ಬೆಂಗಳೂರಿನಲ್ಲಿದ್ದರೂ ಊರಿನಲ್ಲಿಯೇ ನನ್ನ ದೀಪಾವಳಿ ಸಂಭ್ರಮದ ಆಚರಣೆ


Team Udayavani, Oct 28, 2019, 7:00 AM IST

deepavalli-tdy-3

ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ನನಗೆ ಎಲ್ಲಿಲ್ಲದ ಸಂಭ್ರಮ. ಬಾಲ್ಯದಿಂದ ಅದೆಷ್ಟೋ ಆಚರಣೆಯಲ್ಲಿ ವಿಶೇಷವಾಗಿ ದೀಪಾವಳಿ ನನ್ನ ಮೆಚ್ಚಿನ ಹಬ್ಬ ಎಂದರೆ ತಪ್ಪಾಗಲಾರದು. ಕಳೆದ 12 ವರ್ಷದಿಂದ ಬೆಂಗಳೂರಲ್ಲಿ ನೆಲೆಸಿದರು ದೀಪಾವಳಿಗೆ ನನ್ನ ಊರು ಕಾಸರಗೋಡಿಗೆ ತಲಪುತ್ತೇನೆ. ಇದಕ್ಕೆಲ್ಲ ಕಾರಣ ಬಾಲ್ಯದಲ್ಲಿ ದೀಪಾವಳಿ ಆಚರಣೆಯ ಹಿನ್ನೆಲ್ಲೆ ಮತ್ತು ಅದನ್ನು ಆಚರಣೆ ಮಾಡಿ ಬಂದಂತಹ ರೀತಿ.

ಬೆಂಗಳೂರಿನಿಂದ ದೀಪಾವಳಿಗೆ ಊರಿಗೆ ಹೋಗುವುದೆಂದರೆ ಇತ್ತೀಚೆಗೆ ಹರಸಾಹಸ ಪಡಬೇಕು. ಕೆಲಸದ ಒತ್ತಡದ ನಡುವೆ ದೀಪಾವಳಿಗೋಸ್ಕರ ಎಲ್ಲ ಕೆಲಸವನ್ನು ಆದಷ್ಟು ಮುಂಚಿತವಾಗಿ ಮುಗಿಸುವ ಕಾರ್ಯ ಒಂದೆಡೆ ಆದರೆ ಅಲಂಕಾರಿಕ ವಸ್ತುಗಳು, ಸಿಹಿತಿಂಡಿ ಮತ್ತು ಪಟಾಕಿ ಮುಂತಾದವುಗಳನ್ನು ಮೊದಲಿಗೆ ಖರೀದಿಸಿ ಅದನ್ನೆಲ್ಲ ನಮ್ಮ ಬಟ್ಟೆ ಜೊತೆ ಬ್ಯಾಗ್ ನಲ್ಲಿ ಸೇರಿಸುದು ನಮಗೆ ಮಹಾಸಾಧನೆಯೇ ಸರಿ.

ಯಾಕೆಂದರೆ ಸಾಧಾರಣವಾಗಿ ಎಲ್ಲ ಬಸ್ ಟಿಕೆಟ್ ಬೆಲೆ ಗಗನಕ್ಕೆ ಏರಿರುತ್ತದೆ. ಅದಕ್ಕೆ ನಮ್ಮ ಪ್ರಯಾಣ  ಕರ್ನಾಟಕ ಸಾರಿಗೆಯ ಕೆಂಪು ಬಸ್ಸು ಈ ಸಮಯದಲ್ಲಿ ಫೇಮಸ್ ನಮಗೆಲ್ಲ. ಎಲ್ಲರೂ ಊರಿಗೆ ತೆರಳುವುದರಿಂದ ನಮ್ಮ ಲಗೇಜ್ ಜಾಸ್ತಿ ಆದರೆ ಕಿರಿಕಿರಿ ಬೇರೆ. ಇದೆಲ್ಲದರ ನಡುವೆ ಟ್ರಾಫಿಕ್ ಕಿರಿಕಿರಿ ಬೇರೆ.. ಯಾವಾಗ ಊರಿಗೆ ತಲುಪಿ ದೀಪಾವಳಿಯ ತಯಾರಿ ಮಾಡುವುದು ಎನ್ನುವ ಚಿಂತೆ ಬಿಟ್ಟರೆ ಬೇರೆ ಯಾವುದೇ ಕಷ್ಟಗಳಿದ್ದರು  ನೆನಪಿಗೆ ಬಾರದಂತೆ ಮಾಡುವ ಹಬ್ಬವೆಂದರೆ ತಪ್ಪಾಗಲಾರದು.

