ಸಕ್ಕರೆ, ಉಪ್ಪು ಬೆರೆಸಬೇಡಿ: ದೈನಂದಿನ ಆಹಾರ ಸೇವನೆಯಲ್ಲಿ ಮೊಸರಿಗೆ ಆದ್ಯತೆ ಇರಲಿ…
ಪ್ರತಿನಿತ್ಯವೂ ಊಟದ ಜೊತೆಯಲ್ಲಿ ಮೊಸರು ಸೇವಿಸುವ ಅಭ್ಯಾಸ ಹಲವರಿಗಿದೆ
Team Udayavani, Aug 19, 2022, 12:47 PM IST
ಊಟದ ಜೊತೆಗೆ ಮೊಸರು ಇರಲೇಬೇಕು ಅಂತಾರೆ ಕೆಲವರು. ಆಯುರ್ವೇದದ ಪ್ರಕಾರವೂ ಮೊಸರಿನಲ್ಲಿ ಹತ್ತಾರು ಪೋಷಕಾಂಶಗಳು, ಔಷಧೀಯ ಗುಣಗಳು ಅಡಗಿವೆ. ಆದರೆ, ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಮೊಸರನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಅದರಿಂದ ಉಪಯೋಗವಾಗುತ್ತದೆ. ಹಾಗಾದ್ರೆ, ಮೊಸರನ್ನು ಸೇವಿಸುವ ಸರಿಯಾದ ಕ್ರಮ ಯಾವುದು ಗೊತ್ತಾ?
ಸಕ್ಕರೆ, ಉಪ್ಪು: ಮೊಸರಿನ ಜೊತೆಗೆ ಉಪ್ಪು ಅಥವಾ ಸಕ್ಕರೆ ಬೆರೆಸಿ ತಿನ್ನುವ ಅಭ್ಯಾಸ ಹಲವರಿಗಿದೆ. ಆದರೆ, ಸಂಸ್ಕರಿಸಿದ ಸಕ್ಕರೆ ಹಾಗೂ ಉಪ್ಪಿನಲ್ಲಿರುವ ರಾಸಾಯನಿಕ ಅಂಶಗಳಿಂದ ಮೊಸರಿನ ಪೋಷಕಾಂಶಗಳು ನಷ್ಟವಾಗುತ್ತವೆ. ಅದರ ಬದಲಿಗೆ, ರಾಕ್ಸಾಲ್ಟ್/ ಬ್ಲಾಕ್ಸಾಲ್ಟ್ ಮತ್ತು ಬೆಲ್ಲ ಬಳಸಿ.
ರಾತ್ರಿ ಊಟದ ಜೊತೆ: ಆಯುರ್ವೇದ ಹೇಳುವಂತೆ, ಸೂರ್ಯಾಸ್ತದ ನಂತರ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಶೀತ ಉಂಟು ಮಾಡುವ ಮೊಸರನ್ನು ಸಂಜೆ ನಂತರ ಸೇವಿಸಿದರೆ ಸೈನಸ್, ಜ್ವರ, ಕೆಮ್ಮು ಬರಬಹುದು. ಆ ಸಮಯದಲ್ಲಿ ಮೊಸರಿನ ಬದಲು ಮಜ್ಜಿಗೆ ಬಳಸಿ. ಬೆಳಗ್ಗಿನ ಉಪಾಹಾರದಲ್ಲಿ ಮೊಸರು ಇದ್ದರೆ ಒಳ್ಳೆಯದು.
ಸೌತೆಕಾಯಿ, ಬೂಂದಿಕಾಳು, ವಡೆ: ಮೊಸರಿನ ಜೊತೆ ಸೌತೆಕಾಯಿ ಹಾಕುವುದು ಆಯುರ್ವೇದದ ಪ್ರಕಾರ ಇದು ಒಳ್ಳೆಯದಲ್ಲ. ಸೌತೆಕಾಯಿಯ ಬದಲು ಸೋರೆಕಾಯಿ ಬಳಸಬಹುದಂತೆ. ಇನ್ನು, ಬೂಂದಿಕಾಳು ಅಥವಾ ವಡೆ (ಮೊಸರಲ್ಲಿ ಅದ್ದಿದ ವಡೆ)ಯ ಎಣ್ಣೆಯು, ಮೊಸರಿನೊಡನೆ ಸೇರಿದಾಗ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
ಚರ್ಮ ಸಮಸ್ಯೆ: ಮೊಡವೆ, ಕಜ್ಜಿ, ತುರಿಕೆಯಂಥ ಚರ್ಮದ ಸಮಸ್ಯೆಗಳನ್ನು ಹೊಂದಿರುವವರು ಮೊಸರನ್ನು ಅತಿಯಾಗಿ ಸೇವಿಸಬಾರದು. ಬದಲಿಗೆ ಮಜ್ಜಿಗೆ ಬಳಸಬಹುದು ಅಥವಾ ಮೊಸರನ್ನು ಚೆನ್ನಾಗಿ ಚಮಚದಿಂದ ಕಲಸಿ, ಸೇವಿಸಬಹುದು.
ಬಿಸಿ ಮಾಡುವುದು: ಕೆಲವು ಪದಾರ್ಥಗಳನ್ನು ತಯಾರಿಸುವಾಗ, ಮೊಸರನ್ನು ಬಿಸಿ ಮಾಡುವುದಿದೆ. ಹಾಗೆ ಮಾಡಿದಾಗ, ಅದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ನಾಶವಾಗಿ, ಪೌಷ್ಟಿಕ ಅಂಶ ನಷ್ಟವಾಗುತ್ತದೆ.
ವರ್ಷಪೂರ್ತಿ ಸೇವಿಸುವುದು: ಪ್ರತಿನಿತ್ಯವೂ ಊಟದ ಜೊತೆಯಲ್ಲಿ ಮೊಸರು ಸೇವಿಸುವ ಅಭ್ಯಾಸ ಹಲವರಿಗಿದೆ. ಆದರೆ, ಚಳಿಗಾಲ ಮತ್ತು ಬೇಸಿಗೆಯಲ್ಲಿ ಮೊಸರು ಸೇವಿಸಿ, ಮಳೆಗಾಲದಲ್ಲಿ ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು ಅನ್ನುತ್ತದೆ ಆಯುರ್ವೇದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