ಕೋವಿಡ್ v/s ಕೋವಿಡ್: ಸರ್ಕಾರಿ ಶಾಲೆಗೆ ಆದ್ಯತೆ ಹೆಚ್ಚಳ
Team Udayavani, Sep 18, 2022, 5:50 PM IST
ಸರ್ಕಾರಿ ಶಾಲೆಯಲ್ಲಿ ಕಲಿತ ನಮಗೆಲ್ಲ ಸಿಗೋ ಕೆಲಸದ ಬಗ್ಗೆ, ಬದುಕಿನ ಬಗ್ಗೆ ಹಲವು ಹೆದರಿಕೆ, ಅತೀಯಾದ ಕಲ್ಪನೆಗಳು ಇರುವುದು ಸಹಜವಾಗಿತ್ತು. ಖಾಸಗಿ ಶಾಲಾ ಮಕ್ಕಳಂತೆ ಇಂಗ್ಲಿಷ್ ಬರುವುದಿಲ್ಲ, ಅವರ ತರಹ ಬಣ್ಣ – ಬಣ್ಣದ ಬಟ್ಟೆಗಳಿಲ್ಲ, ಬರಲು ಕಾರು – ಬೈಕ್ಗಳು ಕನಸು ಮಾತ್ರ ಆಗಿತ್ತು. ಆದರೆ, ಸಿನಿಮಾಗಳಲ್ಲಿ ಹೀರೋ ಒಬ್ಬ ನಾನು ಪಕ್ಕ ಲೋಕಲ್ ಸರ್ಕಾರಿ ಶಾಲೆ ಅನ್ನುವಾಗ ನಾವು ಹೀರೋಗಳಾಗುತ್ತಿದ್ದೆವು,
ಬಾಲ್ಯವನ್ನು ನಿಯಮಗಳ ಕಟ್ಟು-ಕಟ್ಟಳೆಗಳ ಪರಿದಿಯೊಳಗೆ ತರದೆ ಆ ಬಾಲ್ಯವನ್ನು ಅದು ಬಂದಂತೆ ಆಸ್ವಾದಿಸಲು ಸಾಧ್ಯವಾಗುತ್ತಿದ್ದದ್ದು ಅದೇ ಸರ್ಕಾರಿ ಶಾಲೆಗಳಲ್ಲಿ ಅಂದರೆ ತಪ್ಪಿಲ್ಲ. ಸೋ ಕಾಲ್ಡ್ ಹೈಜೀನ್ ಗಳ ಎದುರು ಮನ ಬಂದಂತೆ ಮಣ್ಣಲ್ಲಿ ಹೊರಳಿ ಆಡಿ ನೀಲಿ-ಬಿಳಿ ಅಂಗಿ ಕೆಂಪಾಗುತ್ತಿದ್ದದ್ದು – ಅಮ್ಮ ಅದನ್ನು ನೋಡಿ ದಿನಾ ಬೈದು ಒಗೆಯುತ್ತಿದ್ದದ್ದು…, ಅಷ್ಟು ಸಣ್ಣವರಿದ್ದಾಗಲೇ ಲವ್ ಅನ್ನೋ ಶಬ್ದದ ಸ್ಪೆಲ್ಲಿಂಗ್ ತಿಳಿಯದಿದ್ರೂ ತಮಾಷೆ ಮಾಡ್ತಾ – ಮುಗ್ದ ಕನಸುಗಳಲ್ಲಿ ತೇಲುತ್ತಿದ್ದ ಕಾಲ ಅದು. ಕೇವಲ ನೆನಪಲ್ಲ ದೂರ ನಿಂತು ನೋಡಿದಾಗ ಅದೇ ಆಧುನಿಕ ಬಾಲ ಗೋಕುಲ ಏನಂತೀರಿ ?
ಆದರೆ, ದೇಶದಲ್ಲಿ ಸರ್ಕಾರಿ ಶಾಲೆಗಿಂತ ಹೆಚ್ಚು ಖಾಸಗಿ ಶಾಲೆಗಳು ಹೆಚ್ಚಿವೆ. ಕೋವೀಡ್ – 19 ಕಾರಣ ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ 10,000ಕ್ಕೂ ಹೆಚ್ಚು ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ. ಆದರೆ ವಿಪರ್ಯಾಸವೆಂದರೆ ಆ ನಂತರ ಖಾಸಗಿ ಶಾಲೆಗಳನ್ನು ತೆರೆಯಲು ಬಂದಿರುವ ಅರ್ಜಿಗಳು ಅದಕ್ಕಿಂತ 4 ಪಟ್ಟು ಹೆಚ್ಚಾಗಿದೆ.
ಇತರ ರಾಜ್ಯಗಳಿಗಿಂತ ಉತ್ತರ ಪ್ರದೇಶದಲ್ಲಿ ಹೊಸ ಖಾಸಗಿ ಶಾಲೆಗಳನ್ನು ತೆರೆಯಲು ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಹೊಂದಿದ್ದು, ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿದೆ. ಇದರ ಜೊತೆಗೆ 2018-19ಕ್ಕೆ ಹೋಲಿಸಿದರೆ 2020-21ರಲ್ಲಿ ದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021ರಲ್ಲಿ 5,406 ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ. ಹಾಗೂ 2020ರಲ್ಲಿ 5,052 ಶಾಲೆಗಳನ್ನು ಮುಚ್ಚಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಈಗ ಹೊಸ ಖಾಸಗಿ ಶಾಲೆಗಳನ್ನು ತೆರೆಯಲು ಅರ್ಜಿಗಳು 4.38 ಪಟ್ಟು ಹೆಚ್ಚಾಗಿದೆ. ಆದರೆ, ಸರ್ಕಾರಿ ಶಾಲೆಗಳೂ ಚೇತರಿಕೆಯನ್ನು ಕಾಣುತ್ತಿವೆ. ಅದಕ್ಕೆ ಉದಾಹರಣೆ ಎಂಬಂತೆ, ಕೇಂದ್ರ ಶಿಕ್ಷಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2021ರಲ್ಲಿ ದೇಶಾದ್ಯಂತ 1.85 ಕೋಟಿ ಹೊಸ ಪ್ರವೇಶಗಳು 1ನೇ ತರಗತಿಯಲ್ಲಿ ನಡೆದಿವೆ.
ದೇಶದಲ್ಲಿ 9ರಿಂದ 10ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಡ್ರಾಪ್ಔಟ್ 2021ರಲ್ಲಿ 14.6 ಶೇಕಡಕ್ಕೆ ಇಳಿದಿದೆ, ಇದು 2020ರಲ್ಲಿ 16.1% ಆಗಿತ್ತು ಎಂದು ಕೇಂದ್ರ ಶಿಕ್ಷಣ ಇಲಾಖೆ ತಿಳಿಸಿದೆ. ಈ ಅಂಕಿ-ಅಂಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ ಮತ್ತು ಪತ್ರಿಕಾ ವರದಿಗಳಿಂದ ಪಡೆಯಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಶಾಲೆಗಳಿಗೆ ದಾಖಲಾಗದ ಮಕ್ಕಳನ್ನು ಗುರುತಿಸಲು ಅಧಿಕಾರಿಗಳು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದವರಿಗೆ ಆರ್ಥಿಕ ಬಿಕ್ಕಟ್ಟು, ಅನಾರೋಗ್ಯ ಮತ್ತು ಕುಟುಂಬ ಸಮಸ್ಯೆಗಳು ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗುಳಿಯಲು ಕಾರಣ ಎಂದು ತಿಳಿಯಿತು.
ದೇಶದಲ್ಲಿ ಸರ್ಕಾರಿ ಶಾಲೆಗಳ ಸುಸ್ಥಿತಿಗೆ ಸರ್ಕಾರ ಪ್ರಯತ್ನ ಮಾಡುತ್ತದೆಯಾದರೂ ತಳಮಟ್ಟದ ಆಧಿಕಾರಿಗಳು ಮತ್ತು ಆಡಳಿತ ವ್ಯವಸ್ಥೆ ಭ್ರಷ್ಟಾಚಾರ ಮುಕ್ತವಾಗಿ ಕ್ರಮ ಕೈಕೊಂಡು ಕಾರ್ಯೋನ್ಮುಕರಾದಾಗ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ಕೊಡುವುದು ಬಿಡಿ ಅವುಗಳಷ್ಟು ಉನ್ನತ ಸ್ಥಿತಿಗೆ ತಲುಪಲೂ ಕಷ್ಟವಾದೀತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಹಾ! ಈ ಕಾಶಿ ಹಲ್ವಾ ಏನ್ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….
ಗಲ್ಫ್ ಮರುಭೂಮಿಯಲ್ಲಿ 2 ವರ್ಷ ನರಕಯಾತನೆ: ʼಆಡುಜೀವಿತಂʼ ಸಿನಿಮಾದ ನಿಜವಾದ ಹೀರೋ ಇವರೇ…
ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್ ಇಂಡಿಯಾ ವರ್ಲ್ಡ್ವೈಡ್ ?
MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