ಬಿಸಾಡಲು ಬಂದವರಲ್ಲಿಯೇ ಕಸ ತುಂಬಿಸಿ ಕಳುಹಿಸಿದರು!
Team Udayavani, Apr 10, 2021, 2:50 AM IST
ಕುಂದಾಪುರ: ರಸ್ತೆ ಬದಿ ಗೂಡ್ಸ್ ಟೆಂಪೋ ವಾಹನದಲ್ಲಿ ಕಸ ಎಸೆಯಲೆಂದು ಬಂದವರಲ್ಲಿಯೇ ಎಸೆದ ಕಸವನ್ನು ತುಂಬಿಸಿ ಕಳುಹಿಸಿದ ಪ್ರಸಂಗ ಗುಜ್ಜಾಡಿಯಲ್ಲಿ ಶುಕ್ರವಾರ ನಡೆದಿದೆ.
ಮುಳ್ಳಿಕಟ್ಟೆಯಿಂದ ಗುಜ್ಜಾಡಿಗೆ ಸಂಚರಿಸುವ ಮುಖ್ಯ ರಸ್ತೆಯ ಸಮೀಪ ಗೇರು ಅಭಿವೃದ್ಧಿ ನಿಗಮದ ಅಧೀನದ ಗೇರು ಪ್ಲಾಂಟೇಶನ್ಗಳಿವೆ. ಇಲ್ಲಿ ಕಸ ಎಸೆದು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಶುಕ್ರವಾರವೂ ಬೇರೆಲ್ಲಿಂದಲೋ ಗೂಡ್ಸ್ ಟೆಂಪೋದಲ್ಲಿ ಬಂದವರು ಇಲ್ಲಿ ಕಸವನ್ನು ಎಸೆಯುತ್ತಿದ್ದರು. ಇದನ್ನು ಗಮನಿಸಿದ ಗುಜ್ಜಾಡಿ ಮಂಕಿಯ ನಾಗರಾಜ್ ಮಯ್ಯ ಎನ್ನುವವರು ಅವರನ್ನು ತಡೆದು, ಇನ್ನು ಮುಂದೆ ಇಲ್ಲಿ ಕಸ ತಂದು ಎಸೆಯಬಾರದು ಎಂದು ಎಚ್ಚರಿಸಿದ್ದಲ್ಲದೆ, ಅವರಲ್ಲಿಯೇ ಕಸವನ್ನು ಹೆಕ್ಕಿ, ಮತ್ತೆ ವಾಹನದಲ್ಲಿ ತುಂಬಿಸಿ ಕಳುಹಿಸಿದ್ದಾರೆ.
ಡಂಪಿಂಗ್ ಯಾರ್ಡ್…!
ಈ ಮುಳ್ಳಿಕಟ್ಟೆ- ಗುಜ್ಜಾಡಿ ಮುಖ್ಯ ರಸ್ತೆಯ ಇಕ್ಕೆಲಗಳ ಚರಂಡಿ, ಗೇರು ತೋಪುಗಳೆಲ್ಲವೂ ಈಗ ಕಸ ಎಸೆಯುವ ಡಂಪಿಂಗ್ ಯಾರ್ಡ್ ಆಗಿ ಕಾಣುತ್ತಿದೆ. ಎಲ್ಲೆಲ್ಲಿಂದ ಇಲ್ಲಿಗೆ ವಾಹನಗಳಲ್ಲಿ ಬರುವ ನಾಗರೀಕರು ಇಲ್ಲಿ ಕಸ ಎಸೆದು ಹೋಗುತ್ತಿದ್ದಾರೆ. ಪಂಚಾಯತ್ನವರು ಈ ಬಗ್ಗೆ ಎಷ್ಟು ಸಲ ಅರಿವು ಮೂಡಿಸಿದರೂ ಕಸ ಎಸೆಯುವುದಕ್ಕೆ ಮಾತ್ರ ಕಡಿವಾಣವೇ ಬಿದ್ದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