ಕೋವಿಡ್-19 ವೈರಸ್‌ : ಕ್ರೀಡೆಯನ್ನು ಊಹಿಸಲು ಅಸಾಧ್ಯ


Team Udayavani, Apr 27, 2020, 6:00 AM IST

ಕೋವಿಡ್-19 ವೈರಸ್‌ : ಕ್ರೀಡೆಯನ್ನು ಊಹಿಸಲು ಅಸಾಧ್ಯ

ಕೋವಿಡ್-19 ವೈರಸ್‌ ಉಂಟುಮಾಡುತ್ತಿರುವ ಹಾನಿಯನ್ನು ಊಹಿಸಲು ಸಾಧ್ಯವಿಲ್ಲ. ಇದು ಕೇವಲ ಭಾರತ ದೇಶಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಪ್ರಬಲ ಹೊಡೆತ ನೀಡುತ್ತಿದೆ. ಕ್ರೀಡೆ ಮಾತ್ರವಲ್ಲದೆ ವಿಶ್ವದ ಪ್ರತಿಯೊಂದು ಚಟುವಟಿಕೆಗೆ ಇದರಿಂದ ಅಪಾರ ಹಾನಿಯಾಗುತ್ತಿದೆ. ಈ ವೈರಸ್‌ನಿಂದ ಪಾರಾಗಲು ಹಲವಾರು ಕಟ್ಟುನಿಟ್ಟಿನ ನಿರ್ಬಂಧವನ್ನು ಸರಕಾರ ವಿಧಿಸಿದೆ. ಭವಿಷ್ಯದಲ್ಲಿಯೂ ವೈರಸ್‌ ಹರಡದಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಹಲವಾರು ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇಂತಹ ನಿಯಮಗಳ ಬಗ್ಗೆ ಇಲ್ಲಿ ಅವಲೋಕನ ಮಾಡಲಾಗಿದೆ.

ಮಣಿಪಾಲ: ಕೋವಿಡ್-19 ವೈರಸ್‌ ಸೋಂಕಿನ ಅಪಾಯದಿಂದ ವಿಶ್ವವೇ ಪಾರಾದ ಬಳಿಕ ಸಹಜಜೀವನ ಪುನರಾರಂಭಗೊಂಡ ಬಳಿಕ ಕ್ರೀಡಾ ಕ್ಷೇತ್ರದಲ್ಲಿ ಆಗಬಹುದಾದ ಬದಲಾವಣೆಗಳನ್ನು ಊಹಿಸಲು ಅಸಾಧ್ಯ ವಾಗಿದೆ.

ಕೋವಿಡ್-19 ವೈರಸ್‌ ದಿಂದಾಗಿ ಕ್ರೀಡೆಯಲ್ಲಿ ಕೆಲವು ಹೊಸ ನಿಯಮಗಳು ಜಾರಿಗೆ ಬಂದರೂ ಅಚ್ಚರಿಪಡಬೇಕಾಗಿಲ್ಲ. ಕ್ರಿಕೆಟ್‌ ಕ್ರೀಡೆಯಲ್ಲಿ ಆಟಗಾರರು ಮುಂದಿನ ದಿನಗಳಲ್ಲಿ ಚೆಂಡಿಗೆ ಎಂಜಲು ಸವರುವುದು, ಹಸ್ತಲಾಘವ ಮಾಡುವುದಕ್ಕೆ ಬ್ರೇಕ್‌ ಬೀಳುವ ಸಾಧ್ಯತೆ ಇದೆ ಎಂದು ಕ್ರಿಕೆಟ್‌ ಪಂಡಿತರು ಅಂದಾಜಿಸಿದ್ದಾರೆ. ಇಂತಹ ಕೆಲವೊಂದು ನಿಯಮಗಳು ವಿವಿಧ ಕ್ರೀಡೆಗಳಲ್ಲಿ ಜಾರಿಗೆ ಬಂದರೆ ಕ್ರೀಡಾಕೂಟಗಳನ್ನು ನಡೆಸುವುದಾದರೂ ಹೇಗೆ ಎನ್ನುವ ಪ್ರಶ್ನೆ ಕ್ರೀಡಾಲೋಕದಲ್ಲಿ ಉದಯಿಸಿದೆ.

ಕೋವಿಡ್-19 ವೈರಸ್‌ ಆತಂಕದ ಆರಂಭದ ದಿನಗಳಲ್ಲಿ ನ್ಯೂಜಿಲ್ಯಾಂಡ್‌ ಮತ್ತು ಆಸ್ಟ್ರೇಲಿಯ ತಂಡದ ಆಟಗಾರರು ಹಸ್ತಲಾಘವ ಮಾಡುವ ಬದಲು ಮುಷ್ಟಿಯುದ್ಧದ ಮೂಲಕ ಒಬ್ಬರನ್ನೊಬ್ಬರು ಅಭಿನಂದಿಸಿದ್ದರು. ಇದೀಗ ಭವಿಷ್ಯದಲ್ಲಿ ಚೆಂಡಿಗೆ ಎಂಜಲು ಸವರುವುದನ್ನು ನಿಲ್ಲಿಸುವ ಸಲುವಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಈ ಪದ್ಧತಿ ನಿಲ್ಲಿಸಿದರೆ ಹೊಳಪಿಲ್ಲದ ಚೆಂಡಿನಲ್ಲಿ ಬೌಲಿಂಗ್‌ ಮಾಡಿದ ಬೌಲರ್‌ಗಳ ಬೌಲಿಂಗ್‌ ಸ್ವಿಂಗ್‌ ಆಗದೆ ಸಿಕ್ಕಾಪಟ್ಟೆ ರನ್‌ ಬಿಟ್ಟುಕೊಡುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಪ್ರತಿಯಾಗಿ ಹೊಳಪನ್ನು ಪಡೆಯುವಂತಹ ಪದಾರ್ಥವನ್ನು ಬಳಸುವ ಅನಿವಾರ್ಯ ಬರಬಹುದು. ಇಲ್ಲದಿದ್ದರೆ ನೀರಿನ ಅಂಶವಿರುವ ಪುಟ್ಟ ಸಲಕರಣೆಯನ್ನು ಆಟಗಾರರಿಗೆ ಕೊಡುವ ವ್ಯವಸ್ಥೆಯೂ ಆಗಬಹುದು.

ಇನ್ನು ಸಾಮಾಜಿಕ ಅಂತರದ ನಿಯಮ ಜಾರಿಯಾದರೆ, ಬೌಲರ್‌ಗಳು ವಿಕೆಟ್‌ ಪಡೆದಾಗ ಸಹ ಆಟಗಾರರು ಅಪ್ಪಿಕೊಂಡು ಸಂಭ್ರಮ ಆಚರಿಸುವ ಪರಿಪಾಠಕ್ಕೂ ಪೂರ್ಣವಿರಾಮ ಬೀಳಬಹುದು. ಹಸ್ತಲಾಘವ ಮಾಡಿ ಕಿಸೆಯಲ್ಲಿನ ಸ್ಯಾನಿಟೈಸರ್‌ ತೆಗೆದುಕೊಂಡು ಶುಭ್ರಗೊಳಿಸಿಕೊಳ್ಳುವ ಕಾಲವೂ ಬರಬಹುದು!

ಟೆಸ್ಟ್‌  ನಲ್ಲಿ ಬಲು ಕಷ್ಟ
ಆಸ್ಟ್ರೇಲಿಯದ ವೇಗಿ ಜೋಶ್‌ ಹ್ಯಾಝಲ್‌ವುಡ್‌ ಪ್ರಕಾರ ಬಿಳಿ ಚೆಂಡಿನ ಸೀಮಿತ ಓವರ್‌ಗಳ ಪಂದ್ಯದಲ್ಲಿ ಎಂಜಲು ಒರೆಸದೆ ಯಶಸ್ವಿಯಾಗಬಹುದು. ಆದರೆ ದಿನಕ್ಕೆ 80ಕ್ಕಿಂತ ಅಧಿಕ ಓವರ್‌ಗಳ ಆಟ ನಡೆಯುವ ಟೆಸ್ಟ್‌ ನಲ್ಲಿ ಎಂಜಲು ಒರೆಸುವ ಕ್ರಮಕ್ಕೆ ಕಡಿವಾಣ ಹಾಕಿದರೆ ಬ್ಯಾಟ್ಸ್‌ ಮನ್‌ಗಳಿಗೆ ತಡೆಯೊಡ್ಡುವುದು ಬಲು ಕಷ್ಟ. ಒಂದು ವೇಳೆ ಈ ನಿಯಮವನ್ನು ಟೆಸ್ಟ್‌ನಲ್ಲಿ ಬಳಸಿದ್ದೇ ಆದಲ್ಲಿ ಪ್ರತಿ 20 ಓವರ್‌ಗಳಿಗೆ ಬದಲಿ ಚೆಂಡನ್ನು ಬಳಸಬೇಕಾಗಿ ಬರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟೇತರ ಕ್ರೀಡೆಯ ಭವಿಷ್ಯವೇನು?
ಕ್ರಿಕೆಟ್‌ ಆಟದಲ್ಲಿ ಕೆಲ ಬದಲಾವಣೆ ತಂದರೆ ಅಚ್ಚರಿ ಪಡಬೇಕಿಲ್ಲ. ಆದರೆ ಕ್ರಿಕೆಟ್‌ ಹೊರತುಪಡಿಸಿ ಉಳಿದ ಕ್ರೀಡೆಗಳನ್ನು ಕನಸಿನಲ್ಲಿಯೂ ಊಹಿಸಲು ಸಾಧ್ಯವಿಲ್ಲ. ಯುರೋಪ್‌, ಅಮೆರಿಕಗಳಲ್ಲಿ ಜನಪ್ರಿಯ ಕ್ರೀಡೆಯಾದ ಫ‌ುಟ್ಬಾಲ್‌ನಲ್ಲಿ ಸಾಮಾಜಿಕ ಅಂತರದ ನಿಯಮ ಬಂದರೆ ಬಹಳಷ್ಟು ಬದಲಾವಣೆಗಳಾಗಬಹುದು. ಒಬ್ಬ ಆಟಗಾರ ಗೋಲು ಗಳಿಸಿದಾಗ ಉಳಿದವರು ಆತನ ಮೇಲೆ ಮುಗಿಬಿದ್ದು ಸಂಭ್ರಮಿಸುವ ಪರಿಯು ಇನ್ನು ಇತಿಹಾಸದ ಪುಟ ಸೇರಬಹುದು. ರಗಿº, ಹಾಕಿ, ಕಬಡ್ಡಿ, ಮತ್ತಿತರ ಎಲ್ಲ ಗುಂಪು ಕ್ರೀಡೆಗಳಲ್ಲಿ ಭವಿಷ್ಯದಲ್ಲಿ ಅಚ್ಚರಿಯ ಬದಲಾವಣೆಯಾದರೂ ನಾವು ಅದನ್ನೂ ಒಪ್ಪಲೇಬೇಕಾದ ಸ್ಥಿತಿ ಬರಬಹುದು.

ಸೀಮಿತ ಪ್ರೇಕ್ಷಕರಿಗೆ ಅವಕಾಶ?
ಈಗಾಗಲೆ ಮುಚ್ಚಿದ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ನಡೆಸುವ ಚಿಂತನೆ ನಡೆಯುತ್ತಿದೆ. ಈ ಮಧ್ಯೆ ಒಂದು ವೇಳೆ ಕೋವಿಡ್-19 ವೈರಸ್‌ ದಿನಗಳಲ್ಲಿ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅನುವು ಮಾಡಿಕೊಟ್ಟು ಕೆಲವು ಕಠಿನ ನಿರ್ಬಂಧವನ್ನು ವಿಧಿಸಬಹುದು. ಮೈದಾನಕ್ಕೆ ಬರುವ ಪ್ರೇಕ್ಷಕರನ್ನು ಹಲವು ಸುತ್ತುಗಳ ಭದ್ರತಾ ತಪಾಸಣೆಗಳಿಗೆ ಒಳಪಡಿಸಬಹುದು. ಥರ್ಮಲ್‌ ಸ್ಕ್ರೀನಿಂಗ್‌, ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಕಡ್ಡಾಯವಾಗಬಹುದು. ಉಳಿದಂತೆ ಕ್ರೀಡಾಂಗಣಗಳ ಗ್ಯಾಲರಿಗಳ ವಿಸ್ತಾರವನ್ನು ಹಿಗ್ಗಿಸಿ, ಆಸನಗಳ ನಡುವಿನ ಅಂತರ ಹೆಚ್ಚಿಸಬಹುದು. ಇದರಿಂದಾಗಿ ಆಗುವ ನಷ್ಟವನ್ನು ಟಿಕೆಟ್‌ಗಳ ಬೆಲೆ ಏರಿಸಿ ಭರಿಸಿಕೊಳ್ಳುವ ಯೋಜನೆಯನ್ನು ಆಯೋಜಕರು ಮಾಡಬಹುದೇನೋ?

