ಈ ಬಾರಿಯೂ ಡ್ಯಾಂಗಳು ಭರ್ತಿಯಾಗುವುದು ಡೌಟು?
ಕೈಕೊಟ್ಟಿರುವ ಮುಂಗಾರು, ಮುಂಗಾರು ಪೂರ್ವ ಮಳೆ; ಜಲಾಶಯಗಳಿಗೆ ಹರಿದು ಬರದ ನಿರೀಕ್ಷಿತ ಒಳಹರಿವು
Team Udayavani, Jul 2, 2019, 6:00 AM IST
ಬೆಂಗಳೂರು: ಸತತ ಬರದಿಂದ ಬರಿದಾಗಿರುವ ರಾಜ್ಯದ ಜಲಾಶಯಗಳು ಈ ಬಾರಿಯೂ ಭರ್ತಿಯಾಗುವುದು ಅನುಮಾನವಾಗಿದ್ದು, ಇದು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
‘ಉದಯವಾಣಿ’ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಮಂಕಾದ ಮುಂಗಾರು; ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ’ ಕುರಿತ ಸಂವಾದದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ)ದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ, ಈ ಬಾರಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದರೆ, ಮುಂಗಾರು ಮಳೆಯಿಂದ ಒಳಹರಿವು ಹೆಚ್ಚಳ ಆಗುತ್ತಿತ್ತು. ಆದರೆ, ಜೂನ್ 14ಕ್ಕೆ ಮುಂಗಾರು ಮಳೆ ಪ್ರವೇಶ ಆಗಿದೆ. ಅದೂ ನಿರೀಕ್ಷಿತ ಮಟ್ಟದಲ್ಲಿ ಪ್ರಬಲವಾಗಿಲ್ಲ. ಇದರಿಂದ ಕೆಆರ್ಎಸ್ಗೆ ಕೇವಲ 2.85 ಟಿಎಂಸಿ ನೀರು ಬಂದಿದೆ. ವಾಡಿಕೆಯಂತೆ ಜೂನ್ನಲ್ಲಿ ಅಣೆಕಟ್ಟೆಗೆ 31.57 ಟಿಎಂಸಿ ನೀರು ಬರಬೇಕಿತ್ತು ಎಂದರು. ಕಳೆದ ವರ್ಷ ಈ ಹೊತ್ತಿಗೆ 76 ಟಿಎಂಸಿ ಒಳಹರಿವು ಇತ್ತು.
ಜೂನ್ನಲ್ಲಿ ಶೇ. 27ರಷ್ಟು ಮಳೆ ಕೊರತೆ ಆಗಿದೆ. ಜುಲೈನಲ್ಲಿ ವಾಡಿಕೆ ಮಳೆಯಾದರೂ ಎಂದಿನಂತೆ ಒಳಹರಿವು ಬರುವುದು ಅನುಮಾನ. ಹಾಗಾಗಿ, ಜಲಾಶಯಗಳ ಸ್ಥಿತಿ ಆಶಾದಾಯಕವಾಗಿರುವುದಿಲ್ಲ. ಆದ್ದರಿಂದ ರೈತರು ಅದಕ್ಕೆ ಪೂರಕವಾಗಿ ಬೆಳೆಗಳ ಬಿತ್ತನೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೆಆರ್ಎಸ್ಗೆ ಜುಲೈನಲ್ಲಿ 92 ಟಿಎಂಸಿ ಹಾಗೂ ಆಗಸ್ಟ್ನಲ್ಲಿ 90 ಟಿಎಂಸಿ ನೀರು ಬರಬೇಕಿದೆ. ಆಗಸ್ಟ್ನಲ್ಲಿ ಮತ್ತೆ ಕೊಂಚ ಮಳೆ ಕೊರತೆ ನಿರೀಕ್ಷೆ ಇದೆ. ಹೀಗಾಗಿ ಡ್ಯಾಂಗಳ ಸ್ಥಿತಿ ಆಶಾದಾಯಕವಾಗಿಲ್ಲ ಎಂದರು.
ಆಗಸ್ಟ್ 4ರವರೆಗೆ ಅವಕಾಶ ಇದೆ: ಹವಾಮಾನ ತಜ್ಞ ಹಾಗೂ ಬೆಂಗಳೂರು ಕೃಷಿ ವಿವಿ ಕುಲಸಚಿವ ಪ್ರೊ.ಎಂ.ಬಿ. ರಾಜೇಗೌಡ ಮಾತನಾಡಿ, ಮುಂಗಾರು ತಡವಾಗಿದ್ದರೂ ರೈತರು ಆತಂಕ ಪಡುವ ಅಗತ್ಯವಿಲ್ಲ. ಯಾಕೆಂದರೆ, ಆಗಸ್ಟ್ 4ರವರೆಗೂ ದೀರ್ಘಾವಧಿ ಬೆಳೆಗಳ ಬಿತ್ತನೆಗೆ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಶೇ. 1ರಿಂದ 1.5ರಷ್ಟು ಹೆಚ್ಚಳ ಆಗಿದೆ. ಆದರೆ, ಅದರ ಹಂಚಿಕೆ ಸರಿಯಾಗಿ ಆಗುತ್ತಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವೈಜ್ಞಾನಿಕವಾಗಿ ಮಳೆ ಹಂಚಿಕೆಯನ್ನು ವಿಶ್ಲೇಷಿಸಿ, ಲಭ್ಯತೆಗೆ ತಕ್ಕಂತೆ ಕೃಷಿ ಪದ್ಧತಿ ಮಾರ್ಪಾಡು ಮಾಡಿಕೊಳ್ಳಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು