ಮೇ 25ರಿಂದ ಮೇ 30ರವರೆಗೆ ಉಡುಪಿಯಲ್ಲಿ ಉಚಿತ ಸಿಟಿ ಬಸ್ಸು ಸಂಚಾರ


Team Udayavani, May 24, 2020, 7:08 PM IST

ಮೇ 25ರಿಂದ ಮೇ 30ರವರೆಗೆ ಉಡುಪಿಯಲ್ಲಿ ಉಚಿತ ಸಿಟಿ ಬಸ್ಸು ಸಂಚಾರ

ಉಡುಪಿ: ಕೋವಿಡ್ ವೈರಸ್‌ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹಾಗೂ ಜನರಿಗೆ ಸೇವೆ ನೀಡುವ ಆಕಾಂಕ್ಷೆಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ, ಆಸರೆ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಉಡುಪಿ ಸಿಟಿ ಬಸ್‌ ಮಾಲಕರ ಸಹಯೋಗದಲ್ಲಿ ಮೇ 25ರಿಂದ ಮೇ 30ರ ವರೆಗೆ ಆಯ್ದ ರೂಟ್‌ಗಳಲ್ಲಿ ಉಚಿತ ಸಿಟಿ ಬಸ್‌ ಸೇವೆ ಆರಂಭವಾಗಲಿದೆ ಎಂದು ಶಾಸಕ ಕೆ.ರಘುಪತಿ ಭಟ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರಕಾರ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಿದರೂ ಖಾಸಗಿ ಬಸ್‌ ಮಾಲಕರು ಕೆಲವು ಷರತ್ತುಗಳನ್ನು ವಿಧಿಸಿದ್ದರು. ಅದರಂತೆ ರಾಜ್ಯ ಸರಕಾರವು 2 ತಿಂಗಳ ತೆರಿಗೆ ವಿನಾಯಿತಿಯನ್ನು ಕಲ್ಪಿಸಿದೆ. ಸರಕಾರಿ ಸಹಿತ ಕೆಲವು ಖಾಸಗಿ ಬಸ್ಸುಗಳು ಈಗಾಗಲೇ ಸಂಚಾರ ನಡೆಸುತ್ತಿದೆಯಾದರೂ ಬಸ್ಸುಗಳಲ್ಲಿ ಜನವಿರಳವಿದೆ. ಇದನ್ನು ಮನಗಂಡು ಪ್ರಯಾಣಿಕರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂಬ ಉದ್ದೇಶದಿಂದ ಉಚಿತ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಮಾರ್ಗಸೂಚಿಯಂತೆ ಓಡಾಟ

