ಸಮರ ಕಲೆಯನ್ನುಜೀವಂತವಾಗಿರಿಸಿದ ಕೇರಳದ 78ರ ವೃದ್ಧೆ!

2017 ರಲ್ಲಿ ಮೀನಾಕ್ಷಿ ಅಮ್ಮ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Team Udayavani, Oct 1, 2021, 11:59 AM IST

vatakar

ವಟಕರ : 78ರ ಹರೆಯದ ಈ ವೃದ್ಧೆಯ ಜೀವನೋತ್ಸಾಹ ನೋಡಿದರೆ ಎಂತಹವರೂ ವಿಸ್ಮಯಗೊಳ್ಳಬೇಕು. ದೇಶದ ಅತ್ಯಂತ ಪುರಾತನ ಸಮರಕಲೆಗಲ್ಲಿ ಒಂದಾಗಿರುವ ಕೇರಳದ ಕಳರಿ ಪಯಟ್ಟುವಿನಲ್ಲಿ ಪಳಗಿ ಇಳಿ ವಯಸ್ಸಿನಲ್ಲಿ ಯುವಕರೂ ನಾಚುವಂತೆ ಹೋರಾಟ ನೀಡುತ್ತಿದ್ದಾರೆ.

ಇನ್ನೂ 4೦ ರ ಹರೆಯದ ಮಹಿಳೆಯಂತೆ ಕಾಣುವ ಮೀನಾಕ್ಷಿ ಅಮ್ಮ ಅವರು ಬಿದಿರಿನ ಗಳ ಹಿಡಿದು ಪುತ್ರನೊಂದಿಗೆ ಸಮದಂಡಿನ ಹೋರಾಟ ನೀಡಿ ಬೆರಗು ಮೂಡಿಸುತ್ತಾರೆ.

ಕೇರಳದ ಅತ್ಯಂತ ಪುರಾತನ ಕಲೆಯಾಗಿರುವ ಕಳರಿ ಪಯಟ್ಟುವಿನ ಪುನರುತ್ಥಾನಕ್ಕೆ ಸಂಕಲ್ಪ ಮಾಡಿರುವ ಮೀನಾಕ್ಷಿ ಅಮ್ಮ ಮುಂದಿನ ತಲೆಮಾರಿಗೆ ಈ ಸಮರಾ ಕಲೆ ತಲುಪಬೇಕು ಎನ್ನುವ ಮಹದಾಸೆ ಹೊತ್ತಿದ್ದಾರೆ.

‘ನಾನು 7 ವರ್ಷದ ಬಾಲಕಿ ಇರುವಾಗ ಕಳರಿ ಪಯಟ್ಟು ಅಭ್ಯಾಸ ಆರಂಭಿಸಿದೆ. ನನಗೀಗ 78 ವರ್ಷ ಪ್ರಾಯ, ನನ್ನ ದಿವಂಗತ ಪತಿ ಅವರು 1949ರಲ್ಲಿ ಪ್ರಾರಂಭಿಸಿದ ಕಡತನಾಡ್ ಸಂಗಮ್ ಕಳರಿ ಶಾಲೆಯಲ್ಲಿ ಈಗಲೂ ನಾನು ಕಲಿಯುತ್ತಿದ್ದೇನೆ, ಉತ್ಸಾಹಿಗಳಿಗೆ ಕಲಿಸುತ್ತಿದ್ದೇನೆ’ ಎಂದರು.

‘ಈಗ ಪತ್ರಿಕೆಗಳನ್ನು ತೆರೆದರೆ ಕೇವಲ ಮಹಿಳೆಯರ ಮೇಲಿನ ದೌರ್ಜನ್ಯವನ್ನೇ ಕಾಣಬೇಕಾಗಿದೆ. ಹೆಣ್ಮಕ್ಕಳು ಸಮರ ಕಲೆಯನ್ನು ಅಭ್ಯಾಸ ಮಾಡಿದರೆ ದೈಹಿಕ ಮತ್ತು ಮಾನಸಿಕವಾಗಿ ಶಕ್ತರಾಗುತ್ತಾರೆ ಮಾತ್ರವಲ್ಲದೆ ಒಂಟಿಯಾಗಿ ತೆರಳಲು ಮತ್ತು ಕೆಲಸ ಮಾಡಲು ವಿಶ್ವಾಸ ಮೂಡಿಸುತ್ತದೆ’ ಎಂದರು.

