ಕೊವಿಡ್ ಲಸಿಕೆಯೊಂದಿಗೆ ಹಳ್ಳಿ ಹಳ್ಳಿಗೆ ಸಂಚರಿಸಲಿವೆ NEKRTC ಬಸ್
Team Udayavani, Jun 15, 2021, 6:40 PM IST
ಕಲಬುರಗಿ: ಕೊರೊನಾ ನಿಯಂತ್ರಣ ದ ಲಸಿಕೆ ಹಾಕಿಸಿಕೊಳ್ಳದ ಗ್ರಾಮೀಣ ಭಾಗಕ್ಕೆ ತೆರಳಿ ಲಸಿಕೆ ಹಾಕಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯ ಎರಡು ಬಸ್ಸುಗಳು ಸಿದ್ದಗೊಂಡಿವೆ.
ಜಿಲ್ಲಾಡಳಿತ ಸಹಯೋಗದೊಂದಿಗೆ ಸಂಸ್ಥೆ ಎರಡು ಬಸ್ ಗಳನ್ನು ವೈದ್ಯಕೀಯ ವಾಹನವನ್ನು ಸುಸಜ್ಜಿತವಾಗಿ ಸಿದ್ದಪಡಿಸಲಾಗಿದ್ದು, ಬುಧವಾರ ಚಾಲನೆ ನೀಡಲಾಗುತ್ತಿದೆ.
ವ್ಯಾಕ್ಸಿನ್ ಹೊತ್ತ ಬಸ್ ಗಳು ಇಲ್ಲಿಯವರೆಗೆ ವ್ಯಾಕ್ಸಿನ್ ಹಾಕಿಕೊಳ್ಳದ ಅದರಲ್ಲೂ ಸಮುದಾಯ ಆರೋಗ್ಯ ಕೇಂದ್ರದಿಂದ ದೂರ ಇರುವ ಹಳ್ಳಿಗೆ ತಲುಪಿ ಜನರಿಗೆ ಲಸಿಕೆ ಕೊಡಲಿವೆ. ಇದರಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಇರಲಿದ್ದು ಲಸಿಕೆ ನೀಡುತ್ತಾರೆ. ಬಸ್ ಹಾಗೂ ಡ್ರೈವರ್ ಜತೆಗೆ ತೈಲ ಎನ್ಇಕೆಆರ್ಟಿಸಿ ಸಂಸ್ಥೆ ನೀಡಲಿದೆ.
ಮಂಗಳವಾರ ಎನ್ಇಕೆಆರ್ಟಿಸಿ ಸಂಸ್ಥೆ ಅಧ್ಯಕ್ಷರಾಗಿರುವ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಸಿದ್ದಗೊಂಡಿರುವ ಬಸ್ಗಳ ನ್ನು ಸಂಸ್ಥೆಯ ವಕ್೯ಶಾಪ್ ನಲ್ಲಿ ವೀಕ್ಷಿಸಿದರು.
ಇದನ್ನೂ ಓದಿ : ಅರುಣ್ ಸಿಂಗ್ ಭೇಟಿಯನ್ನು ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ : ಬೊಮ್ಮಾಯಿ
ನಂತರ ಮಾತನಾಡಿದ ಅವರು, ಲಸಿಕೆಯು ಜನರಿಗೆ ವ್ಯಾಪಕವಾಗಿ ತಲುಪಿಸಲು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಜನರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರಿಂದ ಅವರ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕಲಾಗುವುದು ಎಂದು ವಿವರಣೆ ನೀಡಿದರು.
ಕಲಬುರಗಿ ಜಿಲ್ಲೆಯಲ್ಲದೇ ಇತರ ಜಿಲ್ಲೆಗಳಿಂದಲೂ ಬೇಡಿಕೆ ಬಂದಲ್ಲಿ ಬಸ್ಗಳ ನ್ನು ಸಿದ್ದಪಡಿಸಿ ಕೊಡಲಾಗುವುದು. ಒಟ್ಟಾರೆ ಕೊರೊನಾ ವ್ಯಾಕ್ಸಿನ್ ಎಲ್ಲರಿಗೂ ತಲುಪಿಸಿ ಕೊರೊನಾ ಹೊಡೆದೊಡಿಸಬೇಕಿದೆ ಎಂದರು.
ಈಗಾಗಲೇ 06 ಬಸ್ಗಳನ್ನು ಆಕ್ಸಿಜನ್ ಗೆ ನೀಡಲಾಗಿದೆಯಲ್ಲದೇ 46 ಡ್ರೈವರ್ ಗಳನ್ನು ನೀಡಲಾಗಿದೆ ಎಂದು ತೇಲ್ಕೂರ ತಿಳಿಸಿದರು.
ಎನ್ಇಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ ಕೂರ್ಮರಾವ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
MUST WATCH
ಹೊಸ ಸೇರ್ಪಡೆ
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ
Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್ ಟವರ್ ಹತ್ತಿದ ಯುವಕ