಗೆ ಸಿಗುತ್ತಿರುವುದು ಮೊದಲಾದ ಕಾರಣಗಳಿಂದಾಗಿ ಇಂದು ಚಿಕ್ಕ ಮಕ್ಕಳೂ ಮೊಬೈಲ್‌, ಇಂಟರ್‌ನೆಟ್‌ನ್ನು ಅತಿಯಾಗಿ ಬಳಸುತ್ತಿದ್ದಾರೆ. ಅನೇಕ ಮಕ್ಕಳಿಗೆ ಇದೊಂದು ಚಟವಾಗಿದೆ. ಆದರೆ ಇದನ್ನು ತಡೆಯಲು ಬಲವಂತದ ಕ್ರಮ ಅನುಸರಿಸಿದರೆ ಅನಾಹುತವಾಗಬಹುದು. ಮೊಬೈಲ್‌ ಬಳಕೆಯನ್ನು ತಡೆಯುವ ಜತೆಗೆ ಮಕ್ಕಳು ಮೊಬೈಲ್‌ನ್ನು ಹೇಗೆ, ಎಷ್ಟು ಬಳಸಬೇಕು ಎಂಬ ತಿಳಿವಳಿಕೆ ಹೆತ್ತವರಿಗೆ ಬೇಕು ಎನ್ನುತ್ತಾರೆ ಮಕ್ಕಳ ಮಾನಸಿಕ ಆರೋಗ್ಯ ತಜ್ಞರು.

ಸಮಸ್ಯೆ ಇದೆ ಎಂಬ ಅರಿವು ಹೆತ್ತವರಿಗೆ ತಿಳಿಯಬೇಕು. ಇದೊಂದು ಚಟ, ವ್ಯಸನ. ಇದನ್ನು ನಿರ್ಲಕ್ಷಿಸಬಾರದು. ಊಟ, ನಿದ್ದೆ ಸರಿಯಾಗಿ ಮಾಡದಿರುವುದು, ಮನೆಯವರ ಜತೆಯೂ ಸರಿಯಾಗಿ ಬೆರೆಯ ದಿರುವುದು, ಏಕಾಂಗಿತನ ಬಯಸುವುದು, ದಿನದ ಹೆಚ್ಚಿನ ಹೊತ್ತು ಒತ್ತಡದಲ್ಲಿರುವುದು ಇತ್ಯಾದಿ ಇದರ ಸಾಮಾನ್ಯ ಲಕ್ಷಣಗಳು ಎನ್ನುತ್ತಾರೆ ಮಾನಸಿಕ ಆರೋಗ್ಯ ತಜ್ಞೆ ಡಾ| ರಮಿಳಾ ಶೇಖರ್‌.

ತಜ್ಞರ ಸಲಹೆಗಳು
– ಮಕ್ಕಳು ಕೋಣೆಯೊಳಗೆ ಬಾಗಿಲು ಹಾಕಿ ಮೊಬೈಲ್‌ ಬಳಸಲು ಅವಕಾಶ ನೀಡಬೇಡಿ.
– ಮಕ್ಕಳನ್ನು ರಕ್ಷಿಸಬೇಕಾದರೆ ಮೊಬೈಲ್‌ ಬಳಕೆ ಬಗ್ಗೆ ಹೆತ್ತವರೂ ತಿಳಿದುಕೊಳ್ಳಬೇಕು.
– ಮಕ್ಕಳು ಬಿಡುವಿನ ವೇಳೆ ಆಟ, ಇತರ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.
– ಮಕ್ಕಳ ನಡವಳಿಕೆಯ ಮೇಲೆ ಸಂಶಯ ಬಂದ ಕೂಡಲೇ ತಜ್ಞರ ಸಲಹೆ ಪಡೆಯಬೇಕು.
– ಮೊಬೈಲ್‌ನ ಆ್ಯಪ್‌ ಅಕೌಂಟ್‌(ನಿಯಂತ್ರಣ ಕ್ರಮ)ಬಗ್ಗೆ ಮಕ್ಕಳು, ಹೆತ್ತವರು ತಿಳಿದುಕೊಳ್ಳಬೇಕು.
– ಸಾಧ್ಯವಾದಷ್ಟು ಮಕ್ಕಳು ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು.

ಸೈಬರ್‌ ಭದ್ರತಾ ತಜ್ಞರ ಸಲಹೆಗಳು
– ಗೂಗಲ್‌ ಫ್ಯಾಮಿಲಿ ಲಿಂಕ್‌ನಂತಹ ಆ್ಯಪ್‌ಗ್ಳನ್ನು ಅಳವಡಿಸಿಕೊಳ್ಳುವುದರಿಂದ ಮೊಬೈಲ್‌ನಲ್ಲಿ ಮಕ್ಕಳಿಗೆ ಅಗತ್ಯವಿರುವ, ಸಂಬಂಧಪಟ್ಟ ಸುರಕ್ಷಿತವಾದ ಲಿಂಕ್‌ ಮಾತ್ರ ಬ್ರೌಸ್‌ ಮಾಡಲು ಸಾಧ್ಯವಾಗುತ್ತದೆ.
– ಆ್ಯಪ್‌ಗ್ಳ ಇಎಸ್‌ಆರ್‌ಬಿ ರೇಟಿಂಗ್‌ ಪ್ರಕಾರ ಮಾತ್ರ ಆ್ಯಪ್‌ಗ್ಳನ್ನು ಬಳಕೆ ಮಾಡಬೇಕು.
– ಸ್ಕ್ರೀನ್‌ ಟೈಮ್‌ ಆ್ಯಪ್‌ಗ್ಳಾದ ಆಫ್ ಟೈಮ್‌, ಕ್ವಾಲಿಟಿ ಟೈಮ್‌, ಆ್ಯಂಟೈ ಸೋಶಿಯಲ್‌ ಆ್ಯಪ್‌ ಮೊದಲಾದವುಗಳು ಮೊಬೈಲ್‌ ಬಳಕೆಯ ಸಮಯವನ್ನು ಮಿತಿಗೊಳಿಸುತ್ತದೆ.

