ಸ್ವೀಡನ್: ಕೋವಿಡ್ ಗೆ ಬಲಿಯಾದವರಲ್ಲಿ ಹಿರಿಯರೇ ಹೆಚ್ಚು

ವೃದ್ಧರನ್ನು ಅವಗಣಿಸಿದ ಸರಕಾರ

Team Udayavani, May 20, 2020, 11:14 AM IST

ಸ್ವೀಡನ್: ಕೋವಿಡ್ ಗೆ ಬಲಿಯಾದವರಲ್ಲಿ ಹಿರಿಯರೇ ಹೆಚ್ಚು

ಸ್ಟಾಕ್‌ಹೋಮ್‌: ಅಪಾಯದ ಗುಂಪುಗಳನ್ನು ರಕ್ಷಿಸುವುದಕ್ಕೆ ತನ್ನ ಗರಿಷ್ಠ ಆದ್ಯತೆಯೆಂದು ಸರಕಾರ ಹೇಳಿದ್ದರೂ ಸ್ವೀಡನ್‌ನಲ್ಲಿ ಕೋವಿಡ್‌ಗೆ ಈವರೆಗೆ ಬಲಿಯಾದ ಸುಮಾರು 3,700 ಮಂದಿಯ ಪೈಕಿ ಹೆಚ್ಚಿನವರು 70 ವರ್ಷ ಮೇಲ್ಪಟ್ಟ ವಯಸ್ಸಿನವರು. ಸ್ವೀಡನ್‌ ಪ್ರಧಾನಿ ತನ್ನ ದೇಶ ಹಿರಿಯ ಜೀವಗಳನ್ನು ರಕ್ಷಿಸುವುದಕ್ಕೆ ಸಾಕಷ್ಟು ಪ್ರಯತ್ನಗಳನ್ನು ನಡೆಸಿಲ್ಲವೆಂದು ಈಗ ಒಪ್ಪಿಕೊಂಡಿದ್ದಾರೆ.

ಉತ್ತರ ಸ್ಟಾಕ್‌ಹೋಮ್‌ನ ಕೇರ್‌ ಹೋಮ್‌ನಲ್ಲಿ ರೆಝಾ ಎಂಬವರು ಕೋವಿಡ್‌ಗೆ ಬಲಿಯಾದ ದಿನ ಒಬ್ಬ ವೈದ್ಯನೂ ಅವರನ್ನು ನೋಡಿರಲಿಲ್ಲ. ಆತ ಸಾವಿಗೀಡಾಗುವ ಮುನ್ನ ನೋವು ನಿವಾರಕವನ್ನು ನೀಡಲಾಗಿತ್ತು. ಆದರೆ ಆಮ್ಲಜನಕವನ್ನು ನೀಡಿರಲಿಲ್ಲ. ಸಿಬಂದಿ ಆತನನ್ನು ಆಸ್ಪತ್ರೆಗೆ ಒಯ್ಯುವುದಕ್ಕೆ ಆ್ಯಂಬುಲೆನ್ಸ್‌ ಅನ್ನು ಕರೆಸಲಿಲ್ಲ ಎಂದು ಕೇರ್‌ಹೋಮ್‌ನ ನರ್ಸ್‌ ಹೇಳಿದ್ದಾರೆ.

ಒಂದು ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ಸ್ವೀಡನ್‌ ಹೆಚ್ಚಿನ ಯೂರೋಪ್‌ ದೇಶಗಳಂತೆ ಸಮಾಜದಲ್ಲಿ ಹೆಚ್ಚು ನಿರ್ಬಂಧಗಳನ್ನು ಹೇರಿರಲಿಲ್ಲ. ಸ್ವೀಡನ್‌ ಕೇರ್‌ ಹೋಮ್‌ಗಳಿಗೆ ಭೇಟಿಗಳನ್ನು ಮಾ. 31ರಂದು ನಿಷೇಧಿಸಿತ್ತು. ಆದರೆ ಸುರಕ್ಷಾ ಉಡುಪುಗಳು ತೀರಾ ತಡವಾಗಿ ಆಗಮಿಸಿದವು.

ಈಗ ಕೇರ್‌ಹೋಮ್‌ಗಳ ಹೆಚ್ಚು ಹೆಚ್ಚು ಸಿಬಂದಿ ಪ್ರಾದೇಶಿಕ ಆರೋಗ್ಯ ಅಧಿಕಾರಿಗಳು ವಿಧಿಸಿದ್ದ ಶಿಷ್ಟಾಚಾರಗಳನ್ನು ಟೀಕಿಸಲು ಮುಂದಾಗುತ್ತಿದ್ದಾರೆ. ಈ ಶಿಷ್ಟಾಚಾರಗಳನ್ವಯ ನಿವಾಸಿಗಳನ್ನು ಆಸ್ಪತ್ರೆಗಳಿಗೆ ವರ್ಗಾಯಿಸುವುದನ್ನು ನಿರುತ್ತೇಜಿಸಲಾಗುತ್ತಿದೆ ಮತ್ತು ಕೇರ್‌ಹೋಮ್‌ನ ನರ್ಸಿಂಗ್‌ ಸಿಬಂದಿ ವೈದ್ಯರ ಅನುಮತಿಯಿಲ್ಲದೆ ರೋಗಿ ಪ್ರಾಣಾಂತಿಕ ಸ್ಥಿತಿಗೆ ತಲಪಿದ್ದರೂ ಆಮ್ಲಜನಕ ನೀಡುವಂತಿಲ್ಲ.

