ಮಕ್ಕಳನ್ನು ಅವಮಾನಿಸಬೇಡಿ…ಮುಗ್ಧ ಮನಸ್ಸಿನ ಮೇಲೆ ಪರಿಣಾಮ!
ಎಲ್ಲರೆದುರು ಮಕ್ಕಳನ್ನು ಬಯ್ಯುವುದರಿಂದ ಪೋಷಕರು ಮಕ್ಕಳ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ.
Team Udayavani, Nov 28, 2020, 11:45 AM IST
ಮಕ್ಕಳು ತಂಟೆ ತಕರಾರು ಮಾಡುತ್ತಲೇ ಇರುತ್ತಾರೆ. ಹಾಗಂತ ಸಾರ್ವಜನಿಕ ಸ್ಥಳಗಳಲ್ಲಿ, ಮನೆಗೆ ಬಂದ ಅತಿಥಿಗಳ ಎದುರು ಬಯ್ಯುವುದು ಸರಿಯಲ್ಲ. ಇದು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುವುದು.
ಎಲ್ಲರ ಮುಂದೆ ಮಕ್ಕಳನ್ನು ಬೈಯ್ದರೆ ಅವರು ಮುಂದೆ ಆಕ್ರಮಣಕಾರಿ ನಡವಳಿಕೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮುಗ್ಧ ಮನಸ್ಸು ಮಣ್ಣಿನಂತೆ. ಅದರ ಮೇಲೆ ನಾಟಿದ ಭಾವನೆಯನ್ನು ಅವರು ಅನುಸರಿಸುತ್ತಾರೆ.
ಎಲ್ಲರೆದುರು ಬೈಯುತ್ತಿದ್ದರೆ ಅಥವಾ ಖಂಡಿಸಿದರೆ ಮಕ್ಕಳು ತಮ್ಮ ಗೆಳೆಯರೊಂದಿಗೂ ಅದೇ ರೀತಿ ವರ್ತಿಸುತ್ತಾರೆ. ಇದು ಅವರ ಮನಸ್ಸಿನ ಹತಾಶೆಯನ್ನು ಹೊರ ಹಾಕುವ ಮಾರ್ಗವಾಗತೊಡಗುತ್ತದೆ. ಎಲ್ಲರೆದುರು ಅವಮಾನ ಮಾಡಿದಾಗ ಮುಜುಗರ ಉಂಟಾಗಿ ಸಾರ್ವಜನಿಕ ಸ್ಥಳಗಳಿಂದ ದೂರವಿರಲು ಬಯಸುತ್ತದೆ.
ಎಲ್ಲರೆದುರು ಮಕ್ಕಳನ್ನು ಬಯ್ಯುವುದರಿಂದ ಪೋಷಕರು ಮಕ್ಕಳ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಪರಿಣಾಮವಾಗಿ ಮುಂದೆ ಮಕ್ಕಳು ಮುಕ್ತ ಮನಸ್ಸಿನಿಂದ ತಮ್ಮ ಭಾವನೆಗಳನ್ನು ಪ್ರಕಟಿಸದೇ ಇರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ:ಇರಾನ್ ನ ಪ್ರಮುಖ ನ್ಯೂಕ್ಲಿಯರ್ ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಶಂಕೆ?
ಎಲ್ಲರೆದುರು ಮಕ್ಕಳನ್ನು ಬಯ್ಯುವುದರಿಂದ ಮುಗ್ಧ ಮನಸ್ಸಿನ ಮೇಲೆ ಅಘಾತವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅದಷ್ಟು ಇದನ್ನು ತಪ್ಪಿಸುವುದು ಒಳ್ಳೆಯದು. ಎಲ್ಲರೆದುರು ನಯವಾಗಿ ತಿಳಿಸಿ. ಕೇಳದೇ ಇದ್ದರೆ ಅವರನ್ನು ದೂರ ಕರೆದುಕೊಂಡು ಹೋಗಿ ನಿಧಾನವಾಗಿ ಮನಸ್ಸಿಗೆ ನಾಟುವಂತೆ ಮಾತನಾಡಿ. ಮತ್ತೆ ಈ ತಪ್ಪು ಆಗ ಬಾರದು ಎಂದು ಎಚ್ಚರಿಸಿ. ಆಗ ಮಗು ತನ್ನ ತಪ್ಪನ್ನು ತಿದ್ದಿಕೊಂಡು ಎಲ್ಲರೆದುರು ಸ್ವಾಭಿಮಾನದಿಂದ ಹಾಗೂ ಧೈರ್ಯದಿಂದ ಬಂದು ನಿಲ್ಲುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
World Water Day: ಜುಳು ಜುಳು ಸದ್ದೇಕೆ ಉರಿ ಮೌನ
ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫಕೀರ
MUST WATCH
ಹೊಸ ಸೇರ್ಪಡೆ
Uttara Kannada BJP; ಅನಂತ್ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ
MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ
Congress; ಕೋಲಾರಕ್ಕೆ ಗೌತಮ್ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !