ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ : ಮನೆಗಳಿಗೆ ನುಗ್ಗಿದ ಒಳಚರಂಡಿ ನೀರು
Team Udayavani, Mar 19, 2021, 6:05 AM IST
ಉಡುಪಿ: ಉಡುಪಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪದ ಜನನಿಬಿಡ ಪ್ರದೇಶದಲ್ಲಿ ಗುರುವಾರ ಒಳಚರಂಡಿ ಅವ್ಯವಸ್ಥೆಯಿಂದ ಒಳಚರಂಡಿ ನೀರು ರಸ್ತೆ ಮೇಲೆ ಹರಿದದ್ದಲ್ಲದೆ ಮೂರು ಮನೆಗಳಿಗೂ ನುಗ್ಗಿದೆ.
ವಾರದಲ್ಲಿ ಹೀಗೆ ಎರಡು ಬಾರಿ ರಸ್ತೆ ಮೇಲೆ ನೀರು ಹರಿಯುತ್ತಿತ್ತು. ಕಳೆದ 15 ವರ್ಷಗಳಲ್ಲಿ ಈ ತೆರನಾಗಿ ಮನೆಗಳಿಗೆ ನುಗ್ಗಿದ್ದು ಇದೇ ಮೊದಲ ಬಾರಿ ಎಂದು ಸ್ಥಳೀಯ ನಿವಾಸಿ ಅಕ್ಷಯಕುಮಾರ ಶೆಟ್ಟಿ ತಿಳಿಸಿದ್ದಾರೆ.
ಈ ಪರಿಸರದಲ್ಲಿ ಹಲವು ಹೊಟೇಲ್ಗಳು, ಆಸ್ಪತ್ರೆಗಳಿವೆ. ಇವುಗಳಿಗೆ ನನ್ನ ತಿಳಿವಳಿಕೆ ಪ್ರಕಾರ ಎಸ್ಟಿಪಿ ಇಲ್ಲ. ಕೆಲವು ಅಪಾರ್ಟ್ಮೆಂಟ್ಗಳಿಗೂ ಎಸ್ಟಿಪಿ ಇಲ್ಲವೆಂದು ತಿಳಿದುಬಂದಿದೆ. ಇವರೆಲ್ಲರೂ ಒಳಚರಂಡಿಗೆ ಹರಿದು ಬಿಡುತ್ತಿದ್ದಾರೆ. ಈಗ ಪರಿಸ್ಥಿತಿ ಬಿಗಡಾಯಿಸಿ ಮನೆಗಳಿಗೆ ನುಗ್ಗಿದೆ. ಇದೇ ರೀತಿ ಮುಂದುವರಿದರೆ ಮಳೆಗಾಲದಲ್ಲಿ ಎಲ್ಲರ ಮನೆಗಳಿಗೂ ತ್ಯಾಜ್ಯ ನೀರು ನುಗ್ಗುವ ಭೀತಿ ಇದೆ ಎಂದು ಶೆಟ್ಟಿ ಹೇಳಿದರು.
ನಗರಸಭೆ ಸಿಬಂದಿ, ಸದಸ್ಯರಿಗೆ ಖಾರವಾಗಿ ಹೇಳಿದ ಅನಂತರ ಸರಿಪಡಿಸಿದರು ಎಂದು ಶೆಟ್ಟಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್