ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಸೋಂಕು : ಕೇಂದ್ರದ ಅಧ್ಯಯನದಿಂದಲೇ ದೃಢ
Team Udayavani, May 10, 2021, 6:55 AM IST
ಹೊಸದಿಲ್ಲಿ: ದೇಶದ ಪ್ರತೀ ಐದು ಜಿಲ್ಲೆಗಳ ಪೈಕಿ 2ರಲ್ಲಿ ಶೇ.20ಕ್ಕಿಂತ ಹೆಚ್ಚು ಸೋಂಕಿನ ಪಾಸಿಟಿವಿಟಿ ಪ್ರಮಾಣ ಇದೆ. ಈ ತಿಂಗಳ 1ರಿಂದ7ರ ವರೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಂಗ್ರಹಿಸಿದ ಮಾಹಿತಿ ಯಲ್ಲಿ ಈ ಅಂಶ ಉಲ್ಲೇಖಗೊಂಡಿದೆ. ಈ ಪೈಕಿ 15 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿದೆ. ಕರ್ನಾಟಕದ ಅಂಶವನ್ನೇ ತೆಗೆದು ಕೊಂಡರೆ 24 ಜಿಲ್ಲೆಗಳಲ್ಲಿ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.20 ಕ್ಕಿಂತ ಹೆಚ್ಚಾಗಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ದೇಶದಲ್ಲಿ ಅತ್ಯಂತ ಹೆಚ್ಚು ಸೋಂಕಿನ ಪಾಸಿಟಿವಿಟಿ ಹೆಚ್ಚಾಗಿರುವುದು ಅರುಣಾಚಲ ಪ್ರದೇಶದ ಚಂಗ್ಲಾಗ್ ಜಿಲ್ಲೆಯಲ್ಲಿ. ಅಲ್ಲಿ ಶೇ.91.5ರಷ್ಟು ಇದೆ. ಹೆಚ್ಚಿನ ಪ್ರಮಾಣ ಇರುವ ಜಿಲ್ಲೆಗಳ ಪೈಕಿ ಪುದುಚೇರಿಯ ಯಾನಮ್, ರಾಜಸ್ಥಾನದ ಬಿಕಾನೇರ್ ಮತ್ತು ಪಾಲಿ, ಅರುಣಾಚಲ ಪ್ರದೇಶದ ದಿಬನ್ ವ್ಯಾಲಿ ಜಿಲ್ಲೆಗಳಿವೆ.
ಶೇ.20ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ಇರುವ ಪಟ್ಟಿಯಲ್ಲಿ ಹಲವು ಜಿಲ್ಲೆಗಳಿವೆ. ಕೇರಳದ 14ರ ಪೈಕಿ 13, ಹರಿಯಾಣದ 22ರ ಪೈಕಿ 19, ಪಶ್ಚಿಮ ಬಂಗಾಲದ 23ರ ಪೈಕಿ 19, ದಿಲ್ಲಿಯ 11ರ ಪೈಕಿ 9 ಜಿಲ್ಲೆಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಪ್ರಕರಣಗಳು ಇವೆ. ಗೋವಾ ಮತ್ತು ಪುದುಚೇರಿಯ ಲ್ಲಿರುವ ಎಲ್ಲ ಜಿಲ್ಲೆಗಳು, ಸಿಕ್ಕಿಂನ 4 ಜಿಲ್ಲೆಗಳ ಪೈಕಿ 3, ಚಂಡೀಗಢದಲ್ಲಿರುವ 1 ಜಿಲ್ಲೆ ಕೂಡ ಹೆಚ್ಚು ಪಾಸಿಟಿವಿಟಿ ಪ್ರಕರಣಗಳನ್ನು ಹೊಂದಿವೆ.
3ನೇ ಅಲೆಯ ತೀವ್ರತೆ ಕುಗ್ಗಿಸಲು ಸಾಧ್ಯ: ತಜ್ಞರ ಅಭಿಮತ
ಹೊಸದಿಲ್ಲಿ: ಕೊರೊನಾ ಸೋಂಕಿನ 3ನೇ ಅಲೆ ಬರುವುದಂತೂ ಸತ್ಯ. ಆದರೆ ಜನರು ಕೊರೊನಾ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಹಾಗೂ ಬಹುಸಂಖ್ಯೆಯ ಜನರಿಗೆ ಲಸಿಕೆ ನೀಡಿದರೆ ಖಂಡಿತಾ ಮುಂದಿನ ಅಲೆಯ ಗಂಭೀರತೆಯನ್ನು ತಪ್ಪಿಸಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.
ಕಳೆದ ಕೆಲವು ತಿಂಗಳಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಮೊದಲ ಅಲೆಗಿಂತಲೂ ಎರಡನೇ ಅಲೆಯೇ ಹೆಚ್ಚು ಗಂಭೀರವಾಗಿದ್ದು, ಊಹಿಸಲಾರದಷ್ಟು ಸಾವು-ನೋವುಗಳು ಕಂಡು ಬರುತ್ತಿವೆ. ಇದಕ್ಕೆ ಜನಸಾಮಾನ್ಯರ ನಿರ್ಲಕ್ಷ್ಯ ಕಾರಣ ಎಂದು ಕೆಲವು ತಜ್ಞರು ಹೇಳಿದರೆ, ಇನ್ನು ಕೆಲವರು ಇದಕ್ಕೆ ಭಾರತದ ಹೊಸ ರೂಪಾಂತ ರಿಯೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಲಸಿಕೆ ನೀಡುವಿಕೆ ಪ್ರಮಾಣ ಹೆಚ್ಚಿಸಿ, ಮಾರ್ಗಸೂಚಿ ನಿರ್ಲಕ್ಷ್ಯ ಮಾಡದೇ ಇದ್ದರೆ 3ನೇ ಅಲೆಯ ತೀವ್ರತೆಯನ್ನು ಕುಗ್ಗಿಸ ಬಹುದು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರ:ಭಾರೀ ಮಳೆ- ಘಾಟ್ಕೋಪರ್, ರತ್ನಗಿರಿಯಲ್ಲಿ ಭೂಕುಸಿತ; ರಸ್ತೆಗೆ ಉರುಳಿಬಿದ್ದ ಬಂಡೆ
ಹಿಂದೂ ದೇವತೆಗಳ ಫೋಟೋಗಳಿರುವ ಪೇಪರ್ ಪ್ಯಾಕ್ ನಲ್ಲಿ ಕೋಳಿ ಮಾಂಸ ಮಾರಾಟ, ವ್ಯಕ್ತಿ ಬಂಧನ
ಭಾರತದಲ್ಲಿ 24ಗಂಟೆಯಲ್ಲಿ 13,086 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಹೆಚ್ಚಳ
ಸೊಸೈಟಿಗಳಲ್ಲೂ ಸಿಗಲಿದೆ ಪೆಟ್ರೋಲ್? ಸದ್ಯ ಇರುವ ನಿಯಮ ಬದಲಿಸಲು ಕೇಂದ್ರದ ಚಿಂತನೆ
ಈ ಏರ್ ಕಂಡೀಷನರ್ಗೆ ವಿದ್ಯುತ್ ಬೇಕಿಲ್ಲ! ಗುವಾಹಟಿ ಐಐಟಿ ತಜ್ಞರಿಂದ ಹೊಸ ಆವಿಷ್ಕಾರ
MUST WATCH
ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್
ಚಾರ್ಮಾಡಿ : ರಸ್ತೆ ಮಧ್ಯೆಯೇ ಮೋಜು ಮಸ್ತಿ, ಪ್ರವಾಸಿಗರ ಪುಂಡಾಟಕ್ಕೆ ವಾಹನ ಸವಾರರು ಸುಸ್ತು
ಭಾರಿ ಮಳೆಗೆ ಹೆಬ್ಬಾಳ ಸೇತುವೆ ಮುಳುಗಡೆ : ಕಳಸ – ಹೊರನಾಡು ಸಂಪರ್ಕ ಕಡಿತ
ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು
ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!
ಹೊಸ ಸೇರ್ಪಡೆ
ಆಪ್ತರ ಪಟ್ಟಿಯಲ್ಲಿ ಡಿಕೆಶಿ ಇದ್ದಾರೆ ಎಂದು ಕೊನೆಗೂ ಹೇಳದ ಸಿದ್ದರಾಮಯ್ಯ!
ಹಳೆಯಂಗಡಿ: ಭಾರೀ ಮಳೆಗೆ ತಡೆಗೋಡೆ ಕುಸಿದು ಪಕ್ಕದ ಮನೆಗೆ ಹಾನಿ
ಮಹಾರಾಷ್ಟ್ರ:ಭಾರೀ ಮಳೆ- ಘಾಟ್ಕೋಪರ್, ರತ್ನಗಿರಿಯಲ್ಲಿ ಭೂಕುಸಿತ; ರಸ್ತೆಗೆ ಉರುಳಿಬಿದ್ದ ಬಂಡೆ
ಚಾರ್ಲಿ ಕಲೆಕ್ಷನ್ 150 ಕೋಟಿ!: ಲಾಭದಲ್ಲಿ ಶ್ವಾನಗಳಿಗೂ ಪಾಲು
ಬನ್ನಂಜೆ ಗರಡಿ ರಸ್ತೆಯ 30ಕ್ಕೂ ಅಧಿಕ ಮನೆಗಳು ಜಲಾವೃತ: ಉಕ್ಕಿ ಹರಿಯುತ್ತಿದೆ ಇಂದ್ರಾಣಿ ನದಿ