ಕೋವಿಡ್ ಕೆಲಸ ಮಾಡಿದರೂ ಸೇನಾನಿ ಅಲ್ಲ: ಆತಂಕದಲ್ಲಿ ಕರ್ತವ್ಯ ನಿರತ ಸರಕಾರಿ ಸಿಬಂದಿ
Team Udayavani, May 17, 2021, 7:05 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಸರಕಾರಿ ನೌಕರರು ಜೀವ ಪಣಕ್ಕಿಟ್ಟಿದ್ದಾರೆ. ಆದರೆ ಇವರೆಲ್ಲರನ್ನೂ ಕೊರೊನಾ ಸೇನಾನಿಗಳು ಎಂದು ಪರಿಗಣಿಸದಿರುವುದು ಸರಕಾರಿ ನೌಕರರಲ್ಲಿ ದುಗುಡಕ್ಕೆ ಕಾರಣವಾಗಿದೆ.
ಸರಕಾರ ಕೆಲವು ಇಲಾಖೆಗಳ ಸಿಬಂದಿ ಯನ್ನು ಸೇನಾನಿಗಳು ಎಂದು ಗುರುತಿಸಿ ಆರೋಗ್ಯ ಸಮಸ್ಯೆ ಅಥವಾ ಜೀವಹಾನಿ ಯಾದರೆ 30 ಲಕ್ಷ ರೂ. ಪರಿಹಾರ ನೀಡುತ್ತಿದೆ. ಆದರೆ ಉಳಿದವರನ್ನು ಸೇನಾನಿ ಎಂದು ಪರಿಗಣಿಸುತ್ತಿಲ್ಲ. ಅಲ್ಲದೆ ಕೊರೊನಾ ಕರ್ತವ್ಯದಲ್ಲಿದ್ದಾಗ ಜೀವ ಕಳೆದುಕೊಂಡಿದ್ದರೂ ಅವರ ಕುಟುಂಬಸ್ಥರು 30 ಲಕ್ಷ ವಿಮೆ ಪರಿಹಾರ ಪಡೆಯಲಾಗದಂತಾಗಿದೆ.
ಆದೇಶವಿದ್ದರೂ ಸಿಗದ ಪರಿಹಾರ
ಕೊರೊನಾ ಕರ್ತವ್ಯದ ವೇಳೆ ಕೊರೊನಾಕ್ಕೆ ತುತ್ತಾಗಿ ಸಾವಿಗೀಡಾದರೆ ಎಲ್ಲ ಸಿಬಂದಿಗೂ 30 ಲಕ್ಷ ವಿಮೆ ಪರಿಹಾರ ನೀಡಬೇಕೆಂಬ ಆದೇಶ ಇದೆ. ಆದರೆ ಡಿಸಿ ನೇಮಕಾತಿ ಪತ್ರ ನೀಡಿದ್ದು, ಅಂಥವರು ಸಾವಿಗೀಡಾದಾಗ ಮಾತ್ರ ಪರಿಹಾರ ನೀಡಬೇಕೆಂಬ ನಿಯಮ ಮಾಡಲಾಗಿದೆ.
ಸೇನಾನಿಗಳು ಯಾರ್ಯಾರು?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಕಂದಾಯ, ಗೃಹ ಇಲಾಖೆ ಸಿಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು.
ಯಾರು ಅಲ್ಲ?
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಡಿಒಗಳು, ಕಾರ್ಮಿಕ ಇಲಾಖೆಯ ಸಿಬಂದಿ, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಶಿಕ್ಷಕರು.
ಸೇವೆ ಸಲ್ಲಿಸುತ್ತಿರುವ ಇಲಾಖೆಗಳು
-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
– ವೈದ್ಯ ಕೀಯ ಶಿಕ್ಷಣ ಇಲಾಖೆ
– ಒಳಾ ಡಳಿತ ಇಲಾ ಖೆ ( ಗೃಹ)
– ಮಹಿಳಾ ಮತ್ತು ಮಕ್ಕಳ ಇಲಾಖೆ
– ಕಂದಾಯ ಇಲಾಖೆ
– ಕಾರ್ಮಿಕ ಇಲಾಖೆ
– ಗ್ರಾಮೀಣಾಭಿವೃದ್ಧಿ, ಪಂ. ರಾಜ್ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