3,000 ವರ್ಷಗಳ ಇತಿಹಾಸ ಹೊಂದಿರುವ ಕಳರಿ ಸಮರ ಕಲೆಯಲ್ಲಿ ಯೋಗ ಮತ್ತು ನೃತ್ಯ ಅಡಕವಾಗಿದ್ದು, ಕತ್ತಿಯೊಂದಿಗೆ ಗುರಾಣಿ ಮತ್ತು ಬಿದಿರಿನ ಗಳಗಳನ್ನು ಹಿಡಿದು ರೋಮಾಂಚನಕಾರಿಯಾಗಿ ಹೋರಾಟ ನಡೆಸುವುದು ವಿಶೇಷ.

ಈ ಕಲೆಯಿಂದ ತಮಗೆ ಅಪಾಯವಾಗುವ ಸಾಧ್ಯತೆಯನ್ನು ಅರಿತ ಬ್ರಿಟಿಷರು 1804ರಲ್ಲಿ ನಿಷೇಧ ಹೇರಿದ್ದರು. ಗುಪ್ತವಾಗಿದ್ದ ಕಳರಿ ಕಲೆ ಸ್ವಾತಂತ್ರ್ಯದ ಬಳಿಕವೇ ಮತ್ತೆ ಮುನ್ನೆಲೆಗೆ ಬಂದಿತ್ತು .

ಕಳರಿಯನ್ನು ಈಗ ಕ್ರೀಡೆಯಾಗಿ ದೇಶದಲ್ಲಿ ಅಭ್ಯಾಸ ನಡೆಸಲಾಗುತ್ತಿದ್ದು ಪ್ರೋತ್ಸಾಹವೂ ನೀಡಲಾಗುತ್ತಿದೆ.

ಮೀನಾಕ್ಷಿ ಅಮ್ಮನವರ ಕಳರಿ ಶಾಲೆಯ ಒಳಗೆ ಪುತ್ರ ಸಂಜೀವ್ ಅವರು ಕಚ್ಚೆಯನ್ನು ಉಟ್ಟುಕೊಂಡು ಎದೆಗಾರಿಕೆ ತೋರುತ್ತಾ,ಬಾಲಕರು ಮತ್ತು ಬಾಲಕಿಯರಿಗೆ ಸಮರ ಕಲೆಯನ್ನು ಕಲಿಸುವ ವೇಳೆ ಮಾತನಾಡಿದರು.

‘ಕಲರಿಯಲಿ ಎರಡು ವಿಧಗಳಿದ್ದು ಒಂದು ಶಾಂತಿಯುತ ಇನ್ನೊಂದು ಸಮರಕ್ಕಾಗಿ’ ಎಂದು ಸಂಜೀವ್ ತಿಳಿಸಿದರು.

‘ನಾನು ನನ್ನ ಸಹೋದರನೊಂದಿಗೆ ಕಳರಿಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇನೆ. ಇಲ್ಲವಾದಲ್ಲಿ ಪುರಾತನ ಕಲೆ ನಶಿಸಿ ಹೋಗುತ್ತದೆ. ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣವಾಗಿ ಕಳರಿಯಲ್ಲಿ ತೊಡಗಿಸಿಕೊಂಡರೆ ವಿರೋಧಿಗಳು ಮರೆಯಾಗುತ್ತಾರೆ. ದೇಹವೇ ಕಣ್ಣಾಗುತ್ತದೆ.ಇದು ಮನಸ್ಸನ್ನು, ದೇಹ ಮತ್ತು ಆತ್ಮವನ್ನು ಶುದ್ಧೀಕರಿಸಿ ಏಕಾಗ್ರತೆಯನ್ನು ಜಾಗ್ರತಿ ಮಾಡಿಸುತ್ತದೆ. ವೇಗ ಮತ್ತು ತಾಳ್ಮೆ ಬರಿಸುತ್ತದೆ. ದೈಹಿಕ ಮತ್ತು ಮಾನಸಿಕ ಶಕ್ತಿ ನೀಡುತ್ತದೆ’ ಎಂದು ಮೀನಾಕ್ಷಿ ಅಮ್ಮ ಅವರ ಮೊಮ್ಮಗಳು ಸಿವಿಲ್ ಇಂಜಿನಿಯರ್ ಆಗಿರುವ ಅಲಕಾ ಅವರು ಕವಿತೆಯ ರೂಪದಲ್ಲಿ ಕಲೆಯ ಮಹತ್ವವನ್ನು ಹೇಳಿದರು.

2017 ರಲ್ಲಿ ಮೀನಾಕ್ಷಿ ಅಮ್ಮ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಟಾಪ್ ನ್ಯೂಸ್

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.