ಪತ್ನಿ ,6 ತಿಂಗಳ ಮಗುವನ್ನು ಕೊಚ್ಚಿ ಪೊಲೀಸರಿಗೆ ಶರಣಾದ !
ಗದಗದಲ್ಲಿ ನಡೆದ ಬೆಚ್ಚಿ ಬೀಳಿಸುವ ಘಟನೆ
Team Udayavani, May 9, 2019, 11:03 AM IST
ಗದಗ: ಪತ್ನಿ ಮತ್ತು 6 ತಿಂಗಳ ಮಗುವನ್ನು ಕೊಚ್ಚಿ ಕೊಲೆಗೈದ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾದ ಬೆಚ್ಚಿ ಬೀಳಿಸುವ ಘಟನೆ ಲಕ್ಷ್ಮೇ ಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ.
ರಮೇಶ್ ಎಂಬಾತ ಪತ್ನಿ ನಿರ್ಮಲಾ (25) ಮತ್ತು6 ತಿಂಗಳ ಮಗು ನಂದೀಶ್ ನನ್ನು ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದಾನೆ.
ಆರೋಪಿ ರಮೇಶ್ ಲಕ್ಷ್ಮೇ ಶ್ವರ ಠಾಣೆಯ ಪೊಲೀಸರಿಗೆ ಶರಣಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯಾವ ಕಾರಣಕ್ಕಾಗಿ ಕೊಲೆಗೈದಿದ್ದಾನೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.