“ರೋಗಿ 65 ವರ್ಷ ವಯಸ್ಸಿನವನೇ ಆಗಿದ್ದರೂ ಮತ್ತು ಇನ್ನೂ ಹಲವು ವರ್ಷಗಳ ಕಾಲ ಜೀವಿಸಬಲ್ಲನಾಗಿದ್ದರೂ ಆಸ್ಪತ್ರೆಗೆ ಯಾರನ್ನೂ ಕಳುಹಿಸಬಾರದೆಂದು ನಮಗೆ ಹೇಳಲಾಗಿತ್ತು’ ಎಂದು ಸೋಂಕು ದೇಶಕ್ಕೆ ಕಾಲಿಟ್ಟ ಹಂತದಲ್ಲಿ ಉತ್ತರ ಸ್ಟಾಕ್‌ಹೋಮ್‌ನ ಸುತ್ತಮುತ್ತ ಹಲವು ಕೇರ್‌ ಹೋಮ್‌ಗಳಲ್ಲಿ ಕೆಲಸ ಮಾಡಿದ್ದ ನರ್ಸ್‌ ಲತಿಫಾ ಲಾಫ‌ನ್‌ಬರ್ಗ್‌ ಹೇಳುತ್ತಾರೆ.

ಕೆಲವರು ತಮ್ಮ ಪ್ರೀತಿಪಾತ್ರರೊಂದಿಗೆ ಇನ್ನೂ ಹಲವು ವರ್ಷಗಳ ಕಾಲ ಜೀವಿಸಬಲ್ಲರಾಗಿದ್ದರು. ಆದರೆ ಅವರನ್ನು ಆಸ್ಪತ್ರೆಗೆ ಕಳುಹಿಸುವುದಕ್ಕೆ ಅನುಮತಿಸದೆ ಈ ಅವಕಾಶದಿಂದ ವಂಚಿಸಲಾಯಿತು.ಅವರು ಉಸಿರಾಡಲಾಗದೆ ಸಾಯುತ್ತಿದ್ದರು. ಅದನ್ನು ಪಕ್ಕದಲ್ಲಿ ಸುಮ್ಮನೆ ನಿಂತು ನೋಡುವುದು ಅತ್ಯಂತ ಅಸಹನೀಯವೆನಿಸುತ್ತಿತ್ತು’ ಎಂದವರು ವ್ಯಥೆ ವ್ಯಕ್ತಪಡಿಸುತ್ತಾರೆ.

ಕೋವಿಡ್‌-19 ತೀವ್ರರೂಪದಲ್ಲಿ ಹಬ್ಬಿದ್ದ ವೇಳೆ ತಾನು ಅವಧಿ ಮೀರಿ ದುಡಿಯುತ್ತಿದ್ದಾಗಲೂ ಕೋವಿಡ್‌ಗೆ ಸಂಬಂಧಿಸಿ ಹಿರಿಯ ಜೀವಿಗಳಿದ್ದ ಕೇರ್‌ ಹೋಮ್‌ಗಳಿಂದ ತನಗೆ ಒಂದೇ ಒಂದು ಕರೆ ಬಂದಿರಲಿಲ್ಲವೆಂದು ಹೆಸರು ತಿಳಿಸಲಿಚ್ಛಿಸದ ಸ್ಟಾಕ್‌ಹೋಮ್‌ನ ಇನ್ನೋರ್ವ ಪ್ಯಾರಾಮೆಡಿಕ್‌ ಹೇಳಿದರು.

ಇನ್ನಷ್ಟು ರೋಗಿಗಳಿಗೆ ಆಸ್ಪತ್ರೆಯ ಚಿಕಿತ್ಸೆ ಲಭ್ಯವಾಗುತ್ತಿದ್ದಲ್ಲಿ ಅಥವಾ ಕೇರ್‌ ಹೋಮ್‌ ಸಿಬಂದಿಗೆ ಆಮ್ಲಜನಕವನ್ನು ಪ್ರಯೋಗಿಸುವ ಜವಾಬ್ದಾರಿಯನ್ನು ವಹಿಸುತ್ತಿದ್ದಲ್ಲಿ ಬಹಳಷ್ಟು ಜೀವಗಳು ಉಳಿಯುತ್ತಿದ್ದವು ಎಂದು ಸ್ವೀಡನ್‌ನ ಖಾಸಗಿ ಸಮಾಲೋಚನ ಸಂಸ್ಥೆ ಮಿಕಾಯೆಲ್‌ ಜಾಲಿದ್‌ ಹೇಳಿದೆ. “ಯಾವುದೇ ನೆರವಿಲ್ಲದೆ ಶೇ. 20 ಮಂದಿ ಬದುಕುಳಿಯಬಲ್ಲರಾದರೆ ಪೂರಕ ಆಮ್ಲಜನಕದೊಂದಿಗೆ ಅಷ್ಟೇ ಮಂದಿ ಬದುಕುಳಿಯುತ್ತಿದ್ದರೆಂದು ಊಹಿಸಬಹುದಾಗಿದೆ ಎಂದು ಅದು ಬೆಟ್ಟು ಮಾಡಿದೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.