ಲಂಕಾ ಬಳಿಕ ನೇಪಾಲವೂ ದಿವಾಳಿ! ಆರ್ಥಿಕತೆಯ ಅಸಮರ್ಪಕ ನಿರ್ವಹಣೆ, ಆದಾಯ ಕುಸಿತವೇ ಕಾರಣ

ಈ ಅಜಗಜಾಂತರದಿಂದಾಗಿ ಅಲ್ಲಿನ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿಯಲಾರಂಭಿಸಿದೆ

Team Udayavani, Apr 12, 2022, 10:00 AM IST

ಲಂಕಾ ಬಳಿಕ ನೇಪಾಲವೂ ದಿವಾಳಿ! ಆರ್ಥಿಕತೆಯ ಅಸಮರ್ಪಕ ನಿರ್ವಹಣೆ, ಆದಾಯ ಕುಸಿತವೇ ಕಾರಣ

ಕೊಲಂಬೋ/ ಕಠ್ಮಂಡು: ಭಾರತದ ಮತ್ತೂಂದು ನೆರೆಯ ದೇಶ ನೇಪಾಲ ಕೂಡ, ಶ್ರೀಲಂಕಾದಂತೆಯೇ ಆರ್ಥಿಕ ದುಃಸ್ಥಿತಿಯನ್ನು ನಿಧಾನವಾಗಿ ತಲುಪುತ್ತಿದ್ದು, ಅಲ್ಲಿನ ಜನರಲ್ಲಿ ಹೊಸ ಆತಂಕ ಸೃಷ್ಟಿಸಿದೆ. ರಾಜ ಕೀಯ ಅಸ್ಥಿರತೆ, ಅಸಮರ್ಪಕ ಹಣ ಕಾಸು ನಿರ್ವಹಣೆ, ವಿದೇಶಿ ವಿನಿಮಯ ಕುಸಿತ, ರಫ್ತು- ಆಮದಿನ ನಡುವೆ ದೊಡ್ಡಮಟ್ಟದ ಏರುಪೇರು ಈ ವಿಚಾರಗಳು ಆ ದೇಶವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿವೆ.

ಕೊರೊನಾ ಸಂಕಷ್ಟದಿಂದಾಗಿ ದೇಶದ ಪ್ರಮುಖ ಆದಾಯ ಮಾರ್ಗಗಳಾದ ಪ್ರವಾಸೋದ್ಯಮ ಹಾಗೂ ರಫ್ತು ವ್ಯವಹಾರದಲ್ಲಿ ತೀವ್ರ ಇಳಿಮುಖ ದಾಖಲಾಯಿತು.

