ತಂದೆ ತುಂಬಾ ಸ್ಟ್ರಿಕ್ಟ್ ಅವರನ್ನು ಕರೆದುಕೊಂಡು ಹೋಗಿ : ದ್ರಾವಿಡ್ ಮಗನಿಂದ ಗಂಗೂಲಿಗೆ ದೂರು!
Team Udayavani, Nov 15, 2021, 8:30 AM IST
ಶಾರ್ಜಾ : ರಾಹುಲ್ ದ್ರಾವಿಡ್ ಅವರ ಮಗ ಅಪ್ಪನ ಬಗ್ಗೆ ದೂರು ಸಲ್ಲಿಸಿದ್ದರಿಂದಲೇ ತಾನು ಅವರನ್ನು ಟೀಮ್ ಇಂಡಿಯಾ ಕೋಚ್ ಆಗಿ ನೇಮಿಸಿದೆ ಎಂಬುದಾಗಿ ಸೌರವ್ ಗಂಗೂಲಿ ಚಟಾಕಿ ಹಾರಿಸಿದ್ದಾರೆ!
“40ನೇ ಶಾರ್ಜಾ ಇಂಟರ್ನ್ಯಾಶನಲ್ ಬುಕ್ ಫೇರ್’ ಕಾರ್ಯಕ್ರಮದಲ್ಲಿ ಸೌರವ್ ಗಂಗೂಲಿ ಇಂಥದೊಂದು ತಮಾಷೆ ಮಾಡಿ ನಗು ಉಕ್ಕಿಸಿದರು.
“ನನಗೆ ಕರೆ ಮಾಡಿದ ರಾಹುಲ್ ದ್ರಾವಿಡ್ ಮಗ, ತನ್ನ ತಂದೆ ಸಿಕ್ಕಾಪಟ್ಟೆ ಕಟ್ಟುನಿಟ್ಟಿನವರು, ಬಹಳ ಸ್ಟ್ರಿಕ್ಟ್. ಅವರನ್ನು ಕರೆದುಕೊಂಡಿ ಹೋಗಿ ಎಂದು ನನಗೆ ದೂರು ಸಲ್ಲಿಸಿದ. ಹೀಗಾಗಿ ನಾವು ದ್ರಾವಿಡ್ ಅವರನ್ನು ಟೀಮ್ ಇಂಡಿಯಾ ಕೋಚ್ ಆಗಿ ನೇಮಿಸಿದೆವು’ ಎಂದು ದಾದಾ ನಗುತ್ತ ಹೇಳಿದರು.