ಡ್ರಗ್ ಮಾಫಿಯಾ ತನಿಖೆ ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ: ಸಚಿವ ಸಿಟಿ ರವಿ
Team Udayavani, Sep 5, 2020, 3:23 PM IST
ಚಿಕ್ಕಮಗಳೂರು : ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ವಿಚಾರವಾಗಿ ನಟಿ ರಾಗಿಣಿ ತನಿಖೆ ವಿಚಾರವಾಗಿ ಮಾತನಾಡಿದ ಸಚಿವ ಸಿಟಿ ರವಿ, ತನಿಖೆ ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ, ಸಾಂದರ್ಭೀಕ ಸಾಕ್ಷಿಯಲ್ಲಿ ರಾಗಿಣಿ ಅವರ ಮೇಲೆ ಸಂಶಯ ಬಂದು ತನಿಖೆ ನಡೆಯುತ್ತಿದೆ ಅವರಿಗೆ ನೇರವಾಗಿ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲ, ಒಬ್ಬ ನಟಿಯಾಗಿ ತನ್ನದೇ ಆದ ಸ್ಥಾನ ಪಡೆದವರು, ನಮ್ಮ ಪಕ್ಷಕ್ಕೂ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಕಾಂಪ್ರಮೈಸ್ ಮಾಡ್ಕೊಂಡು ಅವರ ಜೊತೆ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುವ ಪಕ್ಷ ನಮ್ಮದ್ದಲ್ಲ, ಯಾರೇ ಆದ್ರು ಸರಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ.
ಕೆಲವರು ವ್ಯವಸ್ಥೆ ಜೊತೆ ಹೊಂದಾಣಿಕೆ ಮಾಡ್ಕೊಂಡು ಹಿಂದೆ ರಾಜಕಾರಣ ಮಾಡಿದ್ದಾರೆ, ಹಿಂದೆ ಅಧಿಕಾರದಲ್ಲಿದ್ದವರಿಗೆ ಓಲೈಸುವ, ಒತ್ತಡ ತರುವ ಕೆಲಸ ಮಾಡ್ಬೋದು, ಬಿಜೆಪಿ ಇಂತವರ ಜೊತೆ ರಾಜಿ ಮಾಡಿಕೊಂಡು ಸರ್ಕಾರ ಮಾಡಿಲ್ಲ ಮುಂದೆನೂ ಮಾಡಲ್ಲ, ಒತ್ತಡವಿದ್ರೆ ಇಷ್ಟೊಂದು ಸಮಗ್ರ ತನಿಖೆ ನಡೆಯುತ್ತಿರಲಿಲ್ಲ. ರಾಜ್ಯಕ್ಕೆ ಡ್ರಗ್ ಕೇಸ್ ಹೊಸದೇನಲ್ಲ, ಇಷ್ಟು ಗಂಭೀರವಾಗಿರೋದು ಇದೇ ಮೊದಲು ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ.
ಯಾವುದೇ ರೀತಿಯ ತೊಂದರೆ ಇಲ್ಲದೆ ತನಿಖೆ ನಡೆಯುತ್ತಿದೆ, ಹೊಸ ಆಯಾಮ ಸಿಕ್ಕರೆ ಕೇಂದ್ರದ ಸಹಾಯವನ್ನು ಕೂಡಾ ಪಡೆಯಬಹುದು ಎಂದರು.