ಕೋವಿಡ್-19 ರೋಗಿಗಳಿಗೆ ಇದೇ ಆಪದ್ಬಾಂಧವ

ವೆಂಟಿಲೇಟರ್‌ ಹೇಗೆ ಕೆಲಸ ಮಾಡುತ್ತೆ?

Team Udayavani, Apr 8, 2020, 12:10 PM IST

ಕೋವಿಡ್-19 ರೋಗಿಗಳಿಗೆ ಇದೇ ಆಪದ್ಬಾಂಧವ

ಸಾಂದರ್ಭಿಕ ಚಿತ್ರ

ವೆಂಟಿಲೇಟರ್‌ಗಳ ಸದ್ದು ಆಸ್ಪತ್ರೆಗೆ ಹೋದವರಿಗೆ ಮಾತ್ರ ಗೊತ್ತಿರುತ್ತಿತ್ತು. ಈಗ ಕೋವಿಡ್-19 ಕಾಟದಿಂದ ಅವುಗಳ ಉಪಯುಕ್ತತೆ ಎಷ್ಟು ಎಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ. ಎಲ್ಲ ರಾಷ್ಟ್ರಗಳೂ ಈಗ ವೆಂಟಿಲೇಟರ್‌ಗಳ ಖರೀದಿಗೆ ಮುಂದಾಗಿವೆ. ನಿನ್ನೆಯಷ್ಟೇ ಬ್ರಿಟನ್‌ ಸರಕಾರ 10 ಸಾವಿರ ವೆಂಟಿಲೇಟರ್‌ ಖರೀದಿಗೆ ಮುಂದಾಯಿತು. ಅಮೆರಿಕವೂ ಅದರ ಹಿಂದಿದೆ. ಹಾಗಾದರೆ ವೆಂಟಿಲೇಟರ್‌ ಯಾಕೆ ಮುಖ್ಯ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಒಂದು ಲೆಕ್ಕಾಚಾರದ ಪ್ರಕಾರ 40 ಸಾವಿರ ವೆಂಟಿಲೇಟರ್‌ಗಳು ಇವೆ. ಆದರೆ ಕೊರೊನಾ ಉಲ್ಬಣಗೊಂಡಿದ್ದೇ ಆದಲ್ಲಿ ಇದು ಏನಕ್ಕೂ ಸಾಲದು. ಲಕ್ಷಗಟ್ಟಲೆ ವೆಂಟಿಲೇಟರ್‌ಗಳು ಬೇಕಾಗುತ್ತವೆ. ಸದ್ಯ ಭಾರತದಲ್ಲಿ ಈ ಕಾರಣಕ್ಕೆ ವೆಂಟಿಲೇಟರ್‌ಗಳ ಪೈಪ್‌ಗಳನ್ನು ವಿಭಾಗಿಸಿ ಕೊಡುವ ಬಗ್ಗೆ ಪ್ರಯೋಗ ನಡೆದಿದೆ. ಯಶಸ್ವಿಯೂ ಆಗಿದೆ. ಅಮೆರಿದಕಲ್ಲಿ ಸದ್ಯ 2 ಲಕ್ಷ ವೆಂಟಿಲೇಟರ್‌ಗಳು ಇವೆ

ಮಣಿಪಾಲ: ಕೋವಿಡ್-19 ವೈರಾಣು ಶ್ವಾಸಕೋಶವನ್ನು ಆವರಿಸಿದಾಗ ತೀವ್ರವಾಗಿ ಸಮಸ್ಯೆಯಾಗುವುದು ಉಸಿರಾಟಕ್ಕೆ. ಜಗತ್ತಿನಾದ್ಯಂತ ಇಂತಹ ಸಮಸ್ಯೆ ಇದ್ದ ರೋಗಿಗಳನ್ನು ಉಳಿಸಲು ವೈದ್ಯರು ವೆಂಟಿಲೇಟರ್‌ ಇಡುತ್ತಾರೆ. ಅರ್ಥಾತ್‌ ಉಸಿರಾಟಕ್ಕೆ ಪೂರಕವಾಗುವಂತೆ ಆಮ್ಲಜನಕ/ಕೃತಕ ಉಸಿರಾಟದ ವ್ಯವಸ್ಥೆ.  ಕೋವಿಡ್-19 ಪೀಡಿತರ ಸಂಖ್ಯೆ ಹೆಚ್ಚಿದಷ್ಟು ಮತ್ತು ತೀವ್ರತರವಾದ ಪ್ರಕರಣಗಳು ಇದ್ದಾಗ ವೆಂಟಿಲೇಟರ್‌ ಅಲಭ್ಯತೆ ಕಾಡುತ್ತದೆ. ಇದು ರೋಗಿಗಳನ್ನು ಉಳಿಸುವುದಕ್ಕೂ ಸಮಸ್ಯೆಯಾಗುತ್ತದೆ.ಆದ್ದರಿಂದ ತುರ್ತು ನಿಗಾಘಟಕದಲ್ಲಿರುವ ರೋಗಿಗಳಿಗೆ ವೆಂಟಿಲೇರ್‌ ನೆರವು ಅಗತ್ಯ. ಸಾಮಾನ್ಯವಾಗಿ ಕೊರೊನಾ ಪೀಡಿತರಲ್ಲಿ 6 ಮಂದಿಯಲ್ಲಿ ಒಬ್ಬರಿಗೆ ಉಸಿರಾಟದ ಸಮಸ್ಯೆ ಹೆಚ್ಚು ಕಾಡುತ್ತದೆ ಮತ್ತು ವೆಂಟಿಲೇಟರ್‌ ಬೇಕಾಗುತ್ತದೆ ಎಂದು ಅಧ್ಯಯನವೊಂದು ಹೇಳುತ್ತದೆ.

ವೆಂಟಿಲೇಟರ್‌ ಹೇಗೆ ಕೆಲಸ ಮಾಡುತ್ತದೆ?
ಕೋವಿಡ್-19 ರೋಗ ತೀವ್ರವಾದ ಸಂದರ್ಭ ಅದು ಶ್ವಾಸಕೋಶದ ಅಂಗಾಶಯಗಳನ್ನು ಹಾನಿ ಮಾಡುತ್ತದೆ. ಇದರಿಂದಾಗಿ ರಕ್ತಕ್ಕೆ ಆಮ್ಲಜನಕ ನೀಡುವುದು ಸಾಧ್ಯವಾಗುವುದಿಲ್ಲ.  ನ್ಯುಮೋನಿಯಾ ಕೂಡ ಶುರುವಾಗಬಹುದು. ಅಲ್ಲದೇ ಕೆಲವೊಂದು ತೀವ್ರ ರೋಗಬಾಧೆಯ ಸಂದರ್ಭ ಇಡೀ ಶ್ವಾಸಕೋಶ ವ್ಯವಸ್ಥೆಯೇ ವಿಫ‌ಲವಾಗಬಹುದು. ಅಲ್ಲದೆ ಇದು ಇತರ ಅಂಗಾಂಗಳು ವಿಫ‌ಲವಾಗಲೂ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಇರುವುದೇ ಕೃತಕ ಉಸಿರಾಟ ವ್ಯವಸ್ಥೆ. ಇದು ಒಂದು ತಾಂತ್ರಿಕ ವ್ಯವಸ್ಥೆಯಾಗಿದ್ದು, ರೋಗಿ ಗಂಟಲಿನ ಮೂಲಕ ನಳಿಕೆಯೊಂದನ್ನು ಹಾಕಿ ಆಮ್ಲಜನಕವನ್ನು ನೇರವಾಗಿ ಶ್ವಾಸಕೋಶಕ್ಕೆ ನೀಡಲಾಗುತ್ತದೆ.

ವೆಂಟಿಲೇಟರ್‌ ರೋಗಿಯ ದೇಹದ ಸಾಮಾನ್ಯ ಉಷ್ಣತೆಗೆ ಪೂರಕವಾಗಿ ಉಷ್ಣ ಮತ್ತು ತೇವಾಂಶವನ್ನು ಆಮ್ಲಜನಕದೊಂದಿಗೆ ನೀಡುತ್ತದೆ. ತೀವ್ರತರವಾದ ಉಸಿರಾಟದ ಸಮಸ್ಯೆ ಇಲ್ಲದ ರೋಗಿಗಳಿಗೆ ಶ್ವಾಸಕೋಶಕ್ಕೆ ನಳಿಕೆ ಯನ್ನು ಹಾಕದೆ ಮುಖಕ್ಕೆ ಮಾಸ್ಕ್ ರೀತಿಯ ಸಾಧನ ಅಥವಾ ಮೂಗಿಗೆ ಪುಟ್ಟ ನಳಿಕೆ ಅಳವಡಿಸಿ ಆಮ್ಲಜನಕ ನೀಡಲಾಗುತ್ತದೆ. ಇದರೊಂದಿಗೆ ಆಮ್ಲಜನಕವನ್ನು ನಿಯಂತ್ರಿತ ರೀತಿಯಲ್ಲಿ ನೀಡಲು ಎಲೆಕ್ಟ್ರಾನಿಕ್‌ ಸಾಧನವೊಂದು ಇದ್ದು, ಇದು ವಾಲ್‌Ìಗಳ ಮೂಲಕ ಆಮ್ಲಜನಕವನ್ನು ರೋಗಿಗೆ ನೀಡುತ್ತದೆ. ಆಮ್ಲಜನಕ ಸಿಲಿಂಡರ್‌ ಅನ್ನು ಈ ಎಲೆಕ್ಟ್ರಾನಿಕ್‌ ಸಾಧನಕ್ಕೆ ಸಂಪರ್ಕಿಸಿ, ವ್ಯಕ್ತಿಯ ಉಸಿರಾಟದ ಪ್ರಮಾಣಕ್ಕೆ ಅನುಗುಣವಾಗಿ ವೆಂಟಿಲೇಟರ್‌ ಕೆಲಸ ನಿರ್ವಹಿಸುವಂತೆ ಮಾಡಲಾಗುತ್ತದೆ. ಇದರೊಂದಿಗೆ ರೋಗಿಗಳಿಗೆ ಇತರ ವೈದ್ಯಕೀಯ ನೆರವು ಸಾಮಾನ್ಯವಾಗಿದ್ದು, ಸಹಜ ಉಸಿರಾಟ ಸಾಧ್ಯವಾಗುವಲ್ಲಿವರೆಗೆ ವೆಂಟಿಲೇಟರ್‌ ಅನ್ನು ಇಡುತ್ತಾರೆ.

ವೆಂಟಿಲೇಟರ್‌ಗೆ ಎಷ್ಟು ದರ
ಉತ್ತಮ ಕಂಪೆನಿಯ ವೆಂಟಿಲೇಟರ್‌ಗೆ ಸುಮಾರು 4 ಲಕ್ಷ ರೂ. ಮೇಲ್ಪಟ್ಟು ಬೆಲೆ ಇದೆ. ಪ್ರತಿ ಬಾರಿ ರೋಗಿಗೆ ಅಳವಡಿಸುವಾಗ ಇದರ ಪೈಪ್‌ಗ್ಳನ್ನು ಬದಲಾಯಿಸಬೇಕು. ವೆಂಟಿಲೇಟರ್‌ಗೆ ಸಮರ್ಪಕ ಆಮ್ಲಜನಕ ಸಿಲಿಂಡರ್‌ ಪೂರೈಕೆಯೂ ಆಗುತ್ತಿರಬೇಕು.

ಭಾರತದಲ್ಲಿ ಎಷ್ಟಿದೆ?
ಭಾರತದಲ್ಲಿ ಒಂದು ಲೆಕ್ಕಾಚಾರದ ಪ್ರಕಾರ 40 ಸಾವಿರ ವೆಂಟಿಲೇಟರ್‌ಗಳು ಇವೆ. ಆದರೆ ಕೊರೊನಾ ಉಲ್ಬಣಗೊಂಡಿದ್ದೇ ಆದಲ್ಲಿ ಇದು ಏನಕ್ಕೂ ಸಾಲದು. ಲಕ್ಷಗಟ್ಟಲೆ ವೆಂಟಿಲೇಟರ್‌ಗಳು ಬೇಕಾಗುತ್ತವೆ. ಸದ್ಯ ಭಾರತದಲ್ಲಿ ಈ ಕಾರಣಕ್ಕೆ ವೆಂಟಿಲೇಟರ್‌ಗಳ ಪೈಪ್‌ಗ್ಳನ್ನು ವಿಭಾಗಿಸಿ ಕೊಡುವ ಬಗ್ಗೆ ಪ್ರಯೋಗ ನಡೆದಿದೆ. ಯಶಸ್ವಿಯೂಆಗಿದೆ. ಇದು ಒಂದೇ ವೆಂಟಿಲೇಟರ್‌ನಲ್ಲಿ ಎರಡು ರೋಗಿಗೆ ಅವಕಾಶ ಕೊಡಬಲ್ಲದು.

ಅಮೆರಿಕಕ್ಕೆ ಬೇಕು 9 ಲಕ್ಷ ವೆಂಟಿಲೇಟರ್‌!
ಅಮೆರಿದಕಲ್ಲಿ ಸದ್ಯ 2 ಲಕ್ಷ ವೆಂಟಿಲೇಟರ್‌ಗಳು ಇವೆ. ಇಲ್ಲಿಗೆ ಸುಮಾರು 9-10 ಲಕ್ಷ ವೆಂಟಿಲೇಟರ್‌ಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

– ಈಶ್ವರಚಂದ್ರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.