ಚಳಿಗಾಲದಲ್ಲಿ ಆರೋಗ್ಯ ಸ್ಥಿರತೆ: ಈ ಯೋಗಾಸನಗಳು ಸಹಕಾರಿ
ಎದೆಯ ಭಾಗವನ್ನು ಬಾಣದಂತೆ ಮೇಲಕ್ಕೆತ್ತಿಕೊಳ್ಳಿ. ಇದನ್ನು 2-3 ಸಲ ಹಾಗೆ ಮಾಡಿ
Team Udayavani, Jan 25, 2021, 11:12 AM IST
ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಠಾತ್ ಆಗಿ ಶೀತ, ಕೆಮ್ಮಿನಂತಹ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಈ ಹಿನ್ನೆಲೆಯಲ್ಲಿ ಕೆಲವು ಯೋಗಾಸನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ವೃಕ್ಷಾಸನ: ನೇರವಾಗಿ ನಿಂತುಕೊಳ್ಳಿ ಮತ್ತು ಮುಂದೆ ಯಾವುದಾದರೂ ವಸ್ತುವಿನ ಮೇಲೆ ನೇರ ದೃಷ್ಟಿಯನ್ನಿಡಲು ಪ್ರಯತ್ನಿಸಿ. ನಿಧಾನವಾಗಿ ಉಸಿರಾಡಿ ಮತ್ತು ಎಡದ ಕಾಲನ್ನು ಮೇಲಕ್ಕೆತ್ತಿ ಮತ್ತು ಇದನ್ನು ಬಲದ ತೊಡೆಯ ಮೇಲಿಡಿ. ಎಡದ ಮೊಣಕಾಲು ಹೊರಗಡೆ ನೋಡುತ್ತಲಿರಲಿ. ಸ್ಥಿರವಾಗಿರುವಾಗ ಕೈಗಳನ್ನು ಬಿಡುಗಡೆ ಮಾಡಿ. ಉಸಿರಾಡಿ ಮತ್ತು ನಿಧಾನವಾಗಿ ಕೈಗಳನ್ನು ಹಾಗೆ ತಲೆಯಿಂದ ಮೇಲಕ್ಕೆತ್ತಿ ಕೈ ಮುಗಿಯಿರಿ. ಉಸಿರನ್ನು ಮೇಲಕ್ಕೆ ಎಳೆದುಕೊಂಡು ಹಾಗೆ ಕೆಲವು ಸೆಕೆಂಡು ಕಾಲ ಇರಿ ಮತ್ತು ನಿಧಾನವಾಗಿ ಸಾಮಾನ್ಯ ಭಂಗಿಗೆ ಬನ್ನಿ.
ಲಾಭಗಳು: ಈ ಆಸನವು ಸಮತೋಲ, ಏಕಾಗ್ರತೆ ಮತ್ತು ಕಾಲುಗಳಲ್ಲಿನ ಸ್ಥಿರತೆ ಸುಧಾರಣೆ ಮಾಡುವುದು. ಜತೆಗೆ ಆತ್ಮವಿಶ್ವಾಸ ಹಾಗೂ ಸ್ವಪ್ರಜ್ಞೆ ನಿರ್ಮಿಸುವುದು.
ಚಕ್ರಾಸನ: ಕೈಗಳು, ಮೊಣಕಾಲುಗಳನ್ನು ಹಾಗೆ ನೆಲದ ಮೇಲಿಡಿ. ಮೊಣಕಾಲುಗಳು ಸೊಂಟದ ಸಮಾನವಾಗಿರಲಿ, ಮೊಣಕೈಯು ಭುಜದ ನೇರಕ್ಕಿರಲಿ. ಉಸಿರಾಡುತ್ತಾ ನೀವು ತಲೆಯನ್ನು ಮೇಲಕ್ಕೆತ್ತಿ, ಹಾಗೆ ಎದೆಯ ಭಾಗವನ್ನು ಬಾಣದಂತೆ ಮೇಲಕ್ಕೆತ್ತಿಕೊಳ್ಳಿ. ಇದನ್ನು 2-3 ಸಲ ಹಾಗೆ ಮಾಡಿ ಮತ್ತು ಉಸಿರನ್ನು ಬಿಡುತ್ತಾ ಹಾಗೆ ಹಿಂದಕ್ಕೆ ಬನ್ನಿ.
ಲಾಭಗಳು: ಈ ಯೋಗಾಸನದಿಂದ ಬೆನ್ನುಹುರಿಯ ಸಮಸ್ಯೆ ಕಡಿಮೆಯಾಗುತ್ತದೆ. ಜತೆಗೆ ಇದು ಕುತ್ತಿಗೆ ಮತ್ತು ಬೆನ್ನಿನ ಭಾಗದಲ್ಲಿ ಕಾಣಿಸಿಕೊಳ್ಳುವ ನೋವನ್ನು ನಿವಾರಿಸುವುದರೊಂದಿಗೆ ಗಂಟುಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯ ಭಾಗದಲ್ಲಿ ಇರುವಂತಹ ಕೆಲವೊಂದು ಅಂಗಾಂಗಗಳಾಗಿರುವಂತಹ ಕಿಡ್ನಿಗೆ ಒಳ್ಳೆಯದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