ಮಕ್ಕಳಲ್ಲಿ ಮೊಬೈಲ್‌ ಗೀಳು; ಅನಾಹುತಗಳು ತಂದಿಟ್ಟ ಆತಂಕ

ಅತಿಯಾದ ಮೊಬೈಲ್‌ ಬಳಕೆ ನಿಯಂತ್ರಣಕ್ಕಿದೆ ಹಲವು ತಂತ್ರ

Team Udayavani, Feb 1, 2023, 8:00 AM IST

ಮಕ್ಕಳಲ್ಲಿ ಮೊಬೈಲ್‌ ಗೀಳು; ಅನಾಹುತಗಳು ತಂದಿಟ್ಟ ಆತಂಕ

ಮಂಗಳೂರು: ಕೊರೊನಾ ಸಂದರ್ಭದ ಆನ್‌ಲೈನ್‌ ತರಗತಿ, ವಿವಿಧ ರೀತಿಯ ಕುತೂಹಲ ಹೆಚ್ಚಳ, ಸುಲಭವಾಗಿ ಮೊಬೈಲ್‌ ಕೈಗೆ ಸಿಗುತ್ತಿರುವುದು ಮೊದಲಾದ ಕಾರಣಗಳಿಂದಾಗಿ ಇಂದು ಚಿಕ್ಕ ಮಕ್ಕಳೂ ಮೊಬೈಲ್‌, ಇಂಟರ್‌ನೆಟ್‌ನ್ನು ಅತಿಯಾಗಿ ಬಳಸುತ್ತಿದ್ದಾರೆ. ಅನೇಕ ಮಕ್ಕಳಿಗೆ ಇದೊಂದು ಚಟವಾಗಿದೆ. ಆದರೆ ಇದನ್ನು ತಡೆಯಲು ಬಲವಂತದ ಕ್ರಮ ಅನುಸರಿಸಿದರೆ ಅನಾಹುತವಾಗಬಹುದು. ಮೊಬೈಲ್‌ ಬಳಕೆಯನ್ನು ತಡೆಯುವ ಜತೆಗೆ ಮಕ್ಕಳು ಮೊಬೈಲ್‌ನ್ನು ಹೇಗೆ, ಎಷ್ಟು ಬಳಸಬೇಕು ಎಂಬ ತಿಳಿವಳಿಕೆ ಹೆತ್ತವರಿಗೆ ಬೇಕು ಎನ್ನುತ್ತಾರೆ ಮಕ್ಕಳ ಮಾನಸಿಕ ಆರೋಗ್ಯ ತಜ್ಞರು.

ಸಮಸ್ಯೆ ಇದೆ ಎಂಬ ಅರಿವು ಹೆತ್ತವರಿಗೆ ತಿಳಿಯಬೇಕು. ಇದೊಂದು ಚಟ, ವ್ಯಸನ. ಇದನ್ನು ನಿರ್ಲಕ್ಷಿಸಬಾರದು. ಊಟ, ನಿದ್ದೆ ಸರಿಯಾಗಿ ಮಾಡದಿರುವುದು, ಮನೆಯವರ ಜತೆಯೂ ಸರಿಯಾಗಿ ಬೆರೆಯ ದಿರುವುದು, ಏಕಾಂಗಿತನ ಬಯಸುವುದು, ದಿನದ ಹೆಚ್ಚಿನ ಹೊತ್ತು ಒತ್ತಡದಲ್ಲಿರುವುದು ಇತ್ಯಾದಿ ಇದರ ಸಾಮಾನ್ಯ ಲಕ್ಷಣಗಳು ಎನ್ನುತ್ತಾರೆ ಮಾನಸಿಕ ಆರೋಗ್ಯ ತಜ್ಞೆ ಡಾ| ರಮಿಳಾ ಶೇಖರ್‌.

ತಜ್ಞರ ಸಲಹೆಗಳು
– ಮಕ್ಕಳು ಕೋಣೆಯೊಳಗೆ ಬಾಗಿಲು ಹಾಕಿ ಮೊಬೈಲ್‌ ಬಳಸಲು ಅವಕಾಶ ನೀಡಬೇಡಿ.
– ಮಕ್ಕಳನ್ನು ರಕ್ಷಿಸಬೇಕಾದರೆ ಮೊಬೈಲ್‌ ಬಳಕೆ ಬಗ್ಗೆ ಹೆತ್ತವರೂ ತಿಳಿದುಕೊಳ್ಳಬೇಕು.
– ಮಕ್ಕಳು ಬಿಡುವಿನ ವೇಳೆ ಆಟ, ಇತರ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.
– ಮಕ್ಕಳ ನಡವಳಿಕೆಯ ಮೇಲೆ ಸಂಶಯ ಬಂದ ಕೂಡಲೇ ತಜ್ಞರ ಸಲಹೆ ಪಡೆಯಬೇಕು.
– ಮೊಬೈಲ್‌ನ ಆ್ಯಪ್‌ ಅಕೌಂಟ್‌(ನಿಯಂತ್ರಣ ಕ್ರಮ)ಬಗ್ಗೆ ಮಕ್ಕಳು, ಹೆತ್ತವರು ತಿಳಿದುಕೊಳ್ಳಬೇಕು.
– ಸಾಧ್ಯವಾದಷ್ಟು ಮಕ್ಕಳು ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು.

ಸೈಬರ್‌ ಭದ್ರತಾ ತಜ್ಞರ ಸಲಹೆಗಳು
– ಗೂಗಲ್‌ ಫ್ಯಾಮಿಲಿ ಲಿಂಕ್‌ನಂತಹ ಆ್ಯಪ್‌ಗ್ಳನ್ನು ಅಳವಡಿಸಿಕೊಳ್ಳುವುದರಿಂದ ಮೊಬೈಲ್‌ನಲ್ಲಿ ಮಕ್ಕಳಿಗೆ ಅಗತ್ಯವಿರುವ, ಸಂಬಂಧಪಟ್ಟ ಸುರಕ್ಷಿತವಾದ ಲಿಂಕ್‌ ಮಾತ್ರ ಬ್ರೌಸ್‌ ಮಾಡಲು ಸಾಧ್ಯವಾಗುತ್ತದೆ.
– ಆ್ಯಪ್‌ಗ್ಳ ಇಎಸ್‌ಆರ್‌ಬಿ ರೇಟಿಂಗ್‌ ಪ್ರಕಾರ ಮಾತ್ರ ಆ್ಯಪ್‌ಗ್ಳನ್ನು ಬಳಕೆ ಮಾಡಬೇಕು.
– ಸ್ಕ್ರೀನ್‌ ಟೈಮ್‌ ಆ್ಯಪ್‌ಗ್ಳಾದ ಆಫ್ ಟೈಮ್‌, ಕ್ವಾಲಿಟಿ ಟೈಮ್‌, ಆ್ಯಂಟೈ ಸೋಶಿಯಲ್‌ ಆ್ಯಪ್‌ ಮೊದಲಾದವುಗಳು ಮೊಬೈಲ್‌ ಬಳಕೆಯ ಸಮಯವನ್ನು ಮಿತಿಗೊಳಿಸುತ್ತದೆ.

ಆಂಡ್ರಾಯ್ಡ ಮೊಬೈಲ್‌ಗ‌ಳು ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿವೆ. ಕೆಲವು ಶಾಲೆಗಳು ಈಗಲೂ ಪಠ್ಯವನ್ನು ಮೊಬೈಲ್‌ನಲ್ಲೇ ಕಳುಹಿಸುತ್ತಾರೆ. ಸಂಗೀತ ತರಗತಿಗಳೂ ಮೊಬೈಲ್‌ನಲ್ಲಿ ನಡೆಯುತ್ತಿವೆ. ಹಾಗಾಗಿ ಹೆತ್ತವರು ಮಕ್ಕಳ ಮೊಬೈಲ್‌ ಬಳಕೆಗೆ ಅಡ್ಡಿ ಮಾಡುವುದಿಲ್ಲ. ಮೊಬೈಲ್‌ ಗೀಳಿನಿಂದಾಗಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆ ಉಂಟಾಗುತ್ತಿದೆ. ಶೇ.30ರಷ್ಟು ಮಂದಿ ಹೆತ್ತವರಿಗೆ ಆ್ಯಂಡ್ರಾಯ್ಡ ಮೊಬೈಲ್‌ ಬಳಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸುಮಾರು ಶೇ.40ರಷ್ಟು ಮಂದಿ ಹೆತ್ತವರಿಗೆ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯದ ಕೊರತೆ ಇದೆ. ಮಕ್ಕಳಲ್ಲಿ ಸೋಶಿಯಲ್‌ ಕನೆಕ್ಟೆಡ್‌ನೆಸ್‌ ಕಡಿಮೆಯಾಗಿ ಸಣ್ಣ ಒತ್ತಡ, ಸಮಸ್ಯೆ ಬಂದರೂ ಅನಾಹುತ ಮಾಡಿಕೊಳ್ಳುತ್ತಾರೆ. ಮಕ್ಕಳು, ಹೆತ್ತವರಿಗೆ ಅರ್ಥ ಮಾಡಿಕೊಡಲು ಸೂಕ್ತ ಥೆರಪಿ ಕೂಡ ಅಗತ್ಯ.
– ಡಾ| ರಮಿಳಾ ಶೇಖರ್‌, ಕೌನ್ಸೆಲಿಂಗ್‌ ರಿಸರ್ಚ್‌ ಆ್ಯಂಡ್‌ ಟ್ರೈನಿಂಗ್‌ ಸೆಂಟರ್‌, ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ತಜ್ಞೆ,