ಜೀವನದ ಬೆಳಕಿನ ಈ ಹಬ್ಬ ಬಾಲ್ಯದ ಚೇಷ್ಟೆಗಳನ್ನು ನೆನಪಿಸಿದೆ. ಚಿಕ್ಕವನಿದ್ದಾಗ ಪಟಾಕಿಗಾಗಿ ಹೊಡೆದಾಡಿದ ಚಿತ್ರಣ ಮನಸಿನಲ್ಲಿ ಮೂಡುತ್ತದೆ. ದೀಪಾವಳಿಗೆ ತೆಂಗಿನ ಎಣ್ಣೆ ದೇಹದ ಎಲ್ಲ ಭಾಗಗಳಿಗೆ ಹಚ್ಚಿ, ಬಿಸಿ ನೀರಿನಿಂದ ದೇಹದ ಕೊಳೆಯನ್ನು ತೆಗೆಯುವುದು ಒಂದು ವಿಶೇಷವಾದ ಸಂಪ್ರದಾಯ. ಈ ಸಂಪ್ರದಾಯಗಳು ಇಂದಿಗೂ ನಮ್ಮಲ್ಲಿರುವುದು ಮುಖ್ಯವಾಗಿ ಅನ್ಯೋನ್ಯತೆಯಿಂದ ಸಂತೋಷವನ್ನು ಹಂಚಿ ಸಿಹಿ ತಿಂದು ಕಳೆದ ಎಲ್ಲ ಕಷ್ಟಗಳನ್ನು ದೂರಮಾಡಿ ಉಲ್ಲಾಸಭರಿತವಾಗಿಸುವಲ್ಲಿ ದೀಪಾವಳಿ ಹಬ್ಬ ಬಹುಮುಖ್ಯ ಪಾತ್ರವಹಿಸುತ್ತದೆ. ರಾತ್ರಿ ಆದಂತೆ ಎಲ್ಲರ ಮನೆಯಲ್ಲಿ ದೀಪಗಳದ್ದೇ ಅಲಂಕಾರ. ಹಣತೆ ಗೆ ಎಣ್ಣೆಯನ್ನು ಹಾಕಿ ದೀಪವನ್ನು ಉರಿಸಿ, ಪಟಾಕಿ ಸಿಡಿಸಿ ಯಾರ ಮನೆಯಲ್ಲಿ ಜಾಸ್ತಿ  ಸಿಡಿಸಿದ್ದಾರೆ ಎಂದು ತಿಳಿಯುವುದೇ ಒಂದು ಕುತೂಹಲ. ದೀಪದ ಅಲಂಕಾರದ  ಜೊತೆ ಫೋಟೋ  ತೆಗೆಸಿ ಮೊಬೈಲ್ ನಲ್ಲಿ ಅಪ್ಲೋಡ್ ಮಾಡದಿದ್ದರೆ ಈಗಿನ  ಹುಡುಗರಿಗಂತೂ ನಿದ್ರೆಯೇ ಬಾರದು. ಹುಡುಗಿಯರಿಗಂತೂ ಸೆಲ್ಫಿಯೇ ಮುಖ್ಯ. ಏನೇ ಇರಲಿ ಅಂದಿನಿಂದ ಇಂದಿಗೂ ದೀಪ ಬೆಳಗುವ ದೀಪಾವಳಿ ಆಚರಣೆಯಲ್ಲಿ ಸ್ವಲ್ಪ ಬದಲಾವಣೆ ಆದರೂ ಆ ಸಂತೋಷಕ್ಕೆ ಎಲ್ಲರು ಪಾತ್ರರಾಗಿರುತ್ತಾರೆ… ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು….

 

-ನವೀನ್ ಚಂದ್ರ, ಕಾಸರಗೋಡು

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.