ವ್ಯಾಯಾಮವಿಲ್ಲದ ಜೀವನಶೈಲಿ ಅಪಾಯ…ವಿಟಮಿನ್‌ “ಡಿ’ ಮಹತ್ವವೇನು?

ದೈಹಿಕ ಶ್ರಮವುಳ್ಳ ಕೆಲಸಗಳನ್ನು ಮಾಡುವವರು ಕಡಿಮೆ. ಕಚೇರಿಗಳಲ್ಲಿ ಕೂತು ಕೆಲಸ ಮಾಡುವವರೇ ಹೆಚ್ಚು.

Team Udayavani, Aug 29, 2022, 3:50 PM IST

ವ್ಯಾಯಾಮವಿಲ್ಲದ ಜೀವನಶೈಲಿ ಅಪಾಯ

ಸಾಮಾನ್ಯವಾಗಿ ಚಳಿಗಾಲದಲ್ಲಿ ಇತರೆ ದಿನಗಳಿಗಿಂತ ಹೆಚ್ಚಿನ ಮಂದಿ ಮಂಡಿ ನೋವು, ಬೆನ್ನು ನೋವು, ಸೊಂಟ ನೋವಿನಿಂದ ಬಳಲುತ್ತಾರೆ ಎಂದು ವರದಿಗಳು ಹೇಳುತ್ತವೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ರಕ್ತನಾಳಗಳು ಸಂಕೋಚಗೊಂಡು ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಹಾಗಾಗಿ ಕೈ, ಕಾಲಿನ ಗಂಟುಗಳಿಗೆ ರಕ್ತ ಪರಿಚಲನೆಯು ಕಡಿಮೆಯಾಗಿ ನೋವುಂಟಾಗುವ ಸಾಧ್ಯತೆಗಳು ಹೆಚ್ಚಾಗಿದೆ.

ಗಂಟು ನೋವುಗಳಲ್ಲಿ ಹಲವು ವಿಧ. ಕೆಲವು ವಿಧದ ಗಂಟು ನೋವುಗಳಿಗೆ ಕಿರಿಯರು, ಹಿರಿಯರು ಎಂಬ ಭೇದವಿಲ್ಲ. ಇನ್ನು ಕೆಲವು ಗಂಟು ನೋವುಗಳು ವಯಸ್ಸಾದಂತೆ ಕಾಣಿಸಿಕೊಂಡು ಹೆಚ್ಚುತ್ತಾ ಹೋಗುತ್ತವೆ. ಆರಂಭಿಕ ಹಂತದಲ್ಲಿಯೇ ನಿರ್ಲಕ್ಷ್ಯ ವಹಿಸದೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ, ವ್ಯಾಯಾಮ, ಚಿಕಿತ್ಸೆಗೆ ಪೂರಕವಾದ ಆಹಾರ ಸೇವನೆ, ಜೀವನಶೈಲಿ ಬದಲಾವಣೆಯಿಂದ ಗಂಟು ನೋವುಗಳಿಂದ ಮುಕ್ತರಾಗಬಹುದು ಇಲ್ಲವೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಸಾಮಾನ್ಯವಾಗಿ ಚಳಿಗಾಲದಲ್ಲಿ ಇತರೆ ದಿನಗಳಿಗಿಂತ ಹೆಚ್ಚಿನ ಮಂದಿ ಮಂಡಿ ನೋವು, ಬೆನ್ನು ನೋವು, ಸೊಂಟ ನೋವಿನಿಂದ ಬಳಲುತ್ತಾರೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ರಕ್ತನಾಳಗಳು ಸಂಕುಚಿತಗೊಂಡು ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಹಾಗಾಗಿ ಗಂಟುಗಳಿಗೂ ರಕ್ತ ಪರಿಚಲನೆ ಕಡಿಮೆಯಾಗಿ ನೋವುಂಟಾಗುವ ಸಾಧ್ಯತೆಗಳು ಹೆಚ್ಚು.

