ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ
Team Udayavani, Oct 16, 2021, 8:16 PM IST
ದಾಂಡೇಲಿ : ನಗರದ ಸಮೀಪದ ಹಸನ್ಮಾಳದಲ್ಲಿರುವ ಗೌಳಿ ಬುಡಕಟ್ಟು ಸಮುದಾಯವರು ಒಂದಾಗಿ ತಮ್ಮ ಪರಂಪರಗತವಾಗಿ ಬಂದ ಗೌಳಿ ಸಂಪ್ರದಾಯದಂತೆ ದಸರಾ ಹಬ್ಬವನ್ನು ಆಚರಿಸಿ ಗಮನ ಸೆಳೆದರು.
ಹಸನ್ಮಾಳದ ಗೌಳಿ ಸಮುದಾಯದವರು ಎಲ್ಲರು ಸೇರಿ ಹತ್ತಿರದ ಕಾಡಿಗೆ ಹೋಗಿ, ತಮ್ಮ ಆರಾಧ್ಯ ದೇವರಾದ ವಿಠೋಭ ದೇವರನ್ನು ಭಜಿಸಿ ಸಾಮೂಹಿಕವಾಗಿ ಪೂಜೆ ಮಾಡುವುದರ ಮೂಲಕ ದಸರಾ ಹಬ್ಬವನ್ನು ಆಚರಿಸಿಕೊಂಡರು. ಅವರವರ ಮನೆಯಿಂದ ಮಾಡಿಕೊಂಡು ಬಂದ ನೈವೈದ್ಯವನ್ನು ಈ ಸಂದರ್ಭದಲ್ಲಿ ದೇವರ ಹೆಸರಲ್ಲಿ ಬಡಿಸಿ, ಪೂಜಿಸಿ ಸಮರ್ಪಿಸಲಾಯ್ತು. ತಮ್ಮ ತಮ್ಮ ಮನೆಗಳಿಂದ ಮಣ್ಣಿನ ಮಡಕೆಯಲ್ಲಿ ತಂದಿದ್ದ ಮಜ್ಜಿಗೆಯನ್ನು ಕುಡಿದು ಪರಸ್ಪರ ಒಬ್ಬರ ಮೇಲೊಬ್ಬರು ಎರಚಿ ವಿಶಿಷ್ಟ ಆರಾಧನೆಯಲ್ಲಿ ತೊಡಗಿಕೊಂಡರು. ಇಲ್ಲಿ ಪ್ರತಿಯೊಬ್ಬರು ಕಂಬಳಿಯನ್ನು ಹೊದ್ದಿರಬೇಕಾಗಿದ್ದು, ಹೊದ್ದಿರುವ ಕಂಬಳಿಯ ಮೇಲೆ ಮಜ್ಜಿಗೆಯನ್ನು ಎರೆಯಲಾಗುತ್ತದೆ.
ತಮ್ಮ ತಮ್ಮ ಮನೆಗಳಿಂದ ತಂದ ನೈವೈಧ್ಯಗಳನ್ನು ಬಡಿಸಿ, ತಮ್ಮ ತಮ್ಮ ಅಬೀಷ್ಟೆಗಳನ್ನು ಪ್ರಾರ್ಥಿಸಿ ಕಾಯಿ ಒಡೆದು ಪೂಜೆ ಸಲ್ಲಿಸಲಾಗುತ್ತದೆ. ಸರಿ ಸುಮಾರು 5 ರಿಂದ 6 ಗಂಟೆಗಳ ಅವಧಿಯವರೆಗೆ ಹಸನ್ಮಾಳದ ಕಾಡಿನಲ್ಲೆ ಗೌಳಿ ಸಮಾಜ ಬಾಂಧವರು ಪೂಜಾರಾಧನೆಯಲ್ಲಿ ತೊಡಗಿಸಿಕೊಂಡು, ಬಳುವಳಿಯಾಗಿ ಬಂದ ಸಂಸ್ಕೃತಿ ಮತ್ತು ಸಂಸ್ಕಾರಗಳ ಆಚರಣೆಯನ್ನು ಮುಂದುವರೆಸಿ ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮದಲ್ಲಿ 150 ಕ್ಕೂ ಅಧಿಕ ಗೌಳಿ ಸಮುದಾಯದವರು ಭಾಗವಹಿಸಿದ್ದರು.
ಇದನ್ನೂ ಓದಿ :ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ
ಈ ನೆಲದ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿ ಬೆಳೆಸಿ, ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಗೌಳಿ ಸಮುದಾಯವು ತನ್ನದೇ ಆದ ರೀತಿಯಲ್ಲಿ ಪರಂಪರಗತವಾಗಿ ಬಂದ ಸಂಸ್ಕೃತಿ, ಸಂಸ್ಕಾರಗಳಿಗೆ ಎಲ್ಲಿಯೂ ಆಧುನಿಕ ಸ್ಪರ್ಷ ನೀಡದೆ ಮುಂದುವರಿಸಿಕೊಂಡು ಹೋಗುತ್ತಿರುವುದು ಗೌಳಿ ಸಮುದಾಯದ ಮಹತ್ವದ ಕಾರ್ಯ ಎಂದೆ ಹೇಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು
MUST WATCH
ಹೊಸ ಸೇರ್ಪಡೆ
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