ವೈಯಕ್ತಿಕ ಕ್ರೀಡೆಗಳಾದ ಕುಸ್ತಿ, ಕರಾಟೆ, ಬಾಕ್ಸಿಂಗ್‌ಗಳಲ್ಲಿ ಏನು ಮಾಡಬಹುದು ಎಂಬುದು ಕಲ್ಪನೆಗೆ ಮೀರಿದ್ದು. ಕೈ ಕೈ ಮಿಲಾಯಿಸಲಾಗುವ ಈ ಕ್ರೀಡೆಗಳಲ್ಲಿ ಸಾಮಾಜಿಕ ಅಂತರದ ನಿಯಮ ಜಾರಿ ಕಷ್ಟ. ಕಬಡ್ಡಿಯಲ್ಲೂ ಬದಲಾವಣೆ ಕಷ್ಟ! ಅಲ್ಲಿ ಸಾಮಾಜಿಕ ಅಂತರದ ಪ್ರಶ್ನೆಯೇ ಬರುವುದಿಲ್ಲ! ಇದೆಲ್ಲವೂ ಈಗ ಸುಮ್ಮನೆ ಊಹಿಸಿಕೊಳ್ಳುತ್ತಿರುವುದಷ್ಟೇ. ಈಗಾಗಲೇ ಕೆಲ ಪ್ರಮುಖ ಟೂರ್ನಿಗಳನ್ನು ರದ್ದುಪಡಿಸಿ ಅಲ್ಲವೆ ಮುಂದೂಡಿ ಕೆಲ ಕ್ರೀಡಾ ಸಂಸ್ಥೆಗಳು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಟೋಕಿಯೊ ಒಲಿಂಪಿಕ್ಸ್‌ ಮುಂದೂಡಲ್ಪಟ್ಟರೆ ಕ್ರಿಕೆಟ್‌ ಆಸ್ಟ್ರೇಲಿಯ ತನ್ನ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಭಾರತ ವಿರುದ್ಧದ ಐಸಿಸಿ ಟೆಸ್ಟ್‌ ಸರಣಿಯ ನಾಲ್ಕು ಪಂದ್ಯಗಳ ಸರಣಿಯನ್ನು ಐದಕ್ಕೆ ಏರಿಸುವ ಚಿಂತನೆ ನಡೆಸಿದೆ. ಒಂದು ಟೂರ್ನಿ ರದ್ದುಗೊಂಡರೆ ಕೇವಲ ಟೂರ್ನಿಯನ್ನು ಆಯೋಜಿಸಿದ ಕ್ರೀಡಾ ಸಂಸ್ಥೆಗೆ ಮಾತ್ರವಲ್ಲದೆ ಟೂರ್ನಿಗೆ ಬಂಡವಾಳ ಹೂಡಿದ ಪ್ರಸಾರಕರು, ಮಾಲಕರು, ಹೊಟೇಲ್‌ ಉದ್ಯಮಕ್ಕೂ ಭಾರೀ ಹೊಡೆತ ಬೀಳಲಿದೆ. ಒಂದೊಮ್ಮೆ ಎಲ್ಲವೂ ಮೊದಲಿನ ಹಾದಿಗೆ ಬಂದ ಅನಂತರ ಕ್ರೀಡಾ ಸಂಸ್ಥೆಗಳಲ್ಲಿ ಏನೇನು ಚರ್ಚೆಗಳು ನಡೆಯುತ್ತವೆಯೋ ಗೊತ್ತಿಲ್ಲ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.