ಗಂಟುಗಳ ನೋವಿಗೆ
ಸಾಮಾನ್ಯ ಕಾರಣ
ಇಂದು ದೈಹಿಕ ಶ್ರಮವುಳ್ಳ ಕೆಲಸಗಳನ್ನು ಮಾಡುವವರು ಕಡಿಮೆ. ಕಚೇರಿಗಳಲ್ಲಿ ಕೂತು ಕೆಲಸ ಮಾಡುವವರೇ ಹೆಚ್ಚು. ಮಾನಸಿಕ ಶ್ರಮವನ್ನೇ ಬಯಸುವ ಉದ್ಯೋಗಗಳು ಹೆಚ್ಚು. ಕೆಲಸದ ಒತ್ತಡದ ನಡುವೆ ತಮ್ಮ ದೈಹಿಕ ಚಟುವಟಿಕೆಯತ್ತ ಗಮನ ಕೊಡುವವರೂ ಕಡಿಮೆಯಾಗುತ್ತಿದ್ದಾರೆ. ನಡೆಯುವುದು, ಲಿಫ್ಟ್ ಬಳಕೆ ಮಾಡದೆ ಮೆಟ್ಟಿಲು ಹತ್ತುವುದು ಮೊದಲಾದ ಚಟುವಟಿಕೆಗಳು ನಿರ್ಲಕ್ಷಿಸಲ್ಪಟ್ಟಿವೆ. ಇವು ನಿಧಾನವಾಗಿ ವಿವಿಧ ರೀತಿಯ ದೈಹಿಕ ಸಮಸ್ಯೆಗೆ ಕಾರಣವಾಗುತ್ತದೆ. ಇದರಲ್ಲಿ ಒಂದು ಗಂಟು ನೋವು. ವಿವಿಧ ರೀತಿಯ ಗಂಟು ನೋವುಗಳಿಗೆ ನಿರ್ದಿಷ್ಟ ಕಾರಣವನ್ನು ತಪಾಸಣೆ ನಡೆಸಿಯೇ ಪತ್ತೆ ಹಚ್ಚಬಹುದು. ಎಲ್ಲ ರೀತಿಯ ಗಂಟು ನೋವುಗಳಿಗೂ ಪ್ರತ್ಯೇಕ ಕಾರಣವಿರಬಹುದು. ಹಾಗಾಗಿ ನಿರ್ಲಕ್ಷ್ಯ ಸಲ್ಲದು.

ಮಂಡಿನೋವು
ಮಂಡಿ ನೋವಿಗೆ ವಯಸ್ಸಿನ ಮಿತಿ ಇಲ್ಲ. ದೇಹದಲ್ಲಿ ಕ್ಯಾಲ್ಸಿಯಂ ಅಥವಾ ಕಬ್ಬಿಣದ ಅಂಶ ಕಡಿಮೆಯಾಗಿ ಅಥವಾ ವಯಸ್ಸಾದವರಲ್ಲಿ ಸಾಮಾನ್ಯವಾಗಿರುವ ಮಾಂಸದ ಹರಿತ ಮೂಳೆಗಳ ಸವೆತದಿಂದ ಮಂಡಿ ನೋವು ಬರಬಹುದು. ಮೂಳೆಸಾಂದ್ರತೆಯಿಂದ ಇತ್ತೀಚಿನ ದಿನಗಳಲ್ಲಿ ಮಂಡಿನೋವು ಹೆಚ್ಚಿನವರಲ್ಲಿ ಕಂಡುಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ರುಮಟ್ಟಾಯ್ಡ ಸಂಧಿವಾತ (ಆಥೆùಟೀಸ್‌) ಸಾಮಾನ್ಯವಾಗಿದೆ ಎನ್ನುತ್ತಾರೆ ವೈದ್ಯರು. 20ರಿಂದ ಹಿಡಿದು ವಯಸ್ಕರವರೆಗೂ ಇದು ಕಂಡುಬರುತ್ತದೆ. ಜೀವನ ಶೈಲಿಯೂ ಇದಕ್ಕೆ ಕಾರಣ. ಕೈ ಮತ್ತು ಕಾಲಿನ ಕೀಲುಗಳಲ್ಲಿ ನೋವು, ಬಾವು ಕಾಣಿಸಿಕೊಳ್ಳುವುದು ಇದರ ಲಕ್ಷಣ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯದಿದ್ದರೆ ದೀರ್ಘ‌ಕಾಲಿಕ ನ್ಯೂನ್ಯತೆ ಉಂಟಾಗುವ ಅಪಾಯವಿದೆ. ಒತ್ತಡ, ಇನ್‌ಫೆಕ್ಷನ್‌, ಅನುವಂಶೀಯತೆ ಮೊದಲಾದವು ಇದಕ್ಕೆ ಕಾರಣ. ಗಂಟುಗಳಲ್ಲಿ 6 ವಾರಕ್ಕಿಂತ ಹೆಚ್ಚು ಕಾಲ ನೋವಿದ್ದರೆ ಅದು ರೂಮಟ್ಟಾಯ್ಡ ಆಥೆùಟೀಸ್‌ ಎನ್ನುವುದು ವೈದ್ಯರ ಅಭಿಪ್ರಾಯ. ವ್ಯಾಯಾಮ, ಮತ್ತು ಶಸ್ತ್ರಚಿಕಿತ್ಸೆ ಇದಕ್ಕೆ ಪರಿಹಾರ.

