ಪ್ರವಾಸಿಗರನ್ನು ಸೆಳೆಯುತ್ತಿದೆ ಎತ್ತಪೋತ ಜಲಧಾರೆ
Team Udayavani, Jul 25, 2021, 7:18 PM IST
ಕಲಬುರಗಿ : ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕುಂಚಾವರಂ ವನ್ಯ ಜೀವಿಧಾಮದ ಅರಣ್ಯ ಪ್ರದೇಶದಲ್ಲಿರುವ ಎತ್ತಪೋತ ಜಲಧಾರೆ ಹರಿಯುವುದು ನೋಡಲು ದಿನನಿತ್ಯ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಮೈದುಂಬಿ ಹರಿವ ಎತ್ತಪೋತ ಜಲಧಾರೆಯನ್ನು ಕಣ್ತುಂಬಿಕೊಂಡು ಆನಂದಿಸಿದರು.
ಚಿಂಚೋಳಿ ತಾಲೂಕಿನಲ್ಲಿ ಸಾಕಷ್ಟು ಮಳೆ ಬೀಳುತ್ತಿದ್ದರಿಂದ ವನ್ಯಜೀವಿಧಾಮದಲ್ಲಿರುವ ಸಣ್ಣಪುಟ್ಟ ಜಲಧಾರೆಗಳು ಮೈದುಂಬಿ ಹರಿಯುತ್ತಿವೆ.ಚಂದ್ರಂಪಳ್ಳಿ ಜಲಾಶಯ ಇವುಗಳನ್ನು ನೋಡಲು ಆಂಧ್ರ ತೆಲಂಗಾಣ ಬೀದರ್ ಕಲಬುರಗಿ ರಂಗಾರೆಡ್ಡಿ ಮೇದಕ್ ಜಿಲ್ಲೆಗಳಿಂದ ಅನೇಕ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಜಲಧಾರೆಯನ್ನು ಕಂಡು ಆನಂದಿಸಿದ್ದಾರೆ.
ಇದನ್ನೂ ಓದಿ :ವ್ಯಕ್ತಿ ನಾಪತ್ತೆಯಾಗಿ ಹನ್ನೆರಡು ದಿನವಾದರೂ ಪತ್ತೆಯಾಗದ ದೇಹ : ಕಣ್ಣೀರಿನಲ್ಲಿ ಕುಟುಂಬಸ್ಥರು