ಬೆಂಕಿ ಅವಘಡ: ಲೆಫ್ಟಿನೆಂಟ್ ಕಮಾಂಡರ್ ಬಲಿ
Team Udayavani, Apr 27, 2019, 5:00 AM IST
ಕಾರವಾರ: ಐಎನ್ಎಸ್ ಕದಂಬ ನೌಕಾನೆಲೆಗೆ ಲಂಗುರ ಹಾಕಲು ಬಂದಿದ್ದ ಯುದ್ಧ ನೌಕೆ ಐಎನ್ಎಸ್ ವಿಕ್ರಮಾದಿತ್ಯದ ಬಾಯ್ಲರ್ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿ ನಿಯಂತ್ರಿಸಲು ಯತ್ನಿಸಿದ ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್. ಚೌಹಾಣ್ ತೀವ್ರ ಗಾಯಗಳಿಂದ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಯುದ್ಧ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಕಾರವಾರದ ಆಳ ಸಮುದ್ರದಲ್ಲಿ ಬೀಡು ಬಿಟ್ಟಿತ್ತು. ಶುಕ್ರವಾರ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಲಂಗುರ ಹಾಕಲು ಬಂದಾಗ ಅಗ್ನಿ ಅನಾಹುತ ಸಂಭವಿಸಿದೆ. ತಕ್ಷಣ ಸಿಬ್ಬಂದಿ ತಹಬದಿಗೆ ತಂದರು. ಚೌಹಾಣ್ ಸಹಿತ ಹಲವು ಸಿಬ್ಬಂದಿ ಬಾಯ್ಲರ್ ಘಟಕದ ಬೆಂಕಿ ಆರಿಸಲು ಯತ್ನಿಸಿದಾಗ ಚೌಹಾಣ್ ತೀವ್ರವಾಗಿ ಗಾಯಗೊಂಡಿದ್ದು ಐಎನ್ಎಸ್ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ಆದೇಶ: ಯುದ್ಧ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅನಾಹುತದ ಘಟನೆಗೆ ಕಾರಣವೇನೆಂದು ತನಿಖೆ ನಡೆಸಲು ದೆಹಲಿಯಿಂದ ನೌಕಾನೆಲೆ ಹೆಡ್ಕ್ವಾಟರ್ಸ್ ಆದೇಶಿಸಿದೆ. ಈ ಘಟನೆ ನೌಕಾಸೇನೆಯನ್ನು ದಿಗ್ಭ್ರಮೆಗೊಳಿಸಿದೆ. ಕಾರಣ ಯುದ್ಧ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಹೆಲಿಕಾಕ್ಟರ್ ಮತ್ತು ಏರ್ಕ್ರಾಫ್ಟ್ಗಳು ಲ್ಯಾಂಡಿಂಗ್ ಆಗುವ ಮತ್ತು ನೌಕೆಯಿಂದಲೇ ಹಾರುವ ಅತ್ಯಾಧುನಿಕ ನೌಕೆ. ಈ ನೌಕೆ ಅತ್ಯಂತ ವಿಶಾಲವಾದ ಪ್ಲಾಟ್ ಫಾರಂ, ಅತಿ ಉದ್ದದ ರನ್ ವೇ ಹೊಂದಿದೆ.
ಮೇ 1ರಿಂದ ಜಂಟಿ ಸಮರಾಭ್ಯಾಸ: ಮೇ 1ರಿಂದ ಒಂದು ವಾರ ಇಂಡೋ-ಫ್ರಾನ್ಸ್ ನೌಕಾದಳ ಸಮರಾಭ್ಯಾಸ ನಡೆಯಲಿದೆ. ವರುಣ್ ಹೆಸರಿನ ಕಾರ್ಯಾಚರಣೆಗೆ ಯುದ್ಧ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಕದಂಬ ನೌಕಾನೆಲೆಗೆ ಬಂದಿತ್ತು. ವರುಣ್ ಕಾರ್ಯಾಚರಣೆಗೆ ಅದು ತಯಾರಾಗಬೇಕಿತ್ತು. ಮಿಗ್-29 ಹಾಗೂ ಸಬ್ ಮೆರಿನ್ ಸಹಿತ ರಫೆಲ್ ಯುದ್ಧ ವಿಮಾನಗಳ ಹಾರಾಟ ಸಹ ನಡೆಯುವುದಿತ್ತು. ಫ್ರಾನ್ಸ್ ಎಫ್ಎನ್ಎಸ್ ಕ್ಯಾರಿಯರ್, ಡಿ ಗುಲ್ಲೇ, ನೇವಲ್ ಜೆಟ್ಸ್ ಜಂಟಿ ಹಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳತೊಡಗಿತ್ತು. ವಿಕ್ರಮಾದಿತ್ಯದಲ್ಲಿನ ಅವಘಡ ವರುಣ್ ಕಾರ್ಯಾಚರಣೆ ಮೇಲೆ ಕರಿನೆರಳು ಬೀರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್