ಕೈಗೆ ಮುತ್ತು ಕೊಟ್ಟು ಕೋವಿಡ್ ಓಡಿಸುತ್ತೇನೆ ಎಂದ ಬಾಬಾ, ತಾನೇ ಸೋಂಕಿಗೆ ಬಲಿಯಾದ
Team Udayavani, Jun 12, 2020, 12:19 PM IST
ಮಧ್ಯಪ್ರದೇಶ ; ದೇಶಕ್ಕೆ ದೇಶವೇ ಕೋವಿಡ್ ಮಹಾ ಮಾರಿಗೆ ನಲುಗಿ ಹೋಗಿದೆ, ಇದರ ನಿರ್ಮೂಲನೆ ಮಾಡಲು ವಿಶ್ವದ ಅನೇಕ ರಾಷ್ಟ್ರಗಳು ಔಷಧಿಗಾಗಿ ಸಂಶೋಧನೆ ನಡೆಸುತ್ತಿರುವ ಸಂದರ್ಭದಲ್ಲಿ ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತಾನೊಬ್ಬ ಬಾಬಾ, ದೇವಾ ಮಾನವ ನಾನು ಕೈಗೆ ಮುತ್ತು ನೀಡಿದರೆ ಕೋವಿಡ್ ಸೋಂಕು ದೂರವಾಗುತ್ತದೆ ಎಂದು ಹೇಳಿ ಹಲವಾರು ಜನರ ಕೈಗೆ ಮುತ್ತು ನೀಡಿ ಕೊನೆಗೆ ತಾನೇ ಸೋಂಕಿಗೆ ಬಲಿಯಾಗಿದ್ದಾನೆ.
ಬಲಿಯಾದ ವ್ಯಕ್ತಿಯಲ್ಲಿ ಸೋಂಕು ಇರುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ಆತನಿಂದ ಮುತ್ತು ಪಡೆದ ಸುಮಾರು 85ಕ್ಕೂ ಹೆಚ್ಚು ಜನರಿಗೂ ಸೋಂಕು ಹಬ್ಬಿರುವುದು ದೃಢ ಪಟ್ಟಿದೆ, ಸದ್ಯ ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲಿ ಇಂತ ಪ್ರಕರಣ ಬೆಳಕಿಗೆ ಬಂದಿದ್ದು ವ್ಯಕ್ತಿ ತಾನು ಬಾಬಾ, ದೇವಮಾನವ ತನ್ನಲ್ಲಿ ದೈವೀ ಶಕ್ತಿ ಇದೆ ನನ್ನ ಬಳಿ ಬಂದು ಮುತ್ತು ಪಡೆದರೆ ಕೋವಿಡ್ ಸೋಂಕಿನಿಂದ ದೂರವಾಗಬಹುದು ಎಂದು ಹೇಳಿಕೊಂಡು ಜಿಲ್ಲೆಯ ಜನರನ್ನು ನಂಬಿಸಿದ್ದಾನೆ , ಈತನ ಮಾತಿಗೆ ಮರುಳಾಗಿ ಸುಮಾರು 85ಕ್ಕೂ ಹೆಚ್ಚು ಮಂದಿ ಈತನಿಂದ ಮುತ್ತಿಕ್ಕಿದ್ದಾರೆ ಇದಾದ ಕೆಲವು ದಿನಗಳ ಬಳಿಕ ಬಾಬಾ ಎನಿಸಿಕೊಂಡ ವ್ಯಕ್ತಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾನೆ.
ಜಿಲ್ಲೆಯ ಅರೋಗ್ಯ ಅಧಿಕಾರಿಗಳು ಸೋಂಕಿನ ಹಿನ್ನೆಲೆಯಲ್ಲಿ ಈತನ ಸಂಪರ್ಕ ಹೊಂದಿದವರ ಪಟ್ಟಿ ಮಾಡುವಾಗ ಪಟ್ಟಿ ಬೆಳೆಯುತ್ತಲೇ ಹೋಯಿತು.