ಜತೆಗೆ 2021ರ ಜುಲೈಯಿಂದಲೇ ಆ ದೇಶದ ವಿದೇಶಿ ವಿನಿಮಯ ಕುಸಿತ ಕಾಣುತ್ತಾ ಸಾಗಿತ್ತು. ಈ ವಿನಿಮಯಕ್ಕೆ ಬರುತ್ತಿದ್ದ ಆದಾಯದಲ್ಲಿ ಸಿಂಹಪಾಲು ಬರುತ್ತಿದ್ದುದು ಸೋಯಾ ಎಣ್ಣೆಯ ರಫ್ತಿನಿಂದ. ಇದು ಬಿಟ್ಟರೆ, ತಾಳೆ ಎಣ್ಣೆ ರಫ್ತಿನಿಂದ. ಈ ವ್ಯವಹಾರವೂ ಸೊರಗಿದ್ದರಿಂದಾಗಿ 89 ಸಾವಿರ ಕೋಟಿ ರೂ. ಗಳಷ್ಟಿದ್ದ ವಿದೇಶಿ ವಿನಿಮಯದ ಆದಾಯ 73 ಸಾವಿರ ಕೋಟಿ ರೂ.ಗಳಿಗೆ ಇಳಿಯಿತು. ಇದೇ ಅವಧಿಯಲ್ಲಿ ರಫ್ತಿನಿಂದ ಬರುವ ಆದಾಯಕ್ಕಿಂತ ಆಮದಿಗಾಗಿ ದೇಶ ವ್ಯಯಿಸುವ ಹಣದ ಪ್ರಮಾಣ ಅಗಾಧವಾಗಿ ಹೆಚ್ಚಾಯಿತು. ಸದ್ಯಕ್ಕೆ, ರಫ್ತಿನಿಂದ ಬರುವ ಆದಾಯ 1.4 ಸಾವಿರ ಕೋಟಿ ರೂ.ಗಳಿದ್ದರೆ, ಆಮದಿಗಾಗಿ ಹೊರ ಹೋಗುತ್ತಿರುವ ಹಣ 1.1 ಲಕ್ಷ ಕೋ. ರೂ.ಗಳಿಷ್ಟಿದೆ. ಈ ಅಜಗಜಾಂತರದಿಂದಾಗಿ ಅಲ್ಲಿನ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿಯಲಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಲಂಕಾದಲ್ಲಿ ಹೆಚ್ಚು ಸಾವು ಸಂಭವ
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಅತ್ಯಗತ್ಯ ಔಷಧಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರಿಂದಾಗಿ, ಕೊರೊನಾ ಸಂದರ್ಭದಲ್ಲಿ ಉಂಟಾದ ಸಾವಿಗಿಂತ ಹೆಚ್ಚಿನ ಸಾವುಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಅಲ್ಲಿನ ವೈದ್ಯರು, ಸರಕಾರವನ್ನು ಎಚ್ಚರಿಸಿದ್ದಾರೆ. ಪ್ರಸ್ತುತ ಆ ದೇಶ, ವಿದ್ಯುತ್‌ ಉತ್ಪಾದನೆ, ಆಹಾರ, ಇಂಧನ ಕೊರತೆಗಳನ್ನೂ ಎದುರಿಸುತ್ತಿದೆ.

ಮತ್ತೂಂದೆಡೆ ಲಂಕಾದ ಜನತೆ ಹಸಿವಿನಿಂದ ತತ್ತರಿಸುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸರಕಾರಿ ನ್ಯಾಯ ಬೆಲೆ ಅಂಗಡಿಗಳ ಮುಂದೆ ದಿನವಿಡೀ ಸರದಿಯಲ್ಲಿ ಕಾಯುತ್ತಾ ನಿಂತರೂ ಅಗತ್ಯವಿರುವ ದಿನಸಿ ಸಿಗದಂತಾಗಿದೆ. ಖಾಸಗಿ ಮಾಲ್‌ಗ‌ಳಲ್ಲಿ ದಿನಸಿಯ ಬೆಲೆ ಮೂರು- ನಾಲ್ಕು ಪಟ್ಟು ಹೆಚ್ಚಾಗಿದೆ. ಆರ್ಥಿಕವಾಗಿ ಅನುಕೂಲವಿದ್ದವರು ಇವನ್ನು ಹೇರಳವಾಗಿ ಕೊಳ್ಳಲು ಮುಂದೆ ಬರುತ್ತಿದ್ದಾರಾದರೂ ಒಬ್ಬರಿಗೆ ಇಂತಿಷ್ಟೇ ದಿನಸಿ ಎಂದು ಸೀಮಿತಗೊಳಿಸಲಾಗಿದೆ. ಇನ್ನು ದೇಶಾದ್ಯಂತ ಡೀಸೆಲ್‌ ಬರ ಆವರಿಸಿರುವುದರಿಂದ ತರಕಾರಿಗಳ ಬೆಲೆ ಕೂಡ ಗಗನಕ್ಕೇರಿದೆ. ಹಳ್ಳಿಗಳಲ್ಲಿನ ರೈತರು ತಾವು ಬೆಳೆದ ತರಕಾರಿಗಳನ್ನು ಅವುಗಳ ಸಾಗಾಣಿಕೆಗೆ ಬೇರೆ ದಾರಿ ಕಾಣದೇ ತಾವೇ ತಿನ್ನುವಂತಾಗಿದೆ.

