ಕೆಪಿಕೆಬಿಗೆ ನೂತನ ಸಿಇಒ ಆಗಿ ರಂಜನ್ ಕುಮಾರ್ ನೇಮಕ
Team Udayavani, Jun 4, 2020, 8:57 PM IST
ನವದೆಹಲಿ: ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರದ (ಕೆಪಿಕೆಬಿ) ನೂತನ ಸಿಇಒ ಆಗಿ ಡಿಐಜಿ ರಂಜನ್ ಕುಮಾರ್ ಅವರನ್ನು ನೇಮಿಸಿ, ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ಈ ಹಿಂದೆ ಕೆಪಿಕೆಬಿಗೆ ಸಿಇಒ ಆಗಿ ಡಿಐಜಿ ಆರ್.ಎಂ. ಮೀನಾ ಇದ್ದರು. ಪ್ರಧಾನಿ ಮೋದಿ ಅವರು ಆತ್ಮನಿರ್ಭರ ಭಾರತ ಪರಿಕಲ್ಪನೆ ಮುಂದಿಡುತ್ತಿದ್ದಂತೆಯೇ ಗೃಹ ಸಚಿವ ಅಮಿತ್ ಶಾ, ಪ್ಯಾರಾಮಿಲಿಟರಿ ಕ್ಯಾಂಟೀನ್ಗಳಲ್ಲಿ ಜೂನ್ 1ರಿಂದ ಸ್ವದೇಶಿ ವಸ್ತುಗಳ ಮಾರಾಟದ ಕುರಿತು ಸರಣಿ ಟ್ವೀಟ್ ಮಾಡಿದ್ದರು. ಎರಡು ದಿನಗಳ ಹಿಂದಷ್ಟೇ 1 ಸಾವಿರ ವಿದೇಶಿ ಉತ್ಪನ್ನಗಳ ನಿಷೇಧದ ಪಟ್ಟಿಯನ್ನು ಕೆಪಿಕೆಬಿ ಬಿಡುಗಡೆ ಮಾಡಿ, ಕೂಡಲೇ ಹಿಂಪಡೆದಿತ್ತು. ಸ್ವದೇಶಿ ವಸ್ತು ಮಾರಾಟ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಫಲರಾದ ಕಾರಣಕ್ಕಾಗಿ ಸಿಇಒ ಬದಲಾವಣೆಯಾಗಿದೆ ಎನ್ನಲಾಗುತ್ತಿದೆ.
“ಕೇಂದ್ರ ಸರ್ಕಾರದ ಕಡೆಯಿಂದ ನಮಗೆ ಇನ್ನೂ ನಿಷೇಧಿತ ವಿದೇಶಿ ಉತ್ಪನ್ನಗಳ ಪಟ್ಟಿ ಬಂದಿಲ್ಲ’ ಎಂದು ಕೆಪಿಕೆಬಿ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್