ಲಸಿಕೆ ಸಾಗಾಟ “ಸಮರ’ಕ್ಕೆ ವಾಯುಪಡೆ ವಿಮಾನ: ಕೇಂದ್ರ ಸರಕಾರದ ಜತೆ ಕೈಜೋಡಿಸಿದ ಐಎಎಫ್


Team Udayavani, Dec 7, 2020, 6:30 AM IST

ಲಸಿಕೆ ಸಾಗಾಟ “ಸಮರ’ಕ್ಕೆ ವಾಯುಪಡೆ ವಿಮಾನ: ಕೇಂದ್ರ ಸರಕಾರದ ಜತೆ ಕೈಜೋಡಿಸಿದ ಐಎಎಫ್

ಹೊಸದಿಲ್ಲಿ: ಕೊರೊನಾ ಸೋಂಕಿನ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರವು ದೇಶಾದ್ಯಂತ ಲಸಿಕೆ ವಿತರಣೆಗೆ ಅಗತ್ಯ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ. ಲಸಿಕೆ ವಿತರಣೆಯಲ್ಲಿ ಕೇಂದ್ರದ ಜತೆ ಕೈಜೋಡಿಸಲು ಭಾರತೀಯ ವಾಯುಪಡೆ (ಐಎಎಫ್) ಸಜ್ಜಾಗಿದೆ.

ಈಗಾಗಲೇ ಪ್ರವಾಹ ಮತ್ತಿತರ ನೈಸರ್ಗಿಕ ವಿಕೋಪಗಳು, ಗಡಿ ಬಿಕ್ಕಟ್ಟು ವೇಳೆ ಭಾರೀ ಪ್ರಮಾಣದ ವಸ್ತುಗಳ ಸಾಗಾಟದಲ್ಲಿ ಪರಿಣತಿ ಹೊಂದಿರುವ ವಾಯುಪಡೆಯು ಲಸಿಕೆಯನ್ನು ದೇಶಾದ್ಯಂತ ಸಾಗಿಸಲು ಮುಂದೆ ಬಂದಿರುವುದು ಆಶಾಕಿರಣ ಮೂಡಿಸಿದೆ. ಏಕೆಂದರೆ ಲಸಿಕೆ ಸಿದ್ಧವಾದ ಬಳಿಕ ದೇಶದ 28 ಸಾವಿರ ಕೋಲ್ಡ್‌ ಸ್ಟೋರೇಜ್‌ಗಳಿಗೆ ಅದರ ಸಾಗಣೆ ಸುಲಭವಾದ ಮಾತೇನಲ್ಲ.

ಮೂಲಗಳ ಪ್ರಕಾರ, ವಾಯುಪಡೆಯ ಭಾರೀ ಕಾರ್ಗೋ ವಿಮಾನಗಳೇ ಲಸಿಕೆ ಸಾಗಾಟಕ್ಕೆ ಇಳಿಯಲಿವೆ. ಸುಮಾರು 100 ವಿಮಾನಗಳು ಈ ಕಾರ್ಯದಲ್ಲಿ ಕೈಜೋಡಿಸಲಿವೆ. ಈ ಬಗ್ಗೆ ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸದ್ಯ ಕೇಂದ್ರ ಸರಕಾರವಾಗಲಿ ಅಥವಾ ಭಾರತೀಯ ವಾಯುಪಡೆಯಾಗಲಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಸಿ-17 ಗ್ಲೋಬ್‌ ಮಾಸ್ಟರ್‌ ಎಂಬ ಆನೆ ಗಾತ್ರದ 11 ಯುದ್ಧ ವಿಮಾನಗಳು, ಸಿ-130 ಹರ್ಕ್ಯುಲಸ್‌ ವಿಮಾನಗಳನ್ನು ಪ್ರಮುಖವಾಗಿ ಬಳಕೆ ಮಾಡಲಾಗುತ್ತದೆ.

