ನಿಯಮ ಉಲ್ಲಂಘನೆ : ಬೀಜ ಸಂಸ್ಕರಣಾ ಘಟಕಗಳಿಗೆ ಅಧಿಕಾರಿಗಳಿಂದ ನೋಟೀಸ್
Team Udayavani, Nov 30, 2021, 7:47 PM IST
ಗಂಗಾವತಿ : ಕೃಷಿ ಇಲಾಖೆಯ ಬೀಜ ಸಂಸ್ಕರಣ ನಿಯಮ ಉಲ್ಲಂಘಿಸಿ ಬೀಜ ಸಂಸ್ಕರಣೆ ಮಾಡಿ ಮಾರಾಟ ಮಾಡುತ್ತಿದ್ದ 3 ಘಟಕಗಳ ಮೇಲೆ ಕೃಷಿ ಮಾರಾಟ ಜಾಗೃತ ದಳದ ಬೆಳಗಾವಿ ವಿಭಾಗದ ಅಧಿಕಾರಿಗಳ ತಂಡ ದಾಳಿ ಮಾಡಿ ನೋಟಿಸ್ ಜಾರಿ ಮಾಡಿದೆ.
ಕಳಪೆ ಬೀಜ ಮತ್ತು ಗೊಬ್ಬರ ಮಾರಾಟ ಮಾಡುವ ದೂರುಗಳ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಜಾಗೃತ ದಳದ ಬೆಳಗಾವಿ ವಿಭಾಗದ ತಂಡದ ಅಧಿಕಾರಿಗಳಾದ ಜಿಲಾನಿ ಮೊಕಾಶಿ, ಮಹಾಂತೇಶ ಕಿಣಗಿ, ಮಂಜುನಾಥ ಕುಲಕರ್ಣಿ, ಕೆ ಕುಮಾರಸ್ವಾಮಿ ಹಾಗೂ ಲಿಂಗಪ್ಪ ನಾಯಕ ಹಾಗೂ ಗಂಗಾವತಿ ಕೊಪ್ಪಳ ಯಲಬುರ್ಗಾ ಕುಷ್ಟಗಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ತಂಡ ಹಿರೇ ಬೆಣಕಲ್ ಲಿನಲ್ಲಿರುವ ಮೇ।। ವಿಜಯಲಕ್ಷ್ಮಿ ಆಗ್ರೋ ಏಜೆನ್ಸಿ , ಹೊಸ್ಕೇರಾ ಕ್ಯಾಂಪಿನ ಶ್ರೀರಾಮ ಸೀಡ್ಸ್ , ಶ್ರೀ ಸಾಯಿ ಕೃಷ್ಣ ಆಗ್ರೋ ಕಂಪನಿಯ ಮಾಲೀಕರು ಬೀಜತಯಾರಿಕಾ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ವೆಸಗಿರುವ ಕುರಿತು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಕೃಷಿ ಜಾಗೃತ ಕೋಶದ ಅಧಿಕಾರಿಗಳು ಬೀಜ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ಮಾಡಿ ನಿಯಮ ಉಲ್ಲಂಘಿಸಿದ್ದಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.
ಮುಂದಿನ ಆದೇಶ ಬರುವ ತನಕ ಬೀಜ ತಯಾರಿಕೆ ಮತ್ತು ಬೀಜಗಳನ್ನು ಮಾರಾಟ ಮಾಡದಂತೆ ನೋಟಿಸ್ ನಲ್ಲಿ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ಕಿಷ್ಕಿಂದಾ ಅಂಜನಾದ್ರಿ ಕಾಣಿಕೆ ಹುಂಡಿ ಎಣಿಕೆ: 23.50 ಲಕ್ಷ ರೂ. ಸಂಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..