ನಾನು ಕೆಎಂಎಫ್ ಅಧ್ಯಕ್ಷನಾಗಬೇಕೆಂದಿದ್ದೇನೆ : ಬಾಲಚಂದ್ರ ಜಾರಕಿಹೊಳಿ
Team Udayavani, Aug 24, 2019, 10:29 PM IST
ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಬದಲಾಗಿ ಕೆಎಂಎಫ್ ಅಧ್ಯಕ್ಷನಾಗಬೇಕಿಂದಿದ್ದೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಸಿಎಂ ಬಿಎಸ್ ವೈ ಬೇಟಿಬಳಿಕ ಮಾತನಾಡಿದ ಅವರು ನಾನು ನೇರವಾಗಿ ಜನರ ಕೆಲಸ ಮಾಡಬೇಕೆದಿಂದ್ದೇನೆ ಅದಕ್ಕೆಂದೆ ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ 15 ಜನರ ವಿಶ್ವಾಸವನ್ನೂ ಗಳಿಸಿ ಸಂಪೂರ್ಣ ಬೆಂಬಲದಿಂದ ಅಧ್ಯಕ್ಷನಾಗಲು ಬಯಸಿದ್ದೇನೆ.
ಇದೇ ವಿಚಾರವಾಗಿ ಬಿಎಸ್ ವೈ ಬಳಿ ಮನವಿ ಮಾಡಿದ್ದೆ,ಅವರು ಒಪ್ಪಿ ಸರ್ಕಾರದಿಂದ ಈಗಾಗಲೇ ನಾಮನಿರ್ದೇಶನ ಮಾಡಿದ್ದಾರೆ
ರಾಜ್ಯ ಸರ್ಕಾರದಿಂದ ನನ್ನ ಹೆಸರು ಈಗಾಗಲೇ ನಾಮನಿರ್ದೇಶನಗೊಂಡಿದೆ. ಕೆಎಂಎಫ್ ನ 15 ಜನ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷನಾಗಬೇಕೆಂದಿದ್ದೇನೆ ಆಗಸ್ಟ್ 31 ರಂದು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಇದೇ ವೇಳೆ ನನ್ನ ಕ್ಷೇತ್ರದಲ್ಲಿ ನೆರೆಹಾವಳಿಯಿಂದ 6,000 ಮನೆಗಳು ಸಂಪೂರ್ಣ ಹಾನಿಯಾಗಿದೆ ಈ ಕುರಿತು ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಲು ಸಿಎಂ ಭೇಟಿ ಮಾಡಿದ್ದೇನೆ ಎಂದರು.