ಉಂಗುರ ಧರಿಸುವುದರ ಹಿಂದಿದೆ ಒಂದು ಕುತೂಹಲ ವಿಷಯ!


Team Udayavani, Dec 23, 2021, 10:00 AM IST

ಉಂಗುರ ಧರಿಸುವುದರ ಹಿಂದಿದೆ ಒಂದು ಕುತೂಹಲ ವಿಷಯ!

ಕೆಲವೊಂದು ಆಭರಣಗಳನ್ನು ನಾವು ಆರೋಗ್ಯ್ ದೃಷ್ಟಿಯಿಂದ ಧರಿಸುತ್ತಿದ್ದರೆ ಇನ್ನೂ ಕೆಲವು ಆಭರಣಗಳನ್ನು ಪ್ಯಾಷನ್ ಗಾಗಿ ಧರಿಸುತ್ತೇವೆ. ಮತ್ತೆ ಕೆಲವು ಆಭರಣಗಳನ್ನು ಸಂಪ್ರದಾಯ, ಸಂಸ್ಕೃತಿಯ ಕಾರಣಕ್ಕಾಗಿ ಧರಿಸುತ್ತೇವೆ. ಹೀಗೆ ನಾವು ಧರಿಸುವ ಪ್ರತಿಯೊಂದು ಆಭರಣಗಳ ಹಿಂದೆಯೂ ಒಂದಲ್ಲಾ ಒಂದು ಕಾರಣ ಅಡಗಿರುವುದನ್ನು ಗಮನುಸಬಹುದಾಗಿದೆ. ಹಾಗೆ ನಾವು ಹಾಕಿಕೊಳ್ಳುವ ಉಂಗುರಕ್ಕೂ ಒಂದು ಕಾರಣ, ಮಹತ್ವ ಇರುವುದನ್ನು ಗಮನಿಸಬಹುದು.

ಉಂಗುರ ಎಂದ ಕೂಡಲೆ ನಮಗೆ ನೆನಪಾಗುವುದು ಒಂದು ದುಂಡನೆಯ ಆಕಾರ. ಅದು ಬೆರಳಿಗೆ ಹಾಕಿಕೊಳ್ಳುವ ಕೈ ಉಂಗುರ ಇರಬಹುದು ಅಥವಾ ಕಾಲಿಗೆ ಹಾಕಿಕೊಳ್ಳುವ ಕಾಲುಂಗುರ ಇರಬಹುದು. ಈ ಉಂಗುರ ಎನ್ನುವುದಕ್ಕೆ ಸುಮಾರು 2500 ವರ್ಷಗಳ ಇತಿಹಾಸ ಇದೆ ಎಂದೇ ಹೇಳಬಹುದು.  ಹಿಚ್ಹೈಟ್ ನಾಗರಿಕತೆಯು ಉಂಗುರಗಳನ್ನು ನಿರ್ಮಾಣ ಮಾಡಿತು. ಇದರಲ್ಲಿ ಸಿಗ್ನೆಟ್ ಉಂಗುರಗಳು ಸೇರಿವೆ. ಈಜಿಪ್ಟ್ ನ ಹಳೆಯ ನಾಗರಿಕರು ಲೋಹದ ಉಂಗುರವನ್ನು ತಯಾರಿಸಿ ವಿವಿಧ ಬೆರಳುಗಳಿಗೆ ಧರಿಸುತ್ತಿದ್ದರು.

ಈ ಉಂಗುರದಲ್ಲಿ ಲೋಹ, ಪ್ಲ್ಯಾಸ್ಟಿಕ್, ಕಲ್ಲು, ಕಟ್ಟಿಗೆ, ಮೂಳೆ, ಗಾಜು, ಹರಳು ರತ್ನ ವಜ್ರ, ಮಾಣಿಕ್ಯ, ನೀಲಮಣಿ ಅಥವಾ ಪಚ್ಚೆ ಯಂತಹ ವಸ್ತುಗಳನ್ನು ಬಳಸಲಾಗುತಿತ್ತು. ಇದನ್ನು ಧರಿಸುವ ವ್ಯಕ್ತಿಗಳು ತಮ್ಮ ತಮ್ಮ ರಾಶಿಗೆ ತಕ್ಕಂತೆ ತಮಗೆ ಬೇಕಾದ ರೀತಿಯಲ್ಲಿ ಉಂಗುರಗಳನ್ನು ಧರಿಸುತ್ತಿದ್ದರು. ಅಂದರೆ ಮೇಷ ರಾಶಿಗೆ ಒಂದು ತರಹದ ಉಂಗುರ, ಮೀನಾ ರಾಶಿಗೆ ಒಂದು ತರಹದ ಉಂಗುರ ಹೀಗೆ ಒಂದೊಂದು ರಾಶಿಯವರು ಒಂದೊಂದು ಹವಳ, ಮುತ್ತು ಗಳಿಂದ ಮಾಡಿದ ಉಂಗುರ ಧರಿಸುತ್ತಿದ್ದರು. ಈ ರಾಶಿಗಳ ಮೇಲೆ ಧರಿಸುವ ಉಂಗುರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಜನರು ನೀಡುತ್ತಿದ್ದರು.

ಈ ಉಂಗುರಗಳಲ್ಲಿ ಈಗೀಗ ಪ್ಯಾಷನ್ ಗಳ ಅಳವಡಿಕೆ ಆಗಿರುವುದನ್ನು ಗಮನಿಸಬಹುದು. ಒಂದೊಂದು ಉಂಗುರವು ಒಂದೊಂದು ತರಹದ ಡಿಸೈನ್ ಅನ್ನು ಹೊಂದಿರುತ್ತದೆ. ಅದನ್ನು ಧರಿಸಲು ಇಷ್ಟ ಪಡುವವರು ನಮಗೆ ಬೇಕಾದ ರೀತಿಯ ಉಂಗುರವನ್ನು ಧರಿಸಬಹುದಾಗಿದೆ.

ಹಾಗೆ ಈ ಉಂಗುರವನ್ನು ಬರಿ ಉಂಗುರದ ಬೆರಳಿಗೆ ಮಾತ್ರ ಹಾಕಿಕೊಳ್ಳುವುದಿಲ್ಲ. ಅದರ ಬದಲಾಗಿ ಕೈಯಲ್ಲಿ ಇರುವ ಎಲ್ಲಾ ಬೆರಳುಗಳಿಗೂ ಉಂಗುರವನ್ನು ಧರಿಸಲಾಗುತ್ತದೆ. ಕೆಲವರು ಜ್ಯೋತಿಷ್ಯ ವನ್ನು ನಂಬಿ ಹೆಬ್ಬೆರಳು ತೋರುಬೆರಳು ಅಥವಾ ಕಿರುಬೆರಳುಗಳಿಗೆ ಹಾಕಿಕೊಳ್ಳುತ್ತಾರೆ. ಇನ್ನೂ ಕೆಲವರು ಪ್ಯಾಷನ್ ಗಾಗಿ ತಮಗೆ ಇಷ್ಟವಾದ ಬೆರಳಿಗೆ ಧರಿಸುತ್ತಾರೆ. ಹೀಗೆ ಈ ಉಂಗುರವನ್ನು ತೊಡುವಲ್ಲಿಯೂ ಕೆಲವು ಕುತೂಹಲವಾದ ಅಂಶಗಳು ಅಡಗಿವೆ. ಈ ಮದುವೆಯ ಮುನ್ನ ಮದುವೆ ನಿಶ್ಚಯದ ಸಂದರ್ಭದಲ್ಲಿ ಮದುವೆಯ ಗುರುತಿಗಾಗಿ ಈ ಉಂಗುರವನ್ನು ಕೂಡ ಧರಿಸಲಾಗುತ್ತದೆ.

ಮಧುರಾ ಎಲ್ ಭಟ್ಟ
ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರ ಉಜಿರೆ

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.