ವೀಡಿಯೋಗೇಮ್ಸ್‌, ಲೈಕ್‌, ಶೇರ್‌ ಮೊದಲಾದ ಚಟುವಟಿಕೆಗಳು ಮಕ್ಕಳನ್ನು ಮತ್ತೆ ಮತ್ತೆ ಅಂತಹ ಚಟುವಟಿಕೆಗಳಿಗೆ ಪ್ರೇರೇಪಿಸುತ್ತದೆ. ಅವರು “ವಚುರ್ವಲ್‌ ವರ್ಲ್ಡ್’ನ್ನೇ ಇಷ್ಟ ಪಡುವಂತೆ ಮಾಡುತ್ತದೆ. ಅದೇ ಲೋಕದಲ್ಲಿ ಅವರು ಜೀವಿಸುವ ಅನುಭವ ಪಡೆಯುತ್ತಿರುತ್ತಾರೆ. ವಾಸ್ತವ ಪ್ರಪಂಚದಲ್ಲಿ (ಮನೆ, ಪರಿಸರ) ಅವರಿಗೆ ಬೇಡದ ಸಣ್ಣ ವ್ಯತ್ಯಾಸ, ತೊಂದರೆ ಅಥವಾ ಕಷ್ಟಗಳು ಎದುರಾದರೂ ಅನಾಹುತ ಮಾಡಿಕೊಳ್ಳುವ ಅಪಾಯವಿರುತ್ತದೆ.
– ಡಾ| ಅನಂತಪ್ರಭು, ಸೈಬರ್‌ ಭದ್ರತಾ ತಜ್ಞರು, ಮಂಗಳೂರು

– ಸಂತೋಷ್ ಬೊಳ್ಳೆಟ್ಟು

ಟಾಪ್ ನ್ಯೂಸ್

fire

ರಬ್ಬರ್‌ ತೋಟದಲ್ಲಿ ಬೆಂಕಿ ಆಕಸ್ಮಿಕ

accident 2

ರಾಸಾಯನಿಕ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ ಪಲ್ಟಿ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತಸ್ವೀಪ್‌ ಚಿತ್ತ!

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತ ಸ್ವೀಪ್‌ ಚಿತ್ತ!

ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!

ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!

ajit kumar rai maladi

ಬಂಟರು ಯಾನೆ ನಾಡವರನ್ನು ಪ್ರವರ್ಗ 2(ಎ)ಗೆ ಸೇರಿಸಿ- ನಿಗಮ ಸ್ಥಾಪಿಸಿ

ಹಂಪ್‌ನಲ್ಲಿ ಬಸ್‌ ಜಂಪ್‌: ಪ್ರಯಾಣಿಕನಿಗೆ ಗಂಭೀರ ಗಾಯ

ಹಂಪ್‌ನಲ್ಲಿ ಬಸ್‌ ಜಂಪ್‌: ಪ್ರಯಾಣಿಕನಿಗೆ ಗಂಭೀರ ಗಾಯ

ಭೂಮಾಲಕರ ಜತೆ ಸಂವಾದ: ರಾ.ಹೆ. 169 ಚತುಷ್ಪಥ ಕಾಮಗಾರಿ ಕೈಬಿಡುವ ಆತಂಕ

ಭೂಮಾಲಕರ ಜತೆ ಸಂವಾದ: ರಾ.ಹೆ. 169 ಚತುಷ್ಪಥ ಕಾಮಗಾರಿ ಕೈಬಿಡುವ ಆತಂಕ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

fire

ರಬ್ಬರ್‌ ತೋಟದಲ್ಲಿ ಬೆಂಕಿ ಆಕಸ್ಮಿಕ

accident 2

ರಾಸಾಯನಿಕ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ ಪಲ್ಟಿ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.