ವಿಮಾನ ನಿಲ್ದಾಣಗಳೂ ಸಿದ್ಧ
ದಿಲ್ಲಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲೂ ಲಸಿಕೆ ಸಾಗಾಟಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎರಡೂ ವಿಮಾನ ನಿಲ್ದಾಣಗಳಲ್ಲಿ ಕೆಲವು ಟರ್ಮಿನಲ್‌ಗಳನ್ನು ಲಸಿಕೆ ಸಾಗಾಟಕ್ಕೆ ಮೀಸಲು ಇರಿಸಲು ನಿರ್ಧರಿಸಲಾಗಿದೆ.

ಐಎಎಫ್ ಹಿಂದಿನ ಸಾಧನೆಗಳು
ಚೀನ ಮತ್ತು ಭಾರತದ ನಡುವೆ ಲಡಾಖ್‌ ಗಡಿಯಲ್ಲಿ ಸಂಘರ್ಷ ಆರಂಭವಾದ ಮೇಲೆ ಐಎಎಫ್ ಯುದ್ಧ ವಿಮಾನಗಳು ಭಾರೀ ಪ್ರಮಾಣದ ಇಂಧನ, ಆಹಾರ, ಅಗತ್ಯ ವಸ್ತುಗಳು, ಉಪಕರಣಗಳನ್ನು ಗಡಿಗೆ ಹೊತ್ತೂಯ್ದಿವೆ. ಹಾಗೆಯೇ ದೇಶದೊಳಗೆ ಮತ್ತು ನೆರೆ ದೇಶಗಳಲ್ಲಿ ಪ್ರಾಕೃತಿಕ ವಿಕೋಪಗಳಾದಾಗಲೂ ಅವು ವೈದ್ಯಕೀಯ ವಸ್ತುಗಳು ಮತ್ತು ಸಲಕರಣೆಗಳನ್ನು ಹೊತ್ತೂಯ್ದಿವೆ.

ಕೊರೊನಾ ಆರಂಭವಾದ ಮೇಲೂ ಮಾಲ್ಡೀವ್ಸ್‌ನಂಥ ದೇಶಗಳಿಗೆ ವೈದ್ಯಕೀಯ ವಸ್ತುಗಳನ್ನು ತೆಗೆದುಕೊಂಡು ಹೋಗಲಾಗಿದೆ. ನೋಟು ರದ್ದತಿ ವೇಳೆಯಲ್ಲಿ ದೇಶಾದ್ಯಂತ ಕರೆನ್ಸಿ ನೋಟುಗಳನ್ನು ರವಾನಿಸಿದ್ದು ಇವೇ ಐಎಎಫ್ ಯುದ್ಧ ವಿಮಾನಗಳು.

ಯಾವ್ಯಾವ ವಿಮಾನ?
1. 11 ಸಿ-17 ಗ್ಲೋಬ್‌ ಮಾಸ್ಟರ್‌ ಹೆವ್ವಿ-ಲಿಫ್ಟ್ ವಿಮಾನ – ಪ್ರತೀ ವಿಮಾನವು ಒಮ್ಮೆಗೆ 75 ಟನ್‌ನಷ್ಟು ಸರಕು ಸಾಗಣೆ ಮಾಡಬಲ್ಲದು.
2. ಸಿ-130 ಹರ್ಕ್ಯುಲ‌ ವಿಮಾನ – ಒಮ್ಮೆಗೆ 19 ಟನ್‌ ನಷ್ಟು ಸರಕು ಸಾಗಣೆ ಮಾಡುವ ಸಮರ್ಥ.
3. ಐ 1-76 ಮತ್ತು ಎಎನ್‌-32 ಎಸ್‌
4. ಡಾರ್ನಿಯರ್‌ ನಂಥ ಪುಟ್ಟ ವಿಮಾನಗಳು
5. ಹೆಲಿಕಾಪ್ಟರ್ ಗಳು – ರಿಮೋಟ್‌ ಸ್ಥಳಗಳಿಗೆ ತಲುಪಲು ಬಳಕೆ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.