ಬಸ್ಸು ಸಂಚಾರವು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಇರಲಿದೆ. ಆಯ್ದ ರೂಟ್‌ಗಳಲ್ಲಿ ಬಸ್ಸುಗಳ ಸಂಚಾರ ನಡೆಸಲಿವೆ. ಸರಕಾರದ ನಿಯಮಾವಳಿಯಂತೆ ಬಸ್ಸುಗಳನ್ನು ಸ್ಯಾನಿಟೈಸ್‌ ಮಾಡುವುದು, ಮಾಸ್ಕ್ ಧರಿಸುವುದು. ಶೇ. 50 ರಷ್ಟು ಪ್ರಯಾಣಿಕರನ್ನು ಮಾತ್ರ ಹತ್ತಿಸುವುದು, ಸಾಮಾಜಿಕ ಅಂತರ ಸಹಿತ ಎಲ್ಲ ರೀತಿಯ ನಿಯಮಾವಳಿಗಳನ್ನು ಪಾಲಿಸಲಾಗುತ್ತದೆ. ಬಸ್ಸಿನಲ್ಲಿ ಚಾಲಕರು ಮಾತ್ರ ಇರಲಿದ್ದಾರೆ. ಸ್ಥಳೀಯ ವಾರ್ಡ್‌ ಸದಸ್ಯರು ಕೆಲವು ಬಸ್ಸುಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಪ್ರಯಾಣಿಕರು ಮುಂದಿನ ಬಾಗಿಲಿನಿಂದ ಹತ್ತಿ ಹಿಂದಿನ ಬಾಗಿಲಿನಿಂದ ಇಳಿಯಬೇಕು. ಒಂದು ಬಸ್ಸಿನಲ್ಲಿ 30 ಮಂದಿ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ಇರಲಿದೆ. ದಿನನಿತ್ಯದ ಸಂಚಾರಕ್ಕಾಗಿ ಒಂದು ಬಸ್ಸಿಗೆ ಸುಮಾರು 5 ಸಾವಿರ ರೂ.ಗಳಷ್ಟು ವ್ಯಯವಾಗಲಿದೆ. ಮೇ 25ರಂದು ಸಿಟಿ ಬಸ್ಸು ತಂಗುದಾಣದಲ್ಲಿ ಉಚಿತ ಬಸ್ಸು ಸೌಲಭ್ಯದ ಉದ್ಘಾಟನೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಸಿಟಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳಾದ ಸಂದೀಪ್‌, ಗಣನಾಥ ಹೆಗ್ಡೆ, ಚಂದನ್‌, ವಾದಿರಾಜ್‌, ನಗರಸಭಾ ಸದಸ್ಯ ಗಿರೀಶ್‌ ಅಂಚನ್‌ ಉಪಸ್ಥಿತರಿದ್ದರು.

ಕ್ಯಾಷ್‌ಲೆಸ್‌ ಪ್ರಯಾಣಕ್ಕೆ ಚಲೋ ಟ್ರಾವೆಲ್‌ ಕಾರ್ಡ್‌
ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಚಲೋ ಟ್ರಾವೆಲ್‌ ಕಾರ್ಡ್‌ ಪರಿಚಯಿಸಲಾಗುತ್ತಿದೆ. ಸಿಟಿ ಬಸ್ಸು ಮಾಲಕರ ಸಂಘದಿಂದ ಚಲೋ ಟ್ರಾವೆಲ್‌ ಕಾರ್ಡ್‌ ವಿತರಿಸಲಾಗುತ್ತಿದೆ. ಮೇ 31ರ ವರೆಗೆ ಅದು ಉಚಿತವಾಗಿರಲಿದೆ. ಅನಂತರ ಪ್ರಯಾಣಿಕರು ಒಂದು ಬಾರಿ ರೀಚಾರ್ಜ್‌ ಮಾಡಿಸಿಕೊಂಡರೆ ಹಣ ಮುಗಿಯುವವರೆಗೆ ಉಪಯೋಗಿಸಬಹುದಾಗಿದೆ. ಇದರಿಂದ ಹಣದ ಚಲಾವಣೆ ಮೂಲಕ ಸೋಂಕು ಹರಡುವ ಭೀತಿಯೂ ಜನರಲ್ಲಿ ಕಡಿಮೆಯಾಗಲಿದೆ. ಈ ಕಾರ್ಡ್‌ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಅದನ್ನು ಪ್ರಯಾಣಿಕರೇ ಟಿಕೆಟ್‌ ಮೆಷಿನ್‌ಗೆ ತೋರಿಸಿದರೆ ಸಾಕಾಗುತ್ತದೆ. ಇದರ ಅಕೌಂಟ್‌ಗೆ ನಿರ್ವಾಹಕನ ಮೂಲಕವೂ ರೀಚಾರ್ಜ್‌ ಮಾಡಿಸಿಕೊಳ್ಳಬಹುದು. ಅಲ್ಲದೆ ಕೆಲವೊಂದು ಹೊಟೇಲ್‌ಗ‌ಳು, ಅಂಗಡಿಗಳು ಸಹಿತ ರೀಚಾರ್ಜ್‌ ಮಾಡಬಹುದಾದ ಕೇಂದ್ರಗಳ ಮಾಹಿತಿಯನ್ನು ಸದ್ಯದಲ್ಲಿಯೇ ನೀಡಲಾಗುವುದು ಎಂದು ಸಿಟಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದರು.