ಎಲ್‌ಟಿಟಿಇ ರೀತಿ ಬಿಕ್ಕಟ್ಟು ಅಂತ್ಯ!
ದೇಶವು ಆರ್ಥಿಕ ಬಿಕ್ಕಟ್ಟಿನಲ್ಲಿ ನಲುಗುತ್ತಿರುವ ನಡುವೆಯೇ ಸೋಮವಾರ ದೇಶವನ್ನುದ್ದೇಶಿಸಿ ಮಾತನಾಡಿರುವ ಶ್ರೀಲಂಕಾ ಪ್ರಧಾನಿ ಮಹೀಂದಾ ರಾಜಪಕ್ಸ, “ದೇಶದಲ್ಲಿ ಒಂದು ದಶಕದ ಹಿಂದೆ ಎಲ್‌ಟಿಟಿಇಯನ್ನು ಹೇಗೆ ನಾಶ ಮಾಡಿದೆವೋ ಅದೇ ಮಾದರಿಯಲ್ಲಿ ಈಗಿರುವ ಬಿಕ್ಕಟ್ಟನ್ನೂ ಅಂತ್ಯಗೊಳಿಸುತ್ತೇವೆ’ ಎಂದು ಘೋಷಿಸಿದ್ದಾರೆ. ಹುದ್ದೆ ಕಳೆದುಕೊಳ್ಳುವ ಭೀತಿಯ ನಡುವೆಯೇ ಟಿವಿ ಮೂಲಕ ಮಾತನಾಡಿರುವ ಅವರು, “ನಾವು ನಮ್ಮ ಆರ್ಥಿಕತೆಯನ್ನು ಬಲಪಡಿಸ ಬೇಕು. 30 ವರ್ಷಗಳ ಯುದ್ಧವನ್ನು ಅಂತ್ಯಗೊಳಿಸಿದ ರೀತಿಯಲ್ಲೇ ಈ ಸಮಸ್ಯೆಯನ್ನೂ ಪರಿಹರಿಸುವ ಜವಾಬ್ದಾರಿ ನನ್ನದು’ ಎಂದಿದ್ದಾರೆ. ನಮ್ಮ ಸರಕಾರ ರಸ್ತೆಗಳು, ಬಂದರುಗಳು, ಮೂಲಸೌಕರ್ಯಗಳನ್ನು ನಿರ್ಮಿಸಿವೆ. ಇದನ್ನೆಲ್ಲ ನಿರ್ಮಿಸಿದ್ದು ನನ್ನ ಜನರು ಬೀದಿಗಿಳಿದು ಪ್ರತಿಭಟನೆ ಮಾಡಬೇಕೆಂದು ಅಲ್ಲ ಎಂದೂ ಮಹೀಂದಾ ಹೇಳಿದ್ದಾರೆ.

ಎಲ್‌ಟಿಟಿಇ ಪುನಶ್ಚೇತನ ಯತ್ನ
ಶ್ರೀಲಂಕಾದ ನಿಷೇಧಿತ ಉಗ್ರ ಸಂಘಟನೆ ಎಲ್‌ಟಿಟಿಇಯನ್ನು ಮರುಸ್ಥಾಪಿಸಲು ಯತ್ನಿಸುತ್ತಿರುವ ನಾಲ್ವರು ಭಾರತೀಯರ 3.59 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಈ ನಾಲ್ವರು ಡ್ರಗ್ಸ್‌ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದಾರೆ. ಕಳೆದ ವರ್ಷದ ಮಾರ್ಚ್‌ 18ರಂದು ಭಾರತೀಯ ಕರಾವಳಿ ರಕ್ಷಕ ಸಿಬಂದಿಯು ಶ್ರೀಲಂಕಾದ ದೋಣಿಯೊಂದನ್ನು ಜಪ್ತಿ ಮಾಡಿದಾಗ, 300 ಕೆಜಿ ಹೆರಾಯಿನ್‌, ಶಸ್ತ್ರಾಸ್ತ್ರಗಳು ಸಿಕ್ಕಿದ್ದವು. ಅದೇ ಪ್ರಕರಣ ಸಂಬಂಧ ಸುರೇಶ್‌ ರಾಜ್‌, ಸಬೇಶನ್‌, ರಮೇಶ್‌, ಸೌಂದರರಾಜನ್‌ ಎಂಬ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದೂ ಇ.ಡಿ. ಹೇಳಿದೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.