ಔಷಧೀಯವಾಗಿಯೂ ಅತ್ಯಂತ ಉಪಯುಕ್ತ; ಕದಳಿ ಎಂಬ ಕಲ್ಪವೃಕ್ಷ
ಆಧುನಿಕ ವಿಜ್ಞಾನ ಸಂಶೋಧನೆಯಲ್ಲೂ ಸಾಬೀತಾದ ವಿಶೇಷ ತಳಿ
Team Udayavani, Aug 27, 2021, 12:34 PM IST
ಬಾಳೆ ಹಣ್ಣು ಸಾಂಪ್ರದಾಯಿಕ ಆಚರಣೆಗಳು, ಪೂಜೆ ಪುರಸ್ಕಾರ, ಆಹಾರ ಪದ್ಧತಿಗಳಲ್ಲಿ, ಔಷಧವಾಗಿಯೂ ಅತ್ಯಂತ ಪ್ರಮುಖವಾಗಿ ಬಳಕೆಯಾಗುವ ಹಣ್ಣು. ಕದಳೀ ಫಲ ಎಂಬ ಸಂಸ್ಕತ ಹೆಸರನ್ನು ಹೊಂದಿರುವ, ಮ್ಯುಸಾ ಪ್ಯಾರಾಡಿಸಿಯಾಕಾ ಎಂಬ ವೈಜ್ಞಾನಿಕ ಹೆಸರುಳ್ಳುಕದಳಿ ಬಾಳೆಹಣ್ಣು ಎಲ್ಲ ಕಾಲಗಳಲ್ಲೂ ದೊರೆಯುವ ಹಣ್ಣು. ಇದು ಆಹಾರ ರೂಪದಲ್ಲಿ ಮಾತ್ರವಲ್ಲದೆ ಔಷಧೀಯವಾಗಿಯೂ ಅತ್ಯಂತ ಉಪಯುಕ್ತ.
ಸಸಾರಜನಕ, ಸಿ ಜೀವಸತ್ವ ಹಾಗೂ ಪೊಟ್ಯಾಶಿಯಂಗಳನ್ನು ವಿಪುಲವಾಗಿ ಹೊಂದಿರುವುದರಿಂದ ಔಷಧಕ್ರಮದಲ್ಲೂ ವ್ಯಾಪಕವಾಗಿ ಬಳಕೆಯಾಗಿ ಯಶಸ್ಸುಗೊಂಡ, ಆಧುನಿಕ ವಿಜ್ಞಾನ ಸಂಶೋಧನೆಯಲ್ಲೂ ಸಾಬೀತಾದ ವಿಶೇಷ ತಳಿ.
ಎಡೆಬೆಳೆ
ಕರಾವಳಿ ಭಾಗದಲ್ಲಿ ಕದಳಿ ಬಾಳೆಕೃಷಿ ನೇಂದ್ರ, ಕ್ಯಾವಂಡಿಶ್ಗಳಂತೆ ಮುಖ್ಯ ಬೆಳೆಯಾಗಿ ಬೆಳೆಯದೆ ಎಡೆಬೆಳೆಯಾಗಿ ಅಥವಾ ಉಪಬೆಳೆಯಾಗಿ ರೈತರಿಗೆ ಸಹಾಯಕವಾಗಿತ್ತು. ಆದರೆ ವಾಣಿಜ್ಯ ಬೆಳೆಯಾಗಿ ಬೆಳೆಸುವ ಬಾಳೆ ತಳಿಗಳ ಮಧ್ಯೆಕದಳಿ ಬಾಳೆಯನ್ನು ಬೆಳೆಸುವವರು ವಿರಳವಾಗಿದ್ದಾರೆ.
ಕದಳಿಯಲ್ಲೂ ಉಪತಳಿ
ಕದಳಿ ಬಾಳೆಯಲ್ಲೂ ನೈಕದಳಿ,ಕಾವಿರಕದಳಿ, ಏಲಕ್ಕಿಕದಳಿ ಮೊದಲಾದ ಉಪ ತಳಿಗಳಿವೆ. ಸಂಪೂರ್ಣವಾಗಿ ಉಪಯೋಗಕಾರಿಯಾಗಿರುವ ತೆಂಗಿನ ಮರಕ್ಕೆ ಹೇಗೆಕಲ್ಪವೃಕ್ಷ ಎಂಬ ಹೆಸರಿದೆಯೋಕದಳಿ ಬಾಳೆ ಗಿಡಕ್ಕೂ ಈ ಹೆಗ್ಗಳಿಕೆ ಇದೆ. ಕದಳಿ ಬಾಳೆ ಹಣ್ಣು ಆಚರಣೆ -ಅನುಸರಣೆಯಲ್ಲಿ ಮುಖ್ಯವಾಗಿರುವಂತೆ ಸಂಪೂರ್ಣ ಕದಳಿ ಬಾಳೆ ಗಿಡವೇ ಉಪಯುಕ್ತವಾಗಿ ಗುರುತಿಸಿಕೊಂಡಿದೆ.ಕದಳಿ ಬಾಳೆ ಗಿಡಗಳಿದ್ದರೆ ರೋಗ ದೂರ ಎಂಬುದು ಹಿರಿಯರಿಂದಲೇ ಬಂದ ಮಾತು.
ಕದಳಿ ಬಾಳೆಗಿಡದ ನಾರು ಹಗ್ಗವಾಗಿ ಬಳಸಲು ಅತ್ಯಂತ ಸೂಕ್ತ. ಇದರ ದಂಡು (ತಿರುಳು), ಬಾಳೆ ಹೂ (ಪೂಂಬೆ) ಪದಾರ್ಥಕ್ಕೆ ಬಳಕೆಯಾಗುತ್ತದೆ. ದಂಡಿನಿಂದ ಮಾಡಿದ ಔಷಧವನ್ನು ಹೊಟ್ಟೆಯಲ್ಲಿರುವ ಕಲ್ಮಶ ಹೊರಹಾಕಲು, ಸಕ್ಕರೆ ಕಾಯಿಲೆಗೆ ಔಷಧವಾಗಿ ಬಳಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು