ದಾವಣಗೆರೆ: ಜಿಲ್ಲೆಯಲ್ಲಿ 525 ಮಂದಿ ಗುಣಮುಖ, 681 ಹೊಸ ಪ್ರಕರಣ ಪತ್ತೆ
Team Udayavani, May 21, 2021, 9:07 PM IST
ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾದಿಂದ ಗುಣಮುಖರಾದ 525 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 270, ಹರಿಹರದಲ್ಲಿ 111, ಜಗಳೂರಿನಲ್ಲಿ 24, ಚನ್ನಗಿರಿ ಯಲ್ಲಿ 34, ಹೊನ್ನಾಳಿಯಲ್ಲಿ 63 ಹಾಗೂ ಹೊರ ಜಿಲ್ಲೆಯ 23 ಜನ ಒಳಗೊಂಡಂತೆ 525 ಸೋಂಕಿತರು ಗುಣಮುಖರಾಗಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ 681 ಪ್ರಕರಣ ದೃಢಪಟ್ಟಿವೆ. ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 326 ಪ್ರಕರಣ ಪತ್ತೆಯಾಗಿವೆ. ಹರಿಹರದಲ್ಲಿ 101 , ಜಗಳೂರಿನಲ್ಲಿ 30 , ಚನ್ನಗಿರಿಯಲ್ಲಿ 100, ಹೊನ್ನಾಳಿಯಲ್ಲಿ 115 ಹಾಗೂ ಹೊರ ಜಿಲ್ಲೆಯ 9 ಜನರು ಒಳಗೊಂಡಂತೆ 681 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.
ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 20271, ಹರಿಹರದಲ್ಲಿ 5053, ಜಗಳೂರಿನಲ್ಲಿ 1892, ಚನ್ನಗಿರಿಯಲ್ಲಿ 3747, ಹೊನ್ನಾಳಿಯಲ್ಲಿ 4213, ಹೊರ ಜಿಲ್ಲೆಯ 1085 ಜನರು ಸೇರಿದಂತೆ ಈವರೆಗೆ ಒಟ್ಟು 36,216 ಜನರು ಸೋಂಕಿಗೆ ಒಳಗಾಗಿದ್ದಾರೆ.
ಕೊರೊನಾದಿಂದ ದಾವಣಗೆರೆ ತಾಲೂಕಿನಲ್ಲಿ 17751, ಹರಿಹರದಲ್ಲಿ 4312 ಜಗಳೂರಿನಲ್ಲಿ 1514, ಚನ್ನಗಿರಿಯಲ್ಲಿ 3006, ಹೊನ್ನಾಳಿಯಲ್ಲಿ 3531, ಹೊರ ಜಿಲ್ಲೆಯ 913 ಜನರು ಸೇರಿದಂತೆ 31,027 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4912 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ :ಯಾದಗಿರಿ: ಆಹಾರ ದಿನಸಿ, ಹಣ್ಣುಗಳು, ತರಕಾರಿ ಕೊಳ್ಳಲು ಅವಕಾಶ
ಜಿಲ್ಲೆಯಲ್ಲಿ ಕೊರೊನಾದಿಂದ ಓರ್ವರು ಮೃತಪಟ್ಟಿದ್ದಾರೆ. ಹೊನ್ನಾಳಿ ತಾಲೂಕಿನ ಕೊಳಚಗೊಂಡನಹಳ್ಳಿಯ 72 ವರ್ಷದ ವೃದ್ಧ ಮೃತಪಟ್ಟವರು. ಈವರೆಗೆ ಕೊರೊನಾದಿಂದ ಜಿಲ್ಲೆಯಲ್ಲಿ 322 ಜನರು ಸಾವನ್ನಪ್ಪಿದ್ದಂತಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 281 ಸೋಂಕಿತರು ಸಾಮಾನ್ಯ, 697 ಸೋಂಕಿತರು ಆಕ್ಸಿಜನ್, 34 ಸೋಂಕಿತರು ಎಚ್ಎಫ್ಎನ್ಸಿ, 52 ಸೋಂಕಿತರು ವೆಂಟಿಲೇಟರ್ 34 ಸೋಂಕಿತರು ವೆಂಟಿಲೇಟರ್ ರಹಿತ, 2654 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 460 ಸೋಂಕಿತರು ಕೋವಿಡ್ ಕೇರ್ ಸೆಂಟರ್ನಲ್ಲಿ ಇದ್ದಾರೆ.