Big B, ಬಿಗ್ ಕೆ ಮಧ್ಯೆ ಬಿಗ್ ಎಸ್ ಇರಬೇಕಿತ್ತು !ಗೋವಾ ಚಿತ್ರೋತ್ಸವದಲ್ಲಿ ಅನುಪಮ ಸಮಾಗಮ
Team Udayavani, Nov 21, 2019, 12:36 PM IST
ಪಣಜಿ, ನ. 21: ಗೋವಾದ ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ಬುಧವಾರ ಬಿಗ್ ಬಿ ಮತ್ತ ಬಿಗ್ ಕೆ ಕಂಗೊಳಿಸಿದಾಗ ಕೊರತೆ ಎನಿಸಿದ್ದು ಬಿಗ್ ಎಸ್!
ಬಾಲಿವುಡ್ನ ಶಹೆನ್ಷಾ ಬಿಗ್ ಬಿ ಅಮಿತಾಬ್ ಬಚ್ಚನ್ ಚಿತ್ರೋತ್ಸವವನ್ನುಉದ್ಘಾಟಿಸಿದರು. ಜತೆಗೆ ತಮ್ಮ ಗೆಳೆಯ ತಮಿಳು ಚಿತ್ರನಟ ರಜನೀಕಾಂತ್ [ಬಿಗ್ ಬಿ ಎಂದರೆ ಬಾಲಿವುಡ್ನಲ್ಲಿ ಬಿಗ್ ಎಂದರ್ಥ. ಬಿಗ್ ಟಿ ಎಂದರೆ ಕಾಲಿವುಡ್ನಲ್ಲಿ ಬಿಗ್ ಎಂದರ್ಥ. ಬಾಲಿವುಡ್ ಹಿಂದಿ ಚಿತ್ರರಂಗವಾದರೆ, ಕಾಲಿವುಡ್ ತಮಿಳು ಚಿತ್ರರಂಗ] ರಿಗೆ ಸುವರ್ಣ ಮಹೋತ್ಸವ ನೆನಪಿನ ಗೌರವ ನೀಡಿ ಅಭಿನಂದಿಸಿದರು.
ಆಗ ಇಬ್ಬರೂ ಮೊದಲು ನಮಸ್ಕರಿಸಿದ್ದು ತಮ್ಮ ಅಭಿಮಾನಿಗಳಿಗೆ. ಇಬ್ಬರ ಮಾತೂ ಒಂದೇ ತೆರನದ್ದಾಗಿತ್ತು. ‘ನಿಜ, ನಮ್ಮನ್ನು ಬೆಳೆಸಿದ್ದುನಿರ್ದೇಶಕರು, ಚಿತ್ರ ಪರಿಣಿತರು ಎಲ್ಲವೂ ನಿಜ. ಅವರಿಗೆ ನಮ್ಮ ಧನ್ಯವಾದಗಳಿವೆ. ಆದರೂ, ಈ ಸ್ಥಿತಿಗೆ ನಮ್ನನ್ನು ತಂದು ನಿಲ್ಲಿಸಿರುವುದು ನೀವು [ಅಭಿಮಾನಿಗಳು]. ನಿಮ್ಮ ಋಣವೇ ದೊಡ್ಡದು’ ಎಂದು ಹೇಳಿದರು. ಇಬ್ಬರ ಮಾತಿಗೂ ಪ್ರೇಕ್ಷಕರು ತಮ್ಮ ಅಮೋಘ ಕರತಾಡನದ ಮೂಲಕ ಮೊಹರು ಒತ್ತಿದ್ದೂ ನಿಜ.
ಕೊರತೆ ಎನಿಸಿದ್ದು ಬಿಗ್ ಎಸ್ !
ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರ ಒಟ್ಟಿನ ದೃಶ್ಯವೇ ವಿಶಿಷ್ಟ ಎನ್ನುವಂತಿತ್ತು. ಆಗ ಅಲ್ಲಿ ಕೊರತೆ ಎನಿಸಿದ್ದು ಎಂದರೆ, ಬಿಗ್ ಎಸ್ !
ಕನ್ನಡ ಚಿತ್ರರಂಗ [ಸ್ಯಾಂಡಲ್ವುಡ್]ದ ಮೇರು ನಟ ಡಾ. ರಾಜಕುಮಾರ್ ಬಿಗ್ ಎಸ್ ಆಗಿ ಇದೇ ವೇದಿಕೆಯಲ್ಲಿ ಇವರೊಂದಿಗೆ ಇದ್ದಿದ್ದರೆ [ಅವರಿಗೆ ೯೦ ವರ್ಷವಾಗಿರುತ್ತಿತ್ತು. ಅತಿ ಹಿರಿಯ ನಟನೆಂಬ ಖ್ಯಾತಿಗೂ ಒಳಗಾಗಿರುತ್ತಿದ್ದರು]ಆ ದೃಶ್ಯವೇ ಬೇರಾಗುತ್ತಿತ್ತು.
ಈ ಮೂವರೂ ತಮ್ಮ ತಮ್ಮ ಚಿತ್ರರಂಗದಲ್ಲಿ ಗಳಿಸಿದ ಜನಪ್ರಿಯತೆ, ನಿರ್ಮಿಸಿದ ಜನಪ್ರಿಯತೆಯ ಅಲೆ ಅನನ್ಯ. ಕೆಲವು ವಿಷಯಗಳಲ್ಲಿ ನಡೆ ನುಡಿಯ ಮಧ್ಯೆ ಸಮನ್ವಯತೆಯನ್ನೂ ಇಟ್ಟುಕೊಂಡು ಬೆಳೆದವರು. ಪರಸ್ಪರ ಗೌರವ ತೋರುತ್ತಲೇ ಬಾಳಿದವರು. ಕೆಲವು ವಿವಾದದ ಸಂದರ್ಭದಲ್ಲೂ ತಮ್ಮಸಂಬಂಧಗಳನ್ನು ಗೋಜಲು ಮಾಡಿಕೊಳ್ಳದೇ ನಿರ್ವಹಿಸಿದವರು. ಈ ಮೂವರೂ ಒಂದೇ ವೇದಿಕೆಯಲ್ಲಿ, ಅದರಲ್ಲೂ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸುವರ್ಣ ಮಹೋತ್ಸವ ವೇದಿಕೆಯಲ್ಲಿ. ಎಂಥಾ ದೃಶ್ಯವಾಗಿರುತ್ತಿತ್ತು.
ಈ ಮೂರೂ ಚಿತ್ರರಂಗದಲ್ಲಿ ಕಂಡುಬರುತ್ತಿರುವ ಕೊರತೆ ಈಗ ಒಂದೇ ಈ ಮೂರೂ ಬಿಗ್ಗಳ ನಂತರ ಹೊಸ ಬಿಗ್ಗಳೇ ತೋರುತ್ತಿಲ್ಲ !
ಇಲ್ಲಿ ಬಿಗ್ ಎಸ್ ಎಂದರೆ ಸ್ಯಾಂಡಲ್ವುಡ್ನ ಬಿಗ್ ಎಂದಷ್ಟೇ ಅಲ್ಲ. ಹಿರಿಯ ನಟನಾಗಿ ಭಾರತೀಯ ಚಿತ್ರರಂಗದ ಷಹೆನ್ಷಾ [ಅನಭಿಷಿಕ್ತ ಚಕ್ರವರ್ತಿ] ಆಗಿ ಕಂಗೊಳಿಸುತ್ತಿದ್ದರು ಡಾ. ರಾಜಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