ಸೋಮವಾರವೇ ಹಣಕಾಸು ವಿಧೇಯಕ ಮಂಡನೆ: ಬಿಎಸ್ ವೈ
ವಿಶ್ವಾಸಮತದಲ್ಲಿ ನಮಗೇ ಗೆಲುವು
Team Udayavani, Jul 28, 2019, 11:29 AM IST
ಬೆಂಗಳೂರು: ನಾವು ಸೋಮವಾರ ವಿಶ್ವಾಸಮತವನ್ನು ಖಂಡಿತವಾಗಿ ಗೆಲ್ಲುತ್ತೇವೆ. ಸೋಮವಾರದಂದೇ ಹಣಕಾಸು ವಿಧೇಯಕವನ್ನು ಮಂಡನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಹಣಕಾಸು ವಿಧೇಯಕ ಮಂಡನೆಯಾಗಬೇಕಾದ ಅಗತ್ಯವಿರುವುದರಿಂದ ಸೋಮವಾರವೇ ಮಂಡಿಸುತ್ತೇವೆ. ಬೆಳಗ್ಗೆ ವಿಶ್ವಾಸ ಮತ ಮಂಡನೆ ನಡೆಸುತ್ತೇವೆ. ನಂತರ ಹಣಕಾಸು ಬಿಲ್ ಮಂಡಿಸುತ್ತೇವೆ ಎಂದರು.