26/11 ಮಾದರಿ ದಾಳಿಗೆ ಲಷ್ಕರ್ ಸಂಚು
ಭೂಗತ ಪಾತಕಿ ದಾವೂದ್ ಸಹಕಾರ; ಐಎಸ್ಐ ಕೈವಾಡ ಶಂಕೆ
Team Udayavani, May 12, 2020, 6:15 AM IST
ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ಕೈಜೋಡಿಸಿರುವ ಲಷ್ಕರ್-ಎ-ತಯ್ಯಬಾ ಉಗ್ರಗಾಮಿ ಸಂಘಟನೆಯು 26/11ರ ಮುಂಬಯಿ ದಾಳಿಯ ಮಾದರಿಯಲ್ಲೇ ಮತ್ತೂಂದು ಭಯೋ ತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಗುಪ್ತಚರ ಮೂಲಗಳು ಬಯಲು ಮಾಡಿವೆ.
ಲಷ್ಕರ್ ಮತ್ತು ದಾವೂದ್ ಜತೆಯಾಗಿ ರೂಪಿಸುತ್ತಿರುವ ಈ ಸಂಚಿನ ಹಿಂದೆ ಪಾಕ್ ಗೂಢಚರ ಸಂಸ್ಥೆ ಐಎಸ್ಐ ಕೈವಾಡ ಇರುವ ಶಂಕೆಯನ್ನು ಗುಪ್ತಚರ ಮೂಲಗಳು ವ್ಯಕ್ತ ಪಡಿಸಿವೆ. ಇಸ್ಲಾಮಾಬಾದ್ನಲ್ಲಿರುವ ತನ್ನ ಫಾರ್ಮ್ ಹೌಸ್ಗೆ ಐಎಸ್ಐಯ ಕೆಲವು ಸದಸ್ಯರೊಂದಿಗೆ ದಾವೂದ್ ರವಿವಾರ ಬಂದು ಹೋಗಿದ್ದಾನೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಗುಪ್ತಚರ ಸಂಸ್ಥೆಗಳ ಅನುಮಾನ ಮತ್ತಷ್ಟು ಬಲವಾಗಿದೆ.
ಉದ್ದೇಶ ಏನು?
ಭಾರತದ ಭದ್ರತಾ ಪಡೆಗಳು ಕೋವಿಡ್-19 ಸೋಂಕಿನ ಪರಿಸ್ಥಿತಿ ನಿಭಾಯಿಸುವತ್ತ ಗಮನಹರಿಸಿರುವ ಈ ಸಂದರ್ಭದಲ್ಲಿ ಹಲವು ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಐಎಸ್ಐಯ ಉದ್ದೇಶ. ದಾಳಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಸಮುದ್ರದ ಮೂಲಕ ಗುಜರಾತ್ ಯಾ ಮಹಾರಾಷ್ಟ್ರಕ್ಕೆ ಕಳುಹಿಸುವುದು ಲಷ್ಕರ್ ಮುಖಂಡರ ಯೋಜನೆ. ಲಷ್ಕರ್ ಮುಖಂಡ ಅಬ್ದುಲ್ ರೆಹಮಾನ್ ಮಕ್ಕಿ ಇತ್ತೀಚೆಗೆ ಕರಾಚಿಗೆ ಭೇಟಿ ನೀಡಿ ದಾವೂದ್ನನ್ನು ಭೇಟಿಯಾಗಿ ಮುಂದಿನ ನಡೆ, ಕ್ರಮಗಳ ಬಗ್ಗೆ ಚರ್ಚಿಸಿದ್ದಾನೆ ಎಂದು ತಿಳಿದುಬಂದಿದೆ.
ಇದೇ ವೇಳೆ ಹಂದ್ವಾರದಲ್ಲಿ ಭಾರತೀಯ ಸೇನೆಯ ಮೇಜರ್ ಹುತಾತ್ಮರಾದ ಬಳಿಕ ಭಾರತ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಭಯದಿಂದ ಪಾಕಿಸ್ಥಾನವು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ದಾವೂದ್ ಪಾತ್ರವೇನು?
ದಾಳಿಗೆ ಅಗತ್ಯ ಶಸ್ತ್ರಾಸ್ತ್ರ,ಸ್ಫೋಟಕಗಳನ್ನು ಲಷ್ಕರ್ ಸರಬರಾಜು ಮಾಡಲಿದ್ದು,ಭಾರತದಲ್ಲಿ ಇರುವ “ಡಿ ಕಂಪೆನಿ’ ಸದಸ್ಯರು ದಾಳಿ ನಡೆ ಯುವ ನಗರಗಳಿಗೆ ತಲುಪಿಸುವ ಜತೆಗೆ ದಾಳಿ ಕೂಡ ನಡೆಸಬೇಕು ಎಂಬುದು ಯೋಜನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು
Sunil Narine ನಿವೃತ್ತಿ ತೊರೆದು ಟಿ20 ವಿಶ್ವಕಪ್ ಆಡಲಿ: ಪೊವೆಲ್
ಸಮಸ್ಯೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಿ: ಭಾರತ, ಪಾಕ್ಗೆ ಅಮೆರಿಕ ಸಲಹೆ
MUST WATCH
ಹೊಸ ಸೇರ್ಪಡೆ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು