ಅಡುಗೆ ಸಿಬಂದಿಗೂ ಇನ್ನು ಪಿಂಚಣಿ
Team Udayavani, Sep 25, 2019, 5:30 AM IST
ಬೆಂಗಳೂರು: ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಶಾಲೆಗಳಲ್ಲಿ ಕೆಲಸ ಮಾಡುವ ಅಡುಗೆ ಸಿಬಂದಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆ ಸೌಲಭ್ಯ ಒದಗಿಸಲು ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.
ಎಲ್ಲ ಅಡುಗೆ ಸಿಬಂದಿಯನ್ನು (ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರು) ಪಿಂಚಣಿ ಯೋಜನೆಯಲ್ಲಿ ಫಲಾನುಭವಿಗಳಾಗಿ ನೋಂದಾಯಿಸಲು, ಯೋಜನೆಯ ಸೌಲಭ್ಯ ಹೊಂದಲು ಅವಕಾಶವಿದೆ.
ಹೀಗಾಗಿ 2019-20ನೇ ಸಾಲಿನ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಸಿಬಂದಿಯನ್ನು ಫಲಾನುಭವಿಗಳಾಗಿಸಲು ಕ್ರಿಯಾಯೋಜನೆ ರಚಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ| ಜೆ.ಜಗದೀಶ್ ಸೂಚಿಸಿದ್ದಾರೆ.