ವಿಟಮಿನ್‌ “ಡಿ’ ಮಹತ್ವ
ಸೂರ್ಯನ ಬಿಸಿಲಿನಿಂದ ನಮಗೆ ವಿಟಮಿನ್‌ “ಡಿ’ ದೊರೆಯುತ್ತದೆ. ಮೂಳೆಗಳು ಶಕ್ತಿಶಾಲಿಯಾಗಿರಲು ಮತ್ತು ದೇಹದ ಇತರೆ ಚಟುವಟಿಕೆಗಳಿಗೆ ವಿಟಮಿನ್‌ “ಡಿ’ ಅತ್ಯಗತ್ಯ. ಮುಂಜಾನೆ ಅಥವಾ ಸಂಜೆ ಸೂರ್ಯನ ಬಿಸಿಲಿನಲ್ಲಿ ನಿಲ್ಲುವುದು ಉತ್ತಮ. ವ್ಯಾಯಾಮ ಮಾಡುವುದರಿಂದ ದೇಹದ ತೂಕ ಕಡಿಮೆಯಾಗಿ ಕೀಲು ಮತ್ತು ಮೊಣಕಾಲುಗಳ ಸ್ನಾಯು ಶಕ್ತಿಯುತವಾಗುತ್ತವೆ. ಹಣ್ಣುಗಳು, ಧಾನ್ಯ, ಹಾಲು ಮತ್ತು ಹಾಲಿನ ಉಪ ಉತ್ಪನ್ನಗಳನ್ನು ಹೇರಳವಾಗಿ ಸೇವಿಸುವುದು ಉತ್ತಮ. ಜತೆಗೆ ವಿಟಮಿನ್‌ “ಕೆ’, “ಡಿ’, ಮತ್ತು “ಸಿ’ ಅಂಶ ಹೇರಳವಾಗಿರುವ ಕಿತ್ತಳೆ ಹಣ್ಣು, ಪಾಲಕ್‌ ಸೊಪ್ಪು, ಎಲೆಕೋಸು ಮತ್ತು ಟೊಮೇಟೊದಂತಹ ಹಣ್ಣು ಮತ್ತು ತರಕಾರಿ ಹೆಚ್ಚು ಸೇವಿಸಿ ಎಂಬುದು ವೈದ್ಯರ ಸಲಹೆ.

ಹೀಗೆ ಕಾಡಬಹುದು ನೋವು
* ವ್ಯಾಯಾಮ, ನಡಿಗೆ ಸೇರಿದಂತೆ ದೈಹಿಕ ಚಟುವಟಿಕೆಗಳನ್ನು ಮಾಡದಿರುವುದು.
* ಅತಿಯಾದ ಜಿಮ್‌, ಹೆಚ್ಚಿನ‌ ಭಾರ ಎತ್ತುವಿಕೆ ಇತ್ಯಾದಿಯಿಂದಲೂ ಕಾಲಕ್ರಮೇಣ ಗಂಟುನೋವು ಬರಬಹುದು.
* ಅಪಘಾತ ಅಥವಾ ಇತರ ಬಲವಾದ ಹೊಡೆತ ಬಿದ್ದಾಗ ಅದು ಗಂಟುನೋವಿಗೆ ಕಾರಣವಾಗುತ್ತದೆ.
ಮುನ್ನೆಚ್ಚರಿಕೆಗಳೇನು?
* ಕಂಫ‌ರ್ಟ್‌ ಎನಿಸುವ, ನಡೆದಾಡುವಾಗ ದೇಹಕ್ಕೆ ಯಾವುದೇ ರೀತಿಯಲ್ಲಿಯೂ ಅಹಿತವೆನಿಸದ ಶೂ/ ಚಪ್ಪಲಿಗಳನ್ನೇ ಸದಾ ಧರಿಸಿ.
* ಹೈ ಹೀಲ್ಡ್‌ ಚಪ್ಪಲಿಗಳನ್ನು ದೀರ್ಘ‌ ಸಮಯ ಧರಿಸದಿರುವುದು ಉತ್ತಮ.
* ದೈಹಿಕ ಶ್ರಮದ ಕೆಲಸಗಳನ್ನು ಏಕಾಏಕಿ ಮಾಡದಿರಿ.
* ಜಡ ಜೀವನಶೈಲಿ ತೊರೆದು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಿ.
* ನಡೆಯುವಾಗ, ಕುಳಿತುಕೊಳ್ಳುವಾಗ, ಕೆಲಸ ಮಾಡುವಾಗ, ವಾಹನ ಚಾಲನೆ ಮಾಡುವಾಗ ನಿಮ್ಮ ದೇಹದ ಸ್ಥಿತಿಯ ಬಗ್ಗೆ ಗಮನ ಕೊಡಿ.
* ಸಾಧ್ಯವಾದಷ್ಟು ನಡೆಯಿರಿ ಮತ್ತು ಇಲವೇಟರ್‌ಗಳನ್ನು ಬಳಸದೆ ಮೆಟ್ಟಿಲು ಹತ್ತಿ ಇಳಿಯಿರಿ.
* ಕ್ಯಾಲ್ಸಿಯಂ ಮತ್ತು ವಿಟಮಿನ್‌ “ಡಿ’ ಅಧಿಕವಾಗಿರುವ ಆಹಾರಗಳನ್ನು ಸೇವಿಸಿ.
* ವಜ್ರಾಸನ ಅಭ್ಯಾಸ ಕೂಡ ಮೊಣಕಾಲು ನೋವು, ಪಾದಗಳ ಗಂಟಿನ ನೋವು, ಕಾಲುಗಳ ಸೆಳೆತ ಮೊದಲಾದವುಗಳನ್ನು ನಿವಾರಿಸಲು ಸಹಕಾರಿ. ಇದರಿಂದ ಬೆನ್ನುನೋವು, ಸೆಳೆತ ಕಡಿಮೆಯಾಗುತ್ತದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.