ನಿವೃತ್ತ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ : ನ್ಯಾಯಕ್ಕಾಗಿ ಮೊರೆಯಿಡುತ್ತಿರುವ ಮಡದಿ
Team Udayavani, Dec 10, 2020, 7:01 PM IST
ದಾಂಡೇಲಿ: ಜೊಯಿಡಾ ತಾಲೂಕಿನ ಬಿರಿಯಂಪಾಲಿ ಗ್ರಾಮದ ಅಕ್ವೋಡಾ ಮಜರೆಯಲ್ಲಿ ಸ್ವಂತ ಜಮೀನಿನಲ್ಲಿರುವ ಹೋಂ ಸ್ಟೇಯಲ್ಲಿ ಕೆಲಸ ಮಾಡುತ್ತಿದ್ದ ನಿವೃತ್ತ ಸೈನಿಕನ ಮೇಲೆ ಸ್ಥಳೀಯ 16 ಜನರ ತಂಡವೊಂದು ಹಠಾತ್ ದಾಳಿ ನಡೆಸಿ, ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
18 ವರ್ಷಗಳಿಂದ ಸೈನಿಕನಾಗಿ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ಶಿವಾಜಿ ಲಕ್ಷ್ಮಣ ಗೌಂಡನಕರ (40) ಜೊಯಿಡಾ ತಾಲೂಕಿನ ಬಿರಿಯಂಪಾಲಿ ಗ್ರಾಮದ ಅಕ್ವೋಡಾ ಮಜರೆಯಲ್ಲಿ ಜಾಗ ಖರೀದಿಸಿ ಕೃಷಿ ಕೆಲಸ ಮಾಡುತ್ತಿದ್ದರು. ಇಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಹಳ ದಿನಗಳಿಂದ ಸ್ಥಳೀಯರು ಹಾಗೂ ಇವರ ನಡುವೆ ಮನಸ್ತಾಪ ಉಂಟಾಗಿತ್ತು. ಇದನ್ನು ತಹಶೀಲ್ದಾರ್
ಇತ್ಯರ್ಥ ಪಡಿಸಿದ್ದರು. ಆದರೆ ಮಂಗಳವಾರ ಸಂಜೆ ಶಿವಾಜಿ ಲಕ್ಷ್ಮಣ ಗೌಂಡನಕರ ಕೂಲಿಗಳೊಂದಿಗೆ ಕೆಲಸ ಮಾಡುತ್ತಿದ್ದಾಗ
ಸ್ಥಳೀಯರಾದ ಪದ್ದು ಪಾವಣೆ, ಠಕ್ಕು ಪಾವಣೆ, ಭಾಗ್ಯಾ ಪಾವಣೆ, ಜ್ಯೋತಿಯಾ ಪಾವಣೆ, ಚೀಮಣಿ ಪಾವಣೆ, ಗಂಗಿ ಪಾವಣೆ, ನಾಗಿ ಪಾವಣೆ, ಜೆನ್ನಿ ಪಾವಣೆ, ಸಾಕರಿ ಪಾವಣೆ, ಸುನೀತಾ ಪಾವಣೆ, ಭಾಗೀರಥಿ ಪಾವಣೆ, ಸೋನಿ ಪಾವಣೆ, ವೀರು ಪಾವಣೆ, ಪುರುಷೋತ್ತಮ ಮಿರಾಶಿ, ಮಹೇಶ ಮಿರಾಶಿ, ಜೋಸೆಫ್ ಬಾಬು ಇವರೆಲ್ಲ ಸೇರಿ ಬಡಿಗೆಗಳಿಂದ ಹಲ್ಲೆ ಮಾಡಲು ಆರಂಭಿಸಿದರು.
ಇದನ್ನೂ ಓದಿ:ಪ್ರತಿಸ್ಪರ್ಧಿಗಳ ಹತ್ತಿಕ್ಕಿದ ಆರೋಪ: ಫೇಸ್ಬುಕ್ ವಿರುದ್ಧ 48 ಪ್ರಾಂತ್ಯಗಳಿಂದ ಕೇಸು
ಇದನ್ನು ತಡೆಯಲು ಬಂದ ಕೂಲಿ ಕಾರ್ಮಿಕರಾದ ಪರಿಶಿಷ್ಟ ಪಂಗಡದ ಚಂದ್ರಕಾಂತ ಮಾರುತಿ ನಾಯ್ಕ, ಪರಶುರಾಮ ರಾಣಬಾ ನಾಯ್ಕ ಮತ್ತು ಅಶ್ವತ್ಥ ಸತ್ಯಪ್ಪ ನಾಯ್ಕರ ಮೇಲೆಯೂ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಕಾಂತ ಮಾರುತಿ ನಾಯ್ಕರು
ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದಾಗಿ ಶಿವಾಜಿ ಲಕ್ಷ್ಮಣ ಗೌಂಡನಕರಗೆ ಗಂಭೀರ ಗಾಯವಾಗಿದ್ದು, ಹಲ್ಲೆ ಮಾಡಿದ ನಂತರ ಜೀವ ಬೆದರಿಕೆಯನ್ನೂ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಶಿವಾಜಿ ಲಕ್ಷ್ಮಣ ಗೌಂಡನಕರಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್ಡಿಎಂ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದಂತೆ ಅಶ್ವತ್ಥ ಸತ್ಯಪ್ಪ ನಾಯ್ಕ, ಚಂದ್ರಕಾಂತ ಮಾರುತಿ ನಾಯ್ಕ, ಪರಶುರಾಮ ರಾಣಬಾ ನಾಯ್ಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಕುರಿತಂತೆ ಚಂದ್ರಕಾಂತ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸೈ ಹನುಮಂತ ಬಿರದಾರ ತನಿಖೆ ಕೈಗೊಂಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