ಆಂಡ್ರಾಯ್ಡ ಮೊಬೈಲ್‌ಗ‌ಳು ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿವೆ. ಕೆಲವು ಶಾಲೆಗಳು ಈಗಲೂ ಪಠ್ಯವನ್ನು ಮೊಬೈಲ್‌ನಲ್ಲೇ ಕಳುಹಿಸುತ್ತಾರೆ. ಸಂಗೀತ ತರಗತಿಗಳೂ ಮೊಬೈಲ್‌ನಲ್ಲಿ ನಡೆಯುತ್ತಿವೆ. ಹಾಗಾಗಿ ಹೆತ್ತವರು ಮಕ್ಕಳ ಮೊಬೈಲ್‌ ಬಳಕೆಗೆ ಅಡ್ಡಿ ಮಾಡುವುದಿಲ್ಲ. ಮೊಬೈಲ್‌ ಗೀಳಿನಿಂದಾಗಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆ ಉಂಟಾಗುತ್ತಿದೆ. ಶೇ.30ರಷ್ಟು ಮಂದಿ ಹೆತ್ತವರಿಗೆ ಆ್ಯಂಡ್ರಾಯ್ಡ ಮೊಬೈಲ್‌ ಬಳಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸುಮಾರು ಶೇ.40ರಷ್ಟು ಮಂದಿ ಹೆತ್ತವರಿಗೆ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯದ ಕೊರತೆ ಇದೆ. ಮಕ್ಕಳಲ್ಲಿ ಸೋಶಿಯಲ್‌ ಕನೆಕ್ಟೆಡ್‌ನೆಸ್‌ ಕಡಿಮೆಯಾಗಿ ಸಣ್ಣ ಒತ್ತಡ, ಸಮಸ್ಯೆ ಬಂದರೂ ಅನಾಹುತ ಮಾಡಿಕೊಳ್ಳುತ್ತಾರೆ. ಮಕ್ಕಳು, ಹೆತ್ತವರಿಗೆ ಅರ್ಥ ಮಾಡಿಕೊಡಲು ಸೂಕ್ತ ಥೆರಪಿ ಕೂಡ ಅಗತ್ಯ.
– ಡಾ| ರಮಿಳಾ ಶೇಖರ್‌, ಕೌನ್ಸೆಲಿಂಗ್‌ ರಿಸರ್ಚ್‌ ಆ್ಯಂಡ್‌ ಟ್ರೈನಿಂಗ್‌ ಸೆಂಟರ್‌, ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ತಜ್ಞೆ,

ವೀಡಿಯೋಗೇಮ್ಸ್‌, ಲೈಕ್‌, ಶೇರ್‌ ಮೊದಲಾದ ಚಟುವಟಿಕೆಗಳು ಮಕ್ಕಳನ್ನು ಮತ್ತೆ ಮತ್ತೆ ಅಂತಹ ಚಟುವಟಿಕೆಗಳಿಗೆ ಪ್ರೇರೇಪಿಸುತ್ತದೆ. ಅವರು “ವಚುರ್ವಲ್‌ ವರ್ಲ್ಡ್’ನ್ನೇ ಇಷ್ಟ ಪಡುವಂತೆ ಮಾಡುತ್ತದೆ. ಅದೇ ಲೋಕದಲ್ಲಿ ಅವರು ಜೀವಿಸುವ ಅನುಭವ ಪಡೆಯುತ್ತಿರುತ್ತಾರೆ. ವಾಸ್ತವ ಪ್ರಪಂಚದಲ್ಲಿ (ಮನೆ, ಪರಿಸರ) ಅವರಿಗೆ ಬೇಡದ ಸಣ್ಣ ವ್ಯತ್ಯಾಸ, ತೊಂದರೆ ಅಥವಾ ಕಷ್ಟಗಳು ಎದುರಾದರೂ ಅನಾಹುತ ಮಾಡಿಕೊಳ್ಳುವ ಅಪಾಯವಿರುತ್ತದೆ.
– ಡಾ| ಅನಂತಪ್ರಭು, ಸೈಬರ್‌ ಭದ್ರತಾ ತಜ್ಞರು, ಮಂಗಳೂರು

– ಸಂತೋಷ್ ಬೊಳ್ಳೆಟ್ಟು

ಟಾಪ್ ನ್ಯೂಸ್

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.