ತುಂಡು ಚಡ್ಡಿಯಲ್ಲೇ ಮದುವೆಯಾದ ವರ… ಕಾರಣ ಇಷ್ಟೇ ನೋಡಿ..!
Team Udayavani, Apr 8, 2021, 3:06 PM IST
ಇಂಡೋನೇಷಿಯಾ : ಸಾಮಾನ್ಯವಾಗಿ ಮದುವೆ ಅಂದ್ರೆ ಎಲ್ಲರೂ ಖುಷಿ ಖುಷಿಯಿಂದ, ಬಣ್ಣ ಬಣ್ಣದ ಉಡುಪು ತೊಟ್ಟು ಅಲಂಕಾರ ಮಾಡಿಕೊಂಡು ಇರುತ್ತಾರೆ. ಅದ್ರಲ್ಲೂ ಮದುವೆ ವಧು-ವರ ವಿಶೇಷ ರೀತಿಯ ದಿರಿಸುಗಳನ್ನು ತೊಟ್ಟು ಎಲ್ಲರ ಗಮನ ಸೆಳೆಯುತ್ತಾರೆ. ಕುಟುಂಬದ ಸದಸ್ಯರು, ನೆಂಟರು, ಸ್ನೇಹಿತರ ಮಧ್ಯೆ ವಧು-ವರರು ಕಂಗೊಳಿಸುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ಮದುವೆ ಸಂಪ್ರದಾಯ. ಆದ್ರೆ ಬರೀ ಚಡ್ಡಿಯಲ್ಲೇ ಮದುವೆಯ ಗಂಡು ಇರುವ ದೃಶ್ಯವನ್ನು ನೋಡಿದ್ದೀರಾ?. ಅಂತಹ ಒಂದು ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ ನೋಡಿ. ಅದಕ್ಕೆ ಒಂದು ಮುಖ್ಯ ಕಾರಣ ಕೂಡ ಇದೆ.
ಮದುವೆಯಾಗುತ್ತಿರುವ ವಧು ತುಂಬಾ ಚೆಂದವಾಗಿ ಸಿಂಗಾರ ಮಾಡಿಕೊಂಡು, ಮೈತುಂಬಾ ಒಡವೆ ಹಾಕಿಕೊಂಡು ಮುದ್ದಾಗಿ ಕೂತಿದ್ದಾಳೆ. ಆದ್ರೆ ಪಕ್ಕದಲ್ಲಿ ಕೂತಿರುವ ವರ ಕೈಗೆ ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡು ಬರೀ ಚಡ್ಡಿಯಲ್ಲೇ ಕೂತಿದ್ದಾನೆ. ನೀವು ಇದನ್ನು ನೋಡಿದ ಮೇಲೆ, ಇದೊಂದು ಸಂಪ್ರದಾಯ ಇರಬೇಕು ಅಂದುಕೊಂಡಿದ್ದೀರ ಅಂದ್ರೆ ಅದು ತಪ್ಪು ಕಲ್ಪನೆ. ಯಾಕಂದ್ರೆ ಅಲ್ಲಿ ನಡೆದಿರುವುದೇ ಬೇರೆ.
ವರದಿಯೊಂದರ ಪ್ರಕಾರ ಸದ್ಯ ವೈರಲ್ ಆಗುತ್ತಿರುವ ಈ ಮದುವೆ ಫೋಟೋ ಇಂಡೋನೇಷಿಯಾದ್ದು. ಮದುವೆ ಗಂಡಿನ ಹೆಸರು ಸುಪ್ರಪ್ತೋ ಎಂದು. ವಧುವಿನ ಹೆಸರು ದ್ವಿ ಕ್ರಿಸ್ಟಿಯಾನಿ. ಈ ಜೋಡಿಯ ಮದುವೆ ನಾಲ್ಕು ದಿನ ಇರುವಾಗ ಮದುವೆ ಗಂಡಿನ ಬೈಕ್ ಆಕ್ಸಿಡೆಂಟ್ ಆಗಿದೆ. ದ್ವಿ ಕ್ರಿಸ್ಟಿಯಾನಿ ಹೇಳಿರುವ ಪ್ರಕಾರ, ನನ್ನ ಗಂಡ ಪೆಟ್ರೋಲ್ ತರಲು ಹೋಗುವಾಗ ಅವರ ಬೈಕ್ ಆಕ್ಸಿಡೆಂಟ್ ಆಗಿದೆ. ಆ ಸಮಯದಲ್ಲಿ ಅವರ ಕೈ ಮತ್ತು ಕಾಲುಗಳಿಗೆ ಪೆಟ್ಟಾಗಿದ್ದು, ಮದುವೆ ಬಟ್ಟೆಗಳನ್ನು ಮತ್ತು ಆಭರಣಗಳನ್ನು ಹಾಕಿಕೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ಫೋಟೋ ನೋಡಿದ ನೆಟ್ಟಿಗರು ತುಂಬಾ ಗೇಲಿ ಮಾಡುತ್ತಿದ್ದಾರೆ. “ಬಹುಶಃ ಈ ಮದುವೆ ಆಕಸ್ಮಿಕವಾಗಿ ನಡೆಯುತ್ತಿದೆ ಎಂದು ಕೆಲವರು ಹೇಳಿದ್ರೆ, “ಅಪಘಾತವಾಗಿದ್ದರೂ ಸಹ ನೀವು ಸರಿಯಾದ ಬಟ್ಟೆಗಳನ್ನು ಏಕೆ ಧರಿಸಬಾರದು” ಎಂದು ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