ಪ್ರತಿಯೊಬ್ಬರ ಕೈಯಲ್ಲಿ ಕ್ಯಾಮೆರಾ ಇದೆ : ಆದರೆ ಸಿನಿಮಾ ಇಲ್ಲ !
ಗೋವಾ ಚಿತ್ರೋತ್ಸವದಲ್ಲಿ ಪ್ರಿಯದರ್ಶನ್ ಅಭಿಪ್ರಾಯ
Team Udayavani, Nov 22, 2019, 9:37 AM IST
ಪಣಜಿ: ಚಿತ್ರಕಥೆ, ಸಿನೆ ಛಾಯಾಗ್ರಹಣ ಹಾಗೂ ವಿನ್ಯಾಸವೇ ಸಿನಿಮಾದ ಅಂತಃಸತ್ತ್ವ. ಅದೇ ಇಂದಿನ ಸಿನಿಮಾಗಳಲ್ಲಿ ಕಾಣೆಯಾಗುತ್ತಿದೆ !
ಇದನ್ನು ಹುಡುಕುವುದೇ ಸವಾಲಿನ ಕೆಲಸವಾಗಿದೆ ಎಂದವರು ಭಾರತೀಯ ಪನೋರಮಾ ವಿಭಾಗದ ಆಯ್ಕೆ ಸಮಿತಿ. ಇದರ ಅಧ್ಯಕ್ಷರಾದ ಪ್ರಿಯದರ್ಶನ್ ಸಿನಿಮಾ ಆಯ್ಕೆ ಕುರಿತು ವಿವರಿಸುವಾಗ ಆತಂಕ ವ್ಯಕ್ತಪಡಿಸಿದ್ದು ಇದೇ ನೆಲೆಯಲ್ಲಿ.
‘ಭಾರತೀಯ ರಿಯಲಿಸ್ಟಿಕ್ ಸಿನಿಮಾಗಳು ತಮ್ಮ ಬಣ್ಣ ಕಳೆದುಕೊಳ್ಳುತ್ತಿವೆ. ಗುಣಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಇದು ಸಮಿತಿಗೆ ಈ ಬಾರಿಯ ಆಯ್ಕೆಗೆ ಬಂದ ಸಿನಿಮಾಗಳು ಕಂಡು ಬಂದಾಗ ಅನಿಸಿದ್ದು’ ಎಂದರು ಪ್ರಿಯದರ್ಶನ್.
ಒಂದು ಸಿನಿಮಾದ ಗುಣಮಟ್ಟವನ್ನು ನೋಡುವುದೇ ಅದರ ಚಿತ್ರಕಥೆ, ಸಿನೆ ಛಾಯಾಗ್ರಹಣ ಹಾಗೂ ವಿನ್ಯಾಸದಿಂದ. ಅವುಗಳೇ ಇಂದಿನ ಹಲವು ಸಿನಿಮಾಗಳಲ್ಲಿ ಕಾಣೆಯಾಗಿವೆ. ಹಾಗಾದರೆ ಒಳ್ಳೆಯ ಸಿನಿಮಾ ಎಂದರೆ ಏನು ಎಂಬುದು ಅವರ ಪ್ರಶ್ನೆಯಾಗಿತ್ತು.
ಬಹಳ ಕಷ್ಟವಾಗಲಿಲ್ಲ
ಒಟ್ಟು 314 ಸಿನಿಮಾಗಳನ್ನು ವೀಕ್ಷಿಸುವ ಮೊದಲು ಸಂಖ್ಯೆಯನ್ನು ಕಂಡು ಕಷ್ಟವೆಂದಕೊಂಡಿದ್ದೆವು. ಸೀಮಿತ ಅವಧಿಯಲ್ಲಿ ಎಲ್ಲವನ್ನೂ ವೀಕ್ಷಿಸಿ, ಅಭಿಪ್ರಾಯ ಸಂಗ್ರಹಿಸಿ ನಿರ್ಧರಿಸುವುದು ಕಷ್ಟ. ಆದರೆ, ಸಿನಿಮಾಗಳ ಗುಣಮಟ್ಟ ಕಂಡ ಬಳಿಕ ಆಯ್ಕೆ ಬಹಳ ಕಷ್ಟವೆನಿಸಲಿಲ್ಲ ಎಂದರು ಪ್ರಿಯದರ್ಶನ್ ಮತ್ತು ಹರೀಶ್ ಬಿಮಾನಿ.
ಇಂದು ಎಲ್ಲರ ಕೈಯಲ್ಲೂ ಕ್ಯಾಮರಾ ಬಂದಿದೆ. ಎಲ್ಲರೂ ವಿಡಿಯೋ ಚಿತ್ರೀಕರಿಸುತ್ತಾರೆ. ಆದರೆ ಅದಕ್ಕೊಂದು ವಿನ್ಯಾಸ ಮತ್ತು ಕಥೆ ಕಟ್ಟುವಿಕೆ ಇರುವುದಿಲ್ಲ. ಹಾಗಾಗಿಯೇ ಸಿನಿಮಾಗಳೆನಿಸುವುದಿಲ್ಲ ಎಂಬುದು ಸಮಿತಿಯ ಅಭಿಪ್ರಾಯ.
ಎಲ್ಲರೂ ತಮ್ಮ ಮನಸ್ಸಿನೊಳಗಿರುವುದನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದಾರೆ. ಅದು ಸರಿಯೇ. ಆದರೆ ಅದಕ್ಕೊಂದು ತರಬೇತಿ ಅವಶ್ಯವಿದೆ ಎಂಬುದು ಪ್ರಿಯದರ್ಶನ್ ಅಭಿಪ್ರಾಯ.
ಈ ಬಾರಿ ಭಾರತೀಯ ಪನೋರಮಾ ವಿಭಾಗದ ಕಥಾ ವಿಭಾಗದಲ್ಲಿ 26 ಸಿನಿಮಾಗಳು ಹಾಗೂ ಕಥೇತರ ವಿಭಾಗದಲ್ಲಿ 15 ಸಿನಿಮಾಗಳು ಪ್ರದರ್ಶಿತವಾಗುತ್ತಿವೆ. ಕನ್ನಡದ ರಂಗನಾಯಕಿ ಘದಯಾಳ್ ಪದ್ಮನಾಭನ್ ನಿರ್ದೇಶನ] ಇದೇ ವಿಭಾಗದಲ್ಲಿ ಪ್ರದರ್ಶಿತವಾಗುತ್ತಿದೆ.
ಕಾಶ್ಮೀರಿ ಭಾಷೆಯ ನೂರೆ, ಮರಾಠಿಯ ಫೋಟೋ ಫ್ರೇಮ್, ಬೋಗ್ರಾ ಅಲ್ಲದೇ ಮಲಯಾಳಂ, ಬಂಗಾಳಿ, ಖಾಸಿ ಮತ್ತಿತರ ಭಾರತೀಯ ಭಾಷಾ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು
MUST WATCH
ಹೊಸ ಸೇರ್ಪಡೆ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