ಚಿಲುಮೆ ಮತ್ತೊಂದು ಹಗರಣ ಶೀಘ್ರ ಬಯಲು: ಡಿಕೆಶಿ ಬಾಂಬ್
Team Udayavani, Nov 29, 2022, 7:40 AM IST
ಶಿವಮೊಗ್ಗ: ಮತದಾರರ ಪಟ್ಟಿ ಅಕ್ರಮ ಆರೋಪಕ್ಕೊಳಗಾಗಿರುವ “ಚಿಲುಮೆ’ ಸಂಸ್ಥೆಯು ರಾಮನಗರ ಜಿಲ್ಲೆಯ ರೈತರ ಖಾತೆಗಳಿಗೆ ಲಕ್ಷಾಂತರ ರೂ. ಹಣ ಹಾಕಿ, ನಂತರ ವಾಪಸ್ ಪಡೆದಿದೆ ಎಂದು ಆರೋಪಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸೋಮವಾರ ಶರಾವತಿ ಸಂತ್ರಸ್ತರ ಜಾಗೃತಿ ಸಮಿತಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಚಿಲುಮೆ ಸಂಸ್ಥೆಯ ಮತ್ತೂಂದು ಹಗರಣವನ್ನು ಶೀಘ್ರದಲ್ಲೇ ಬಯಲಿಗೆಳೆಯಲಾಗುವುದು ಎಂದು ಹೇಳಿದ್ದಾರೆ.
ನಮ್ಮ (ರಾಮನಗರ) ಜಿಲ್ಲೆಯ ರೈತರ ಖಾತೆಗಳಿಗೆ ಲಕ್ಷ, 2 ಲಕ್ಷ, 20 ಸಾವಿರ, 70 ಸಾವಿರ ಹಣ ಹಾಕುತ್ತಿದ್ದಾರೆ. ಚಿಲುಮೆ ಸಂಸ್ಥೆಯವರು 10 ಸಾವಿರ ಬಿಟ್ಟು ವಾಪಸ್ ಪಡೆಯುತ್ತಿದ್ದಾರೆ. ಈ ಬಗ್ಗೆ ಆಮೇಲೆ ವಿವರವಾಗಿ ಮಾತನಾಡುವೆ. ಈ ಸಂಬಂಧ ತನಿಖೆಯೂ ನಡೆಯುತ್ತಿದೆ ಎಂದು ಹೇಳಿದರು.