ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
Team Udayavani, Dec 23, 2020, 6:24 PM IST
ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ – ಬನಹಟ್ಟಿ ತಾಲ್ಲೂಕಿನ ಯರಗಟ್ಟಿ ಗ್ರಾಮದ ರೈತ ವಿಠ್ಠಲ ಮಾಯಪ್ಪ ಮೀಸೆನ್ನವರ(38) ಸಾಲಬಾಧೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ರೈತ ವಿಠ್ಠಲ 2 ಎಕರೆ ಜಮೀನು ಹೊಂದಿದ್ದು, ಬನಹಟ್ಟಿಯ ಸ್ಟೇಟ್ ಬ್ಯಾಂಕನಲ್ಲಿ 40 ಸಾವಿರ, ಚಿಮ್ಮಡ ಪಿಕೆಪಿಎಸ್ ನಲ್ಲಿ 50 ಸಾವಿರ ಸಾಲ, ಹಾಗೂ ಇತರೆ ಕೈಗಡ ಸಾಲವನ್ನು ಹೊಂದಿದ್ದು ಬೆಳೆ ಸರಿಯಾಗಿ ಬಾರದೇ ಇರುವುದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂದು ಮನನೊಂದು ತಮ್ಮ ಯರಗಟ್ಟಿಯ ತೋಟದ ಮನೆಯ ಅಡುಗೆ ಕೋಣೆಯಲ್ಲಿ ಹೆಂಡತಿ ಮಕ್ಕಳು ಮಲಗಿ ಕೊಂಡಾಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ರವಿಕುಮಾರ ಧರ್ಮಟ್ಟಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಓಡಿಸೋಣ… ನಮ್ಮ ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಓದಿಸೋಣ : ಸುರೇಶ್ ಕುಮಾರ್