ಬಸ್‌ ರೂಟ್‌ಗಳು
ರೂಟ್‌ ನಂ 1
ಮಲ್ಪೆ-ಗರಡಿಮಜಲು-ಸಂತೆಕಟ್ಟೆ-ಉಡುಪಿ ಸಿಟಿ
ಉಡುಪಿ ಸಿಟಿ-ಸಂತೆಕಟ್ಟೆ-ಗರಡಿಮಜಲು-ಮಲ್ಪೆ

ರೂಟ್‌ ನಂ 2
ಅಲೆವೂರು-ಕೊರಂಗ್ರಪಾಡಿ-ಉಡುಪಿ ಸಿಟಿ-ಮಣಿಪಾಲ-ಜಿಲ್ಲಾಧಿಕಾರಿ ಕಚೇರಿ
ಉಡುಪಿ ಸಿಟಿ-ಡಯಾನ-ಅಲೆವೂರು

ರೂಟ್‌ ನಂ 3
ಹೂಡೆ-ತೊಟ್ಟಂ-ಮಲ್ಪೆ-ಆದಿ ಉಡುಪಿ-ಅಜ್ಜರಕಾಡು-ಉಡುಪಿ ಸಿಟಿ-ಮಣಿಪಾಲ-ಪರ್ಕಳ
ಪರ್ಕಳ-ಉಡುಪಿ ಸಿಟಿ-ಆದಿ ಉಡುಪಿ-ಮಲ್ಪೆ-ತೊಟ್ಟಂ-ಹೂಡೆ

ರೂಟ್‌ ನಂ 4
ಸಂಪಿಗೆ ನಗರ-ಕಡೆಕಾರು-ಅಂಬಲಪಾಡಿ-ಅಜ್ಜರಕಾಡು-ಉಡುಪಿ ಸಿಟಿ-ಮಣಿಪಾಲ-ಪರ್ಕಳ
ಪರ್ಕಳ-ಮಣಿಪಾಲ-ಉಡುಪಿ ಸಿಟಿ-ಅಜ್ಜರಕಾಡು-ಅಂಬಲಪಾಡಿ-ಸಂಪಿಗೆ ನಗರ

ರೂಟ್‌ ನಂ 5
ಪ್ರಗತಿನಗರ-ಮಣಿಪಾಲ-ಉಡುಪಿ-ದೊಡ್ಡಣಗುಡ್ಡೆ-ಪೆರಂಪಳ್ಳಿ ಚರ್ಚ್‌
ಪೆರಂಪಳ್ಳಿ ಚರ್ಚ್‌-ದೊಡ್ಡಣಗುಡ್ಡೆ-ಉಡುಪಿ-ಮಣಿಪಾಲ-ಪ್ರಗತಿನಗರ

ರೂಟ್‌ ನಂ 6
ಕಳತ್ತೂರು-ಸಂತೆಕಟ್ಟೆ-ಚೇರ್ಕಾಡಿ-ಪೇತ್ರಿ-ಬ್ರಹ್ಮಾವರ
ಬ್ರಹ್ಮಾವರ-ಪೇತ್ರಿ-ಚೇರ್ಕಾಡಿ-ಸಂತೆಕಟ್ಟೆ ಕಳತ್ತೂರು

ರೂಟ್‌ ನಂ 7
ಹೂಡೆ-ಕೆಮ್ಮಣ್ಣು-ಸಂತೆಕಟ್ಟೆ-ಅಂಬಾಗಿಲು-ಗುಂಡಿಬೈಲು-ಕಲ್ಸಂಕ-ಉಡುಪಿ ಸಿಟಿ
ಉಡುಪಿ ಸಿಟಿ-ಕರಾವಳಿ ಬೈಪಾಸ್‌-ನಿಟ್ಟೂರು-ಸಂತೆಕಟ್ಟೆ-ಕೆಮ್ಮಣ್ಣು-ಹೂಡೆ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